News Hour: ಹೊಸ ಸಂಸತ್ತಿನ ನೆತ್ತಿಯಲ್ಲಿ ಸಿಂಹ ಘರ್ಜನೆ: ಮೂಲ ಲಾಂಛನ ವಿರೂಪಗೊಳಿಸಿತಾ ಮೋದಿ ಸರ್ಕಾರ?

News Hour: ಹೊಸ ಸಂಸತ್ತಿನ ನೆತ್ತಿಯಲ್ಲಿ ಸಿಂಹ ಘರ್ಜನೆ: ಮೂಲ ಲಾಂಛನ ವಿರೂಪಗೊಳಿಸಿತಾ ಮೋದಿ ಸರ್ಕಾರ?

Published : Jul 12, 2022, 10:34 PM IST

National Emblem Row: ನೂತನ ಸಂಸತ್ ಭವನಕ್ಕೆ ಕಿರೀಟ ಎನ್ನುವಂತೆ ನಿನ್ನೆಯಷ್ಟೇ ಕಂಚಿನ ರಾಷ್ಟ್ರ ಲಾಂಛನವನ್ನ ಪ್ರಧಾನಿ ಮೋದಿ ಅನಾವರಣ ಗೊಳಿಸಿದ್ದರು. 

ನವದೆಹಲಿ (ಜು. 12): ನೂತನ ಸಂಸತ್ ಭವನಕ್ಕೆ ಕಿರೀಟ ಎನ್ನುವಂತೆ ನಿನ್ನೆಯಷ್ಟೇ ಕಂಚಿನ ರಾಷ್ಟ್ರ ಲಾಂಛನವನ್ನ ಪ್ರಧಾನಿ ಮೋದಿ ಅನಾವರಣ ಗೊಳಿಸಿದ್ದರು. ರಾಷ್ಟ್ರೀಯ ಲಾಂಛನವನ್ನು ಮಾರ್ಪಡಿಸಲಾಗಿದೆ ಮತ್ತು ಅವಮಾನಿಸಲಾಗಿದೆ ಅನ್ನೋದು ವಿಪಕ್ಷಗಳ ಪ್ರಮುಖ ಆರೋಪ. ಸಾಮಾನ್ಯವಾಗಿ ರಾಷ್ಟ್ರ ಲಾಂಛನದಲ್ಲಿರುವ ಸಿಂಹಗಳು ಸೌಮ್ಯ ಸಂದೇಶ ಸಾರುತ್ತವೆ. ಆದರೆ ಈ ಹೊಸ ಶಿಲ್ಪದಲ್ಲಿ ‘ನರಭಕ್ಷಕ ಪ್ರವೃತ್ತಿ’ ರೀತಿಯಲ್ಲಿ ಬಿಂಬಿಸಲಾಗಿದೆ. ಸಾಮಾನ್ಯ ಲಾಂಛನದಲ್ಲಿ ಸಿಂಹದ ಹಲ್ಲುಗಳು ಕಾಣಿಸಲ್ಲ. ಆದ್ರಿಲ್ಲಿ ಸಿಂಹದ ಹಲ್ಲುಗಳು ಕಾಣಿಸುತ್ತಿವೆ ಎಂದು ಆರ್ಜೆಡಿ ಸೇರಿ ವಿಪಕ್ಷಗಳು ಆರೋಪಿಸಿವೆ. ಅಷ್ಟು ಮಾತ್ರವಲ್ಲ ಕಾರ್ಯಾಂಗದ ಮುಖ್ಯಸ್ಥರಾಗಿರುವ ಪ್ರಧಾನಿ, ಈ ಲಾಂಛನ ಅನಾವರಣ ಮಾಡಿದ್ದು ಎಷ್ಟು ಸರಿ ಅನ್ನೋ ಪ್ರಶ್ನೆಯನ್ನೂ ಹಾಕಿದ್ದಾರೆ.

ಮೂಲ ರಾಷ್ಟ್ರೀಯ ಲಾಂಛನದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸಂಸತ್ ಮೇಲಿರುವುದು 3D ಮಾದರಿಯ ಲಾಂಛನ. ಇದಕ್ಕೆ 2D ಫೋಟೋ ಮೂಲಕ ಹೋಲಿಕೆ ಮಾಡಲಾಗುತ್ತಿದೆಯಷ್ಟೇ. ಸಾರನಾಥದಲ್ಲಿನ ಮೂಲ ಮಾದರಿಯಂತೆ ಲಾಂಛನ ರಚನೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ ಬಿಜೆಪಿ, ಮೋದಿ ಈ ಲಾಂಛನ ಬಿಡುಗಡೆ ಮಾಡಿದ್ದೇಕೆ ಅನ್ನೋದಕ್ಕೂ ಸ್ಪಷ್ಟನೆ ಕೊಟ್ಟಿದೆ.

ಇದನ್ನೂ ನೋಡಿ: ಹೊಸ ಸಂಸತ್‌ ಭವನದ ಮೇಲೆ ರಾರಾಜಿಸಲಿದೆ ರಾಷ್ಟ್ರೀಯ ಲಾಂಛನ, ಪ್ರಧಾನಿಯಿಂದ ಅನಾವರಣ

ನೂತನ ಸಂಸತ್ ಭವನ ಶಂಕುಸ್ಥಾಪನೆ ಮಾಡಿದವರೂ ಪ್ರಧಾನಿಗಳೇ, ಈಗ ಲಾಛಂನವನ್ನೂ ಅವರೇ ಉದ್ಘಾಟಿಸಿದ್ದಾರೆ. ಈ ವೇಳೆ ಸ್ಪೀಕರ್ ಓಂ ಬಿರ್ಲಾ ಉಪಸ್ಥಿತರಿದ್ದರು. ಕೇಂದ್ರ ನಗರಾಭಿವೃದ್ಧಿ ಇಲಾಖೆಯಿಂದ ಸಂಸತ್ ನಿರ್ಮಾಣ ಮಾಡಲಾಗುತ್ತಿದೆ. 

ಕಟ್ಟಡ ಪೂರ್ಣವಾದ ಬಳಿಕ ಸಂಸತ್ ಆಡಳಿತಕ್ಕೆ ಕಟ್ಟಡ ಹಸ್ತಾಂತರಿಸಲಾಗುತ್ತೆ. ಆದರೆ ವಿರೋಧಪಕ್ಷಗಳು ರಾಜಕೀಯ ಕಾರಣಕ್ಕೆ ಟೀಕೆ ಮಾಡುತ್ತಿವೆ ಎಂದು ಬಿಜೆಪಿ ಸ್ಪಷ್ಟನೆ ನೀಡಿದೆ ಬಿಜೆಪಿ ಏನೇ ಸ್ಪಷ್ಟನೆ ನೀಡಿದರು ವಿಪಕ್ಷಗಳು ಒಪ್ಪುತ್ತಿಲ್ಲ. ಮೂಲ ರಾಷ್ಟ್ರ ಲಾಂಛನದ ಜೊತೆಗೆ ನೂತನ ಲಾಂಛನದ ಫೋಟೋ ಹಾಕಿ ವಿವಾದವನ್ನು ದೊಡ್ಡದು ಮಾಡುತ್ತಾ ರಾಜಕೀಯಕ್ಕೆ ಇಳಿದಿವೆ. 

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Read more