News Hour: ಹೊಸ ಸಂಸತ್ತಿನ ನೆತ್ತಿಯಲ್ಲಿ ಸಿಂಹ ಘರ್ಜನೆ: ಮೂಲ ಲಾಂಛನ ವಿರೂಪಗೊಳಿಸಿತಾ ಮೋದಿ ಸರ್ಕಾರ?

News Hour: ಹೊಸ ಸಂಸತ್ತಿನ ನೆತ್ತಿಯಲ್ಲಿ ಸಿಂಹ ಘರ್ಜನೆ: ಮೂಲ ಲಾಂಛನ ವಿರೂಪಗೊಳಿಸಿತಾ ಮೋದಿ ಸರ್ಕಾರ?

Published : Jul 12, 2022, 10:34 PM IST

National Emblem Row: ನೂತನ ಸಂಸತ್ ಭವನಕ್ಕೆ ಕಿರೀಟ ಎನ್ನುವಂತೆ ನಿನ್ನೆಯಷ್ಟೇ ಕಂಚಿನ ರಾಷ್ಟ್ರ ಲಾಂಛನವನ್ನ ಪ್ರಧಾನಿ ಮೋದಿ ಅನಾವರಣ ಗೊಳಿಸಿದ್ದರು. 

ನವದೆಹಲಿ (ಜು. 12): ನೂತನ ಸಂಸತ್ ಭವನಕ್ಕೆ ಕಿರೀಟ ಎನ್ನುವಂತೆ ನಿನ್ನೆಯಷ್ಟೇ ಕಂಚಿನ ರಾಷ್ಟ್ರ ಲಾಂಛನವನ್ನ ಪ್ರಧಾನಿ ಮೋದಿ ಅನಾವರಣ ಗೊಳಿಸಿದ್ದರು. ರಾಷ್ಟ್ರೀಯ ಲಾಂಛನವನ್ನು ಮಾರ್ಪಡಿಸಲಾಗಿದೆ ಮತ್ತು ಅವಮಾನಿಸಲಾಗಿದೆ ಅನ್ನೋದು ವಿಪಕ್ಷಗಳ ಪ್ರಮುಖ ಆರೋಪ. ಸಾಮಾನ್ಯವಾಗಿ ರಾಷ್ಟ್ರ ಲಾಂಛನದಲ್ಲಿರುವ ಸಿಂಹಗಳು ಸೌಮ್ಯ ಸಂದೇಶ ಸಾರುತ್ತವೆ. ಆದರೆ ಈ ಹೊಸ ಶಿಲ್ಪದಲ್ಲಿ ‘ನರಭಕ್ಷಕ ಪ್ರವೃತ್ತಿ’ ರೀತಿಯಲ್ಲಿ ಬಿಂಬಿಸಲಾಗಿದೆ. ಸಾಮಾನ್ಯ ಲಾಂಛನದಲ್ಲಿ ಸಿಂಹದ ಹಲ್ಲುಗಳು ಕಾಣಿಸಲ್ಲ. ಆದ್ರಿಲ್ಲಿ ಸಿಂಹದ ಹಲ್ಲುಗಳು ಕಾಣಿಸುತ್ತಿವೆ ಎಂದು ಆರ್ಜೆಡಿ ಸೇರಿ ವಿಪಕ್ಷಗಳು ಆರೋಪಿಸಿವೆ. ಅಷ್ಟು ಮಾತ್ರವಲ್ಲ ಕಾರ್ಯಾಂಗದ ಮುಖ್ಯಸ್ಥರಾಗಿರುವ ಪ್ರಧಾನಿ, ಈ ಲಾಂಛನ ಅನಾವರಣ ಮಾಡಿದ್ದು ಎಷ್ಟು ಸರಿ ಅನ್ನೋ ಪ್ರಶ್ನೆಯನ್ನೂ ಹಾಕಿದ್ದಾರೆ.

ಮೂಲ ರಾಷ್ಟ್ರೀಯ ಲಾಂಛನದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಸಂಸತ್ ಮೇಲಿರುವುದು 3D ಮಾದರಿಯ ಲಾಂಛನ. ಇದಕ್ಕೆ 2D ಫೋಟೋ ಮೂಲಕ ಹೋಲಿಕೆ ಮಾಡಲಾಗುತ್ತಿದೆಯಷ್ಟೇ. ಸಾರನಾಥದಲ್ಲಿನ ಮೂಲ ಮಾದರಿಯಂತೆ ಲಾಂಛನ ರಚನೆ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ ಬಿಜೆಪಿ, ಮೋದಿ ಈ ಲಾಂಛನ ಬಿಡುಗಡೆ ಮಾಡಿದ್ದೇಕೆ ಅನ್ನೋದಕ್ಕೂ ಸ್ಪಷ್ಟನೆ ಕೊಟ್ಟಿದೆ.

ಇದನ್ನೂ ನೋಡಿ: ಹೊಸ ಸಂಸತ್‌ ಭವನದ ಮೇಲೆ ರಾರಾಜಿಸಲಿದೆ ರಾಷ್ಟ್ರೀಯ ಲಾಂಛನ, ಪ್ರಧಾನಿಯಿಂದ ಅನಾವರಣ

ನೂತನ ಸಂಸತ್ ಭವನ ಶಂಕುಸ್ಥಾಪನೆ ಮಾಡಿದವರೂ ಪ್ರಧಾನಿಗಳೇ, ಈಗ ಲಾಛಂನವನ್ನೂ ಅವರೇ ಉದ್ಘಾಟಿಸಿದ್ದಾರೆ. ಈ ವೇಳೆ ಸ್ಪೀಕರ್ ಓಂ ಬಿರ್ಲಾ ಉಪಸ್ಥಿತರಿದ್ದರು. ಕೇಂದ್ರ ನಗರಾಭಿವೃದ್ಧಿ ಇಲಾಖೆಯಿಂದ ಸಂಸತ್ ನಿರ್ಮಾಣ ಮಾಡಲಾಗುತ್ತಿದೆ. 

ಕಟ್ಟಡ ಪೂರ್ಣವಾದ ಬಳಿಕ ಸಂಸತ್ ಆಡಳಿತಕ್ಕೆ ಕಟ್ಟಡ ಹಸ್ತಾಂತರಿಸಲಾಗುತ್ತೆ. ಆದರೆ ವಿರೋಧಪಕ್ಷಗಳು ರಾಜಕೀಯ ಕಾರಣಕ್ಕೆ ಟೀಕೆ ಮಾಡುತ್ತಿವೆ ಎಂದು ಬಿಜೆಪಿ ಸ್ಪಷ್ಟನೆ ನೀಡಿದೆ ಬಿಜೆಪಿ ಏನೇ ಸ್ಪಷ್ಟನೆ ನೀಡಿದರು ವಿಪಕ್ಷಗಳು ಒಪ್ಪುತ್ತಿಲ್ಲ. ಮೂಲ ರಾಷ್ಟ್ರ ಲಾಂಛನದ ಜೊತೆಗೆ ನೂತನ ಲಾಂಛನದ ಫೋಟೋ ಹಾಕಿ ವಿವಾದವನ್ನು ದೊಡ್ಡದು ಮಾಡುತ್ತಾ ರಾಜಕೀಯಕ್ಕೆ ಇಳಿದಿವೆ. 

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more