Jun 26, 2022, 5:40 PM IST
ಮುಂಬೈ(ಜೂ.26): ಮಹಾರಾಷ್ಟ್ರದಲ್ಲಿ ಆರಂಭವಾದ ಬಂಡಾಯ ರಾಜಕೀಯ ತಣಿಯುವ ಲಕ್ಷಣ ಕಾಣುತ್ತಿಲ್ಲ. ಹೌದು ಈಗಾಗಲೇ ಏಕನಾಥ್ ಶಿಂಧೆ ಸೇರಿ ಬರೋಬ್ಬರಿ 40 ಶಾಸಕರು ಉದ್ಧವ್ ಪಕ್ಷಕ್ಕೆ ಗುಡ್ಬೈ ಹೇಳುವ ಹಂತದಲ್ಲಿದ್ದಾರೆ. ಹೀಗಿರುವಾಗಲೇ ಮತ್ತೊಬ್ಬ ಶಾಸಕ ಬಂಡಾಯದ ಬಾವುಟ ಹಿಡಿದಿದ್ದಾರೆ.
ಹೌದು ಸಚಿವ ಉದಯ್ ಸಾಮಂತ್ ಉದ್ಧವ್ ಬಣದಿಂದ ಶಿಂಧೆ ಬಣಕ್ಕೆ ಜಿಗಿದಿದ್ದಾರೆ. ಹೀಗಿರುವಾಗ ಉದ್ಧವ್ ಬಣದ ಸಂಖ್ಯಾಬಲ ಕುಸಿಯುತ್ತಲೇ ಇದೆ. ಈ ಮೂಲಕ ಮಹಾರಾಷ್ಟ್ರ ರಾಜಕೀಯದಲ್ಲಿ ಹೈಡ್ರಾಮಾ ಮುಂದುವರೆದಿದ್ದು ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ. ಈ ಮಧ್ಯೆ ಮುಂಬೈನಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿದೆ.