ಸಂಸತ್ ಸಂಚಿನ ರಹಸ್ಯವೇನು ಗೊತ್ತಾ..? ಯಾರು ಈ ಆಗಂತುಕರು? ಏನಿವರ ಅಸಲಿ ಕತೆ!

ಸಂಸತ್ ಸಂಚಿನ ರಹಸ್ಯವೇನು ಗೊತ್ತಾ..? ಯಾರು ಈ ಆಗಂತುಕರು? ಏನಿವರ ಅಸಲಿ ಕತೆ!

Published : Dec 15, 2023, 02:50 PM IST

ಭಾಷೆ ಬೇರೆ.. ರಾಜ್ಯ ಬೇರೆ.. ಕೆಲಸ ಬೇರೆ.. ಒಂದಾಗಿದ್ದು ಹೇಗೆ?
ದುಷ್ಟಕರ್ಮಿಗಳನ್ನೆಲ್ಲಾ ಒಂದುಗೂಡಿಸಿದ್ದ ಕೊಂಡಿ ಯಾವುದು ?
13 ಡಿಸಂಬರ್.. 7 ಆರೋಪಿಗಳು.. 1.6 ವರ್ಷದ ತಯಾರಿ..!
 

ಆಕೆ ನಿರುದ್ಯೋಗಿ,ಈತ ಇಂಜಿನಿಯರ್, ಒಬ್ಬ ಕಲಾವಿದ. ಇನ್ನೊಬ್ಬ ಆಟೋ ಡ್ರೈವರ್. ಪ್ರತಿಯೊಬ್ಬರ ಭಾಷೆ ಬೇರೆ. ರಾಜ್ಯ ಬೇರೆ.. ಕೆಲಸ ಬೇರೆ. ಡಿಸಂಬರ್ 13,ಈ ಡೇಟ್ ಕೇಳಿದ್ರೆ ಸಾಕು ಸಂಸತ್(Parliment) ಕಂಪಿಸಿಬಿಡುತ್ತೆ. ಯಾಕಂದ್ರೆ, ಎರಡು ದಶಕಗಳ ಹಿಂದೆ, ಇದೇ ದಿನ, ದೇಶವೇ ಬೆಚ್ಚಿಬೀಳುವಂಥಾ ಘಟನೆ ನಡೆದಿತ್ತು. ಅವತ್ತು ಭಾರತದ(India) ಭವ್ಯದೇವಾಲಯ ಅಂತ ಪರಿಗಣಿಸಲಾಗೋ, ಸಂಸತ್ ಮೇಲೆ ಲಷ್ಕರ್ ಎ ತೊಯ್ಬಾದ ಉಗ್ರಗಾಮಿಗಳು ದಾಳಿ ನಡೆಸಿದ್ರು. ದಾಳಿ(Attack) ನಡೆಸಿದ್ದ ಆ ಐದೂ ಉಗ್ರ ಸರ್ಪಗಳನ್ನೂ ನಮ್ಮವರು ಸಂಹಾರವನ್ನೇನೋ ಮಾಡಿದ್ರು.. ಆದ್ರೆ ದುರ್ದೈವವಶಾತ್, ನಮ್ಮ 9 ಮಂದಿ ಮಡಿದಿದ್ರು. ಒಂದು ವೇಳೆ, ಅವತ್ತೇನಾದ್ರೂ ಸ್ವಲ್ಪ ಯಾಮಾರಿದ್ದಿದ್ರೂ, ಸಂಸತ್ ಒಳಗಡೆ ಊಹೆ ಮಾಡೋಕೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗ್ತಾ ಇತ್ತು. ಈ ಘಟನೆ ಇನ್ನೂ ಹಸಿಹಸಿಯಾಗಿ, ಇನ್ನೂ ಒಣಗದ ಗಾಯವಾಗಿ ಕಾಡ್ತಾ ಇದೆ.. ಅಷ್ಟ್ರಲ್ಲೇ, ಅದೇ ಡಿಸಂಬರ್ 13ಕ್ಕೆ, ನಡೆಯಬಾರದ ಘಟನೆ ನಡೆದುಹೋಯ್ತು. ಹೆಚ್ಚು ಕಮ್ಮಿ ಪ್ರಧಾನಿ ನರೇಂದ್ರ ಮೋದಿ(Narendra modi) ಅವರು ಪಟ್ಟದ ಏರಿದಾಗಿನಿಂದಲೂ, ಭಯೋತ್ಪಾದಕ ಘಟನೆಗಳಿಗೆ ಅವಕಾಶವೇ ಇಲ್ಲದಂತಾಗಿದೆ. ಹಾಗೂ ಹೀಗೂ ಜಮ್ಮು ಕಾಶ್ಮೀರದಲ್ಲಿ ಉಗ್ರರು ಪ್ರತಾಪ ಮೆರೆಯೋ ಪ್ರಯತ್ನ ಮಾಡ್ತಾ ಇದ್ರು.ಈಗ ಅದೂ ಕೂಡ ನಿಂತುಹೋಗಿದೆ. ಹಾಗಾಗಿನೇ, ದೇಶವೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದೆ. ಆದ್ರೆ, ಚಳಿಗಾಲದ ಅಧಿವೇಶನದ ವೇಳೆ ನಡೆದ ಈ ದಾಳಿ ಇದ್ಯಲ್ಲಾ, ಇದು ಮಾತ್ರ, ಆ ನೆಮ್ಮದಿಗೇ ಕೊಳ್ಳಿ ಇಟ್ಟಿದೆ.

ಇದನ್ನೂ ವೀಕ್ಷಿಸಿ:  ದುಡ್ಡು ಕೇಳಲಿಲ್ಲ ಒಡವೆ ಮುಟ್ಟಲಿಲ್ಲ..! ಜಾತ್ರೆಗೆ ಹೋಗಿದ್ದ ವೃದ್ಧೆಯ ಕತ್ತು ಸೀಳಿದಾತ ಯಾರು ?

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more