ಈಗ ಕಣಿವೆ ರಾಜ್ಯದಲ್ಲೂ ಮೈತ್ರಿ ಬಿರುಕು..! I.N.D.I.A ಕ್ಕೆ ಫಾರೂಕ್ ವಿದಾಯ..!

ಈಗ ಕಣಿವೆ ರಾಜ್ಯದಲ್ಲೂ ಮೈತ್ರಿ ಬಿರುಕು..! I.N.D.I.A ಕ್ಕೆ ಫಾರೂಕ್ ವಿದಾಯ..!

Published : Feb 17, 2024, 05:46 PM IST

ಮೋದಿ ಜೊತೆ ನಿಲ್ಲುತ್ತಾ ನ್ಯಾಷನಲ್ ಕಾನ್ಫರೆನ್ಸ್..!
ಕಾಶ್ಮೀರದಲ್ಲಿ ಕೈ ಕೊಟ್ಟ ಫಾರೂಕ್ ಅಬ್ದುಲ್ಲಾ..!
ದಿನೇ ದಿನೇ ಬಲಹೀನವಾಗುತ್ತಿದೆ I.N.D.I.A..!

ಪ್ರಧಾನಿ ನರೇಂದ್ರ ಮೋದಿಯನ್ನ ಮಣಿಸಬೇಕು ಅನ್ನೋ ಏಕಮಾತ್ರ ಉದ್ದೇಶದಿಂದ ಹುಟ್ಟಿಕೊಂಡಿದ್ದ ಇಂಡಿಯಾ ಒಕ್ಕೂಟ(INDIA Alliance) ದಿನೇ ದಿನೇ ಅಶಕ್ತವಾಗ್ತಾ ಇದೆ. ಒಕ್ಕೂಟದ ಸೃಷ್ಟಿಗೆ ಕಾರಣರಗಾಗಿದ್ದ ನಿತೀಶ್ ಕುಮಾರ್ , ಕಾಂಗ್ರೆಸ್(Congress) ಜೊತೆಗಿನ ಸಖ್ಯವನ್ನ ತೊರೆದು ಕಮಲ ಹಿಡಿದು ನಿಂತಿದ್ದಾರೆ. ಮಮತಾ ಬ್ಯಾನರ್ಜಿ, ಅರವಿಂದ್ ಕೇಜ್ರಿವಾಲ್ ನಂತರ ಫಾರೂಕ್ ಅಬ್ದುಲ್ಲಾ ಕೂಡ ಕಾಶ್ಮೀರದಲ್ಲಿ ಇಂಡಿ ಒಕ್ಕೂಟಕ್ಕೆ ಕೈ ಎತ್ತಿದ್ದಾರೆ. 2024ರ ಲೋಕಸಭಾ ಚುನಾವಣೆಯಲ್ಲಿ(Loksabha) ಮೋದಿಯನ್ನ ಸೋಲಿಸಿ ಮಹಾಮೈತ್ರಿಕೂಟವನ್ನ ಅಧಿಕಾರಕ್ಕೆ ತರುವ ಉದ್ದೇಶದಿಂದ ಸೃಷ್ಟಿಯಾದ ಒಕ್ಕೂಟ ಇಂಡಿ ಅಲಾಯನ್ಸ್. ಕಾಂಗ್ರೆಸ್ , ಆಮ್ ಆದ್ಮಿ, ಟಿಎಂಸಿ, ಜೆಡಿಯು ಹೀಗೆ ದೇಶದ ಪ್ರಮುಖ ಪಕ್ಷಗಳೆಲ್ಲಾ ಸೇರಿ ಮಾಡಿಕೊಂಡಿದ್ದ ಮೈತ್ರಿಗೆ ಯಾರೋ ಮಾಟ ಮಾಡಿದಂತಿದೆ. ದಿನಕ್ಕೊಂದು ವಿಕೆಟ್ ಉದುರ್ತಾನೆ ಇದೆ. ಇಂಡಿ ಅಲಾಯನ್ಸ್ ಸೃಷ್ಟಿಗೆ ಮುಖ್ಯ ಕಾರಣರಾಗಿದ್ದ ನಿತೀಶ್ ಕುಮಾರ್ ಗಂಟು ಮೂಟೆ ಕಟ್ಟಿಕೊಂಡು ಹೋಗಿ ಬಿಜೆಪಿ(BJP) ಜೊತೆಗೆ ನಂಟು ಮಾಡಿಕೊಂಡಿದ್ದಾರೆ. ಅತ್ತ ಬಂಗಾಳದಲ್ಲಿ ದೀದಿ ನಾವೇ ಎಲ್ಲಾ ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡೋದು ಅನ್ನೋ ಮೂಲಕ ಕಾಂಗ್ರೆಸ್ಸಿಗೆ ಬಿಸಿ ತಾಗಿಸಿದ್ದಾರೆ..ಇತ್ತ ದೆಹಲಿ ಹಾಗೂ ಪಂಜಾಬಿನಲ್ಲಿ ಆಡಳಿತದಲ್ಲಿರೋ ಆಮ್ ಆದ್ಮಿ ಪಕ್ಷವೂ ಅದೇ ರಾಗವನ್ನ ಹಾಡಿದೆ.

ಇದನ್ನೂ ವೀಕ್ಷಿಸಿ:  ಸುವರ್ಣ ಸಾಧಕರು ಪ್ರಶಸ್ತಿಗೆ ಭಾಜನರಾದ ವಿಜಯಪುರದ ಡಾ. ಶಿವಾನಂದ ಕೆಲೂರ್‌

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
Read more