Yogi Adityanath: ಯೋಗಿಯ ನಯಾ ಉತ್ತರ ಪ್ರದೇಶ..! ರಕ್ತಸಿಕ್ತ ರಾಜ್ಯದಲ್ಲಿ ನಿರ್ಭೀತ ವಾತಾವರಣ..!

Yogi Adityanath: ಯೋಗಿಯ ನಯಾ ಉತ್ತರ ಪ್ರದೇಶ..! ರಕ್ತಸಿಕ್ತ ರಾಜ್ಯದಲ್ಲಿ ನಿರ್ಭೀತ ವಾತಾವರಣ..!

Published : Mar 31, 2024, 11:49 AM IST

ನುಡಿದಂತೆ ‘ಪುಡಿ’ ಮಾಡ್ತಿರೋ ಬುಲ್ಡೋಜರ್ ಬಾಬಾ..!
ಯೋಗಿ ಬಂದ ಮೇಲೆ ನಡೆದ ಎನ್‌ಕೌಂಟ್‌ಗಳು ಎಷ್ಟು ..?
ಖೈದಿಗಳು ಪೆರೋಲ್ ಬೇಡವೇ ಬೇಡ ಎನ್ನುತ್ತಿರೋದೇಕೆ..?

ಮಾಫಿಯಾವನ್ನ ಮಣ್ಣಲ್ಲಿ ಹೂತು ಹಾಕುತ್ತೇನೆ. ಇದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್(Yogi Adityanath) ಅವರು ಸದನದಲ್ಲಿ ಅಬ್ಬರಿಸಿದ ಪರಿ. ನುಡಿದಂತೆ ನಡೆಯುತ್ತಿರೋ ಯೋಗಿ ಆದಿತ್ಯನಾಥ್ ಸರ್ಕಾರ ಡಾನ್‌ಗಳು ಎಂದು ಮೆರೆಯೋರ ಪಾಲಿಗೆ ಅಕ್ಷರಷಃ ಸಿಂಹಸ್ವಪ್ನವಾಗಿದೆ. ವಿಕಾಸ್ ದುಬೆ, ಅತೀಕ್ ಅಹ್ಮದ್, ಅನ್ಸಾರಿ ಇವರಿಗೆ ಯೋಗಿ ಅವಧಿಯಲ್ಲಿ ನರಕ ಸಿಕ್ಕಿದೆ. ಬಾಲ್ಯದಲ್ಲೇ ಸನ್ಯಾಸತ್ವ ಸ್ವೀಕಾರ ಮಾಡಿದ್ದ 26 ವರ್ಷದ ತರುಣ ಸಂತ ಲೋಕಸಭೆಗೆ(Lok Sabha) ಆಯ್ಕೆಯಾಗಿದ್ದ. ಮೀಸೆ ಬರದ ಗಡ್ಡವಿರದ ಹುಡುಗ ರಾಜಕಾರಣದಲ್ಲೇನು ಮಾಡಿಯಾನು ಅನ್ನೋದು ಸುತ್ತಮುತ್ತಲೂ ಇದ್ದವರ ಅಭಿಪ್ರಾಯವಾಗಿತ್ತು. ಆ ಹುಡುಗ ಇಡೀ ಭಾರತವೇ ತಿರುಗಿ ನೋಡುವಂತೆ ರಾಜ್ಯವನ್ನ ಆಳಬಹುದು ಅನ್ನೋ ಅಂದಾಜು ಯಾರಿಗೂ ಇರ್ಲಿಲ್ಲಾ. ಉತ್ತರ ಪ್ರದೇಶವೆನ್ನೋ(Uttar Pradesh) ಅತಿ ದೊಡ್ಡ ಹಾಗೂ ಅಪರಾಧದಲ್ಲೇ ಕುಖ್ಯಾತಿಯಾಗಿದ್ದ ರಾಜ್ಯದ ಮುಖ್ಯಮಂತ್ರಿಯಾಗಿ ಇಂದು ಯೋಗಿ ಮಾಡೆಲ್ ಅನ್ನೋದು ಜನಜನಿತವಾಗೋ ಹಾಗೇ ಮಾಡಿದ್ದಾನೆ ಅದೇ ಸಂತ. ಯೋಗಿ ಸಾಗಿ ಬಂದ ಹಾದಿ ಸುಲಭವಾಗಿತ್ತಾ.? ಖಂಡಿತಾ ಇಲ್ಲ.. ಸದನದಲ್ಲೇ ಅಸಹಾಯಕತೆಯಿಂದ ಕಣ್ಣಿರಿಟ್ಟಿದ್ದರು ಯೋಗಿ ಆದಿತ್ಯನಾಥ್. 2007ರಲ್ಲಿ ಯೋಗಿ ಆದಿತ್ಯನಾಥ್ ಗೋರಕ್ ಪುರದ(Gorakh Pur) ಸಂಸದರಾಗಿದ್ದ ಸಮಯವದು.ಆ ಸಮಯದಲ್ಲಿ ಸಮಾಜವಾದಿ ಪಕ್ಷದ ಅಧಿಕಾರವಿತ್ತು. ಮಾಫಿಯಾಗಳ ಮೇಲೆ ನಿಯಂತ್ರಣ ಸಾಧಿಸೋಕೆ ಸರ್ಕಾರ ಸಂಪೂರ್ಣ ವಿಫಲತೆಯನ್ನ ಕಂಡಿತ್ತು. ಅತೀಕ್ ಅಹ್ಮದ್ , ಮುಕ್ತಾರ್ ಅನ್ಸಾರಿಯಂತಹ ಗೂಂಡಾಗಳು ರಾಜಕಾರಣದಲ್ಲಿ ಇದ್ದರು.

ಇದನ್ನೂ ವೀಕ್ಷಿಸಿ: Watch Video: ಹೇಗಿದೆ ಕೋಲಾರ ಮತದಾರರ ಲೆಕ್ಕಾಚಾರ..? ಅಸೆಂಬ್ಲಿಯಲ್ಲಿನ ಹೊಂದಾಣಿಕೆ ಲೋಕಸಭೆ ಹೊತ್ತಿಗೆ ಮಾಯವಾಗಿದ್ದೇಕೆ?

24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
Read more