Gyanvapi case ಶಾಂತಿಯಿಂದ ಎಲ್ಲವನ್ನೂ ಒಪ್ಪಿಕೊಳ್ಳಿ, ಇದರಲ್ಲಿ ಸೋಲು-ಗೆಲುವಿನ ಪ್ರಶ್ನೆಯಿಲ್ಲ: ವಿಎಚ್‌ಪಿ

Sep 12, 2022, 6:31 PM IST

ನವದೆಹಲಿ (ಸೆ.12): ಜ್ಞಾನವಾಪಿ ಸುಂದರ್ ಶೃಂಗಾರ್ ಗೌರಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾರಣಾಸಿ ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿರುವ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್, ಇದನ್ನು ಗೆಲುವು ಅಥವಾ ಸೋಲು ಎಂದು ಪರಿಗಣಿಸುವ ಬದಲು ಎಲ್ಲರೂ ಶಾಂತವಾಗಿ ಸ್ವೀಕರಿಸಬೇಕು ಎಂದು ಹೇಳಿದ್ದಾರೆ.

“ವಾರಣಾಸಿ ದೇವಸ್ಥಾನದ ದಾರಿಯಲ್ಲಿ ಮೊದಲ ತಡೆಗೋಡೆ ದಾಟಿರುವುದರಿಂದ ಈ ನಿರ್ಧಾರವು ಮಹತ್ವದ್ದಾಗಿದೆ. ಈ ಪ್ರಕರಣದಲ್ಲಿ ಪೂಜಾ ಸ್ಥಳಗಳ ಕಾಯಿದೆಯನ್ನು ಅನ್ವಯಿಸುವುದಿಲ್ಲ ಎಂದು ನಮಗೆ ಮೊದಲೇ ತಿಳಿದಿತ್ತು ಮತ್ತು ಪ್ರಕರಣವನ್ನು ವಿಸ್ತರಿಸಲು ಮಾತ್ರ ಇದನ್ನು ಮಾಡಲಾಗಿದೆ. ಆದರೆ ನ್ಯಾಯಾಲಯ ಅದನ್ನು ಬದಿಗೊತ್ತಿದೆ,'' ಎಂದರು.

Gyanvapi ಆವರಣದಲ್ಲಿ ಪೂಜೆಗೆ ಅನುಮತಿ ಕೋರಿದ್ದ ಅರ್ಜಿ ಮಾನ್ಯವಷ್ಟೇ, ಬೇರೆನೂ ಇಲ್ಲ; ರಜಾಕ್‌

“ಸತ್ಯಗಳ ಆಧಾರದ ಮೇಲೆ ಪ್ರಕರಣವನ್ನು ಆಲಿಸಲಾಗುವುದು ಮತ್ತು ನಾವು ಗೆಲ್ಲುತ್ತೇವೆ ಎಂದು ನಮಗೆ ಖಚಿತವಾಗಿದೆ. ಇದು ಧಾರ್ಮಿಕ ವಿಷಯ ಎಂದು ನಾನು ಒಪ್ಪಿಕೊಳ್ಳುತ್ತೇನೆ ಮತ್ತು ಪ್ರಕರಣವನ್ನು ಗೆಲುವು ಅಥವಾ ಸೋಲು ಎಂದು ಭಾವಿಸುವ ಬದಲು ಎಲ್ಲರೂ ಶಾಂತಿಯುತವಾಗಿ ಒಪ್ಪಿಕೊಳ್ಳಬೇಕು. ಶಿವನ ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಆಶಿಸುತ್ತೇನೆ ಎಂದು ಅವರು ಹೇಳಿದರು.