ಧರ್ಮ ವಿರೋಧಿ ನೀತಿಯ ಬಗ್ಗೆ I.N.D.I.A ಮೈತ್ರಿಕೂಟದ ನಿಲುವೇನು..?

ಧರ್ಮ ವಿರೋಧಿ ನೀತಿಯ ಬಗ್ಗೆ I.N.D.I.A ಮೈತ್ರಿಕೂಟದ ನಿಲುವೇನು..?

Published : Sep 05, 2023, 12:51 PM IST

ಹಿಂದೂ ವಿರೋಧಿ ರಾಜಕಾರಣ ಶುರು ಮಾಡಿತಾ I.N.D.I.A. ಮೈತ್ರಿಕೂಟ..?
ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆಗೆ ಭುಗಿಲೆದ್ದ ಆಕ್ರೋಶ..!
ಹಿಂದೂ ವಿರೋಧಿ ನೀತಿಗೆ I.N.D.I.A. ಒಕ್ಕೂಟದ ಸಮ್ಮತಿ ಇದೆಯಾ..?
 

ಸನಾತನ ಧರ್ಮವನ್ನು ವಿರೋಧಿಸೋದಷ್ಟೇ ಅಲ್ಲ, ಸಂಪೂರ್ಣ ನಿರ್ಮೂಲನೆ ಮಾಡ್ಬೇಕಂತೆ. ಹೀಗಂತ ತಮಿಳುನಾಡು ಮುಖ್ಯಮಂತ್ರಿಯ ಮಗ, ಡಿಎಂಕೆ ನಾಯಕನ ಉದಯನಿಧಿ(Udhayanidhi Stalin) ಹೇಳಿದ್ದಾರೆ. ಇಂಡಿಯನ್ ನ್ಯಾಷನಲ್ ಡೆಮಾಕ್ರಟಿಕ್ ಇನ್'ಕ್ಲೂಸಿವ್ ಅಲಯನ್ಸ್. ಅಂದ್ರೆ ಭಾರತೀಯ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಳಗೊಳ್ಳುವಿಕೆಯ ಒಕ್ಕೂಟ. ಹೀಗಂತ ಜಬರ್ದಸ್ತ್ ಹೆಸರಿಟ್ಟುಕೊಂಡು ಮೋದಿ(Narendra modi) ವಿರುದ್ಧ ಯುದ್ಧ ಸಾರಿರೋ ಇಂಡಿಯಾ ಮೈತ್ರಿಕೂಟಕ್ಕೀಗ ಧರ್ಮಸಂಕಟದ ಸಂಕಷ್ಟ. ಇಂಡಿಯಾ(I.N.D.I.A.) ಒಕ್ಕೂಟದಲ್ಲಿರೋ ಒಂದೊಂದೇ ಪಕ್ಷಗಳು ಹಿಂದೂ ಧರ್ಮ ವಿರೋಧಿ ಹೇಳಿಕೆಗಳನ್ನು ಕೊಡ್ತಾ ಇವೆ. ಒಬ್ಬೊಬ್ಬರದ್ದು ಒಂದೊಂದು ಹೇಳಿಕೆ, ಒಂದೊಂದು ವಿವಾದ. ಲೋಕಸಭಾ ಚುನಾವಣೆ ಹತ್ತಿರ ಬರ್ತಾ ಇದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರ್ತಾ ಇರೋದು ನಿಮ್ಗೆ ಗೊತ್ತೇ ಇದೆ. ಪ್ರಧಾನಿ ಮೋದಿಯವರ ಹ್ಯಾಟ್ರಿಕ್ ದಿಗ್ವಿಜಯಕ್ಕೆ ಬ್ರೇಕ್ ಹಾಕಲೇಬೇಕು ಅಂತ ಹೊರಟಿರೋ ವಿರೋಧ ಪಕ್ಷಗಳು, ಇಂಡಿಯಾ ಹೆಸರಲ್ಲಿ ಮೈತ್ರಿಕೂಟವನ್ನು ರಚಿಸಿ ಮೋದಿ ವಿರುದ್ಧ ರಣಕಹಳೆ ಮೊಳಗಿಸಿ ಬಿಟ್ಟಿವೆ. ಕಾಂಗ್ರೆಸ್, ಟಿಎಂಸಿ, ಎನ್'ಸಿಪಿ, ಆರ್'ಜೆಡಿ, ಜೆಡಿಯು, ಆಮ್ ಆದ್ಮಿ ಪಾರ್ಟಿ ಸೇರಿದಂತೆ ಇಂಡಿಯಾ ಮೈತ್ರಿಕೂಟದಲ್ಲಿ 25ಕ್ಕೂ ಹೆಚ್ಚು ಪಕ್ಷಗಳಿದ್ದಾವೆ. ಒಂದೊಂದು ದಾರಿಯಲ್ಲಿದ್ದ ಪಕ್ಷಗಳೆಲ್ಲಾ ಮೈತ್ರಿಕೂಟದ ಹೆಸರಲ್ಲಿ ಒಂದಾಗಿವೆ ನಿಜ. ಆದ್ರೆ ಹುಟ್ಟುಗುಣ ಸುಟ್ರೂ ಹೋಗಲ್ಲ ಅನ್ನೋ ಮಾತೇ ಇದ್ಯಲ್ಲಾ.. ಆ ಮಾತಿಗೆ ತಕ್ಕಂತೆ ಮೈತ್ರಿಕೂಟದ ಪಕ್ಷಗಳು ನಡೆದು ಕೊಳ್ತಾ ಇವೆ. ಹಿಂದೂ ಧರ್ಮಕ್ಕೆ ಅವಮಾನ ಮಾಡುವಂಥಾ ಹೇಳಿಕೆಗಳನ್ನು ಒಬ್ಬೊಬ್ಬರೇ ನೀಡ್ತಾ ಇದ್ದಾರೆ. 

ಇದನ್ನೂ ವೀಕ್ಷಿಸಿ:  ಮಿತಿಮೀರಿದ ಅಧಿಕಾರಿಯ ಆಟಾಟೋಪ ! ಭುಜದ ಮೇಲೆ IPS ಲೋಗೋ, ಕೈಯಲ್ಲಿ ರೇಜರ್..!

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Read more