ಧರ್ಮ ವಿರೋಧಿ ನೀತಿಯ ಬಗ್ಗೆ I.N.D.I.A ಮೈತ್ರಿಕೂಟದ ನಿಲುವೇನು..?

ಧರ್ಮ ವಿರೋಧಿ ನೀತಿಯ ಬಗ್ಗೆ I.N.D.I.A ಮೈತ್ರಿಕೂಟದ ನಿಲುವೇನು..?

Published : Sep 05, 2023, 12:51 PM IST

ಹಿಂದೂ ವಿರೋಧಿ ರಾಜಕಾರಣ ಶುರು ಮಾಡಿತಾ I.N.D.I.A. ಮೈತ್ರಿಕೂಟ..?
ಉದಯನಿಧಿ ಸ್ಟಾಲಿನ್ ವಿವಾದಾತ್ಮಕ ಹೇಳಿಕೆಗೆ ಭುಗಿಲೆದ್ದ ಆಕ್ರೋಶ..!
ಹಿಂದೂ ವಿರೋಧಿ ನೀತಿಗೆ I.N.D.I.A. ಒಕ್ಕೂಟದ ಸಮ್ಮತಿ ಇದೆಯಾ..?
 

ಸನಾತನ ಧರ್ಮವನ್ನು ವಿರೋಧಿಸೋದಷ್ಟೇ ಅಲ್ಲ, ಸಂಪೂರ್ಣ ನಿರ್ಮೂಲನೆ ಮಾಡ್ಬೇಕಂತೆ. ಹೀಗಂತ ತಮಿಳುನಾಡು ಮುಖ್ಯಮಂತ್ರಿಯ ಮಗ, ಡಿಎಂಕೆ ನಾಯಕನ ಉದಯನಿಧಿ(Udhayanidhi Stalin) ಹೇಳಿದ್ದಾರೆ. ಇಂಡಿಯನ್ ನ್ಯಾಷನಲ್ ಡೆಮಾಕ್ರಟಿಕ್ ಇನ್'ಕ್ಲೂಸಿವ್ ಅಲಯನ್ಸ್. ಅಂದ್ರೆ ಭಾರತೀಯ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಳಗೊಳ್ಳುವಿಕೆಯ ಒಕ್ಕೂಟ. ಹೀಗಂತ ಜಬರ್ದಸ್ತ್ ಹೆಸರಿಟ್ಟುಕೊಂಡು ಮೋದಿ(Narendra modi) ವಿರುದ್ಧ ಯುದ್ಧ ಸಾರಿರೋ ಇಂಡಿಯಾ ಮೈತ್ರಿಕೂಟಕ್ಕೀಗ ಧರ್ಮಸಂಕಟದ ಸಂಕಷ್ಟ. ಇಂಡಿಯಾ(I.N.D.I.A.) ಒಕ್ಕೂಟದಲ್ಲಿರೋ ಒಂದೊಂದೇ ಪಕ್ಷಗಳು ಹಿಂದೂ ಧರ್ಮ ವಿರೋಧಿ ಹೇಳಿಕೆಗಳನ್ನು ಕೊಡ್ತಾ ಇವೆ. ಒಬ್ಬೊಬ್ಬರದ್ದು ಒಂದೊಂದು ಹೇಳಿಕೆ, ಒಂದೊಂದು ವಿವಾದ. ಲೋಕಸಭಾ ಚುನಾವಣೆ ಹತ್ತಿರ ಬರ್ತಾ ಇದ್ದಂತೆ ರಾಜಕೀಯ ಚಟುವಟಿಕೆಗಳು ಗರಿಗೆದರ್ತಾ ಇರೋದು ನಿಮ್ಗೆ ಗೊತ್ತೇ ಇದೆ. ಪ್ರಧಾನಿ ಮೋದಿಯವರ ಹ್ಯಾಟ್ರಿಕ್ ದಿಗ್ವಿಜಯಕ್ಕೆ ಬ್ರೇಕ್ ಹಾಕಲೇಬೇಕು ಅಂತ ಹೊರಟಿರೋ ವಿರೋಧ ಪಕ್ಷಗಳು, ಇಂಡಿಯಾ ಹೆಸರಲ್ಲಿ ಮೈತ್ರಿಕೂಟವನ್ನು ರಚಿಸಿ ಮೋದಿ ವಿರುದ್ಧ ರಣಕಹಳೆ ಮೊಳಗಿಸಿ ಬಿಟ್ಟಿವೆ. ಕಾಂಗ್ರೆಸ್, ಟಿಎಂಸಿ, ಎನ್'ಸಿಪಿ, ಆರ್'ಜೆಡಿ, ಜೆಡಿಯು, ಆಮ್ ಆದ್ಮಿ ಪಾರ್ಟಿ ಸೇರಿದಂತೆ ಇಂಡಿಯಾ ಮೈತ್ರಿಕೂಟದಲ್ಲಿ 25ಕ್ಕೂ ಹೆಚ್ಚು ಪಕ್ಷಗಳಿದ್ದಾವೆ. ಒಂದೊಂದು ದಾರಿಯಲ್ಲಿದ್ದ ಪಕ್ಷಗಳೆಲ್ಲಾ ಮೈತ್ರಿಕೂಟದ ಹೆಸರಲ್ಲಿ ಒಂದಾಗಿವೆ ನಿಜ. ಆದ್ರೆ ಹುಟ್ಟುಗುಣ ಸುಟ್ರೂ ಹೋಗಲ್ಲ ಅನ್ನೋ ಮಾತೇ ಇದ್ಯಲ್ಲಾ.. ಆ ಮಾತಿಗೆ ತಕ್ಕಂತೆ ಮೈತ್ರಿಕೂಟದ ಪಕ್ಷಗಳು ನಡೆದು ಕೊಳ್ತಾ ಇವೆ. ಹಿಂದೂ ಧರ್ಮಕ್ಕೆ ಅವಮಾನ ಮಾಡುವಂಥಾ ಹೇಳಿಕೆಗಳನ್ನು ಒಬ್ಬೊಬ್ಬರೇ ನೀಡ್ತಾ ಇದ್ದಾರೆ. 

ಇದನ್ನೂ ವೀಕ್ಷಿಸಿ:  ಮಿತಿಮೀರಿದ ಅಧಿಕಾರಿಯ ಆಟಾಟೋಪ ! ಭುಜದ ಮೇಲೆ IPS ಲೋಗೋ, ಕೈಯಲ್ಲಿ ರೇಜರ್..!

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more