Panama Papers Leak: ಐಶ್‌ಗೆ ಇ.ಡಿ ಟೆನ್ಷನ್, ಸಂಸತ್‌ನಲ್ಲಿ ಬಿಜೆಪಿಗರಿಗೆ ಹಿಡಿಶಾಪ ಹಾಕಿದ ಅತ್ತೆ!

Panama Papers Leak: ಐಶ್‌ಗೆ ಇ.ಡಿ ಟೆನ್ಷನ್, ಸಂಸತ್‌ನಲ್ಲಿ ಬಿಜೆಪಿಗರಿಗೆ ಹಿಡಿಶಾಪ ಹಾಕಿದ ಅತ್ತೆ!

Suvarna News   | Asianet News
Published : Dec 22, 2021, 05:18 PM IST

 2016ರಲ್ಲಿ ಬೆಳಕಿಗೆ ಬಂದಿದ್ದ ಪನಾಮಾ ಪೇಪ​ರ್ಸ್ (Panama Papers) ತೆರಿಗೆ ವಂಚನೆ ಹಗರಣ ಸಂಬಂಧ, ನಟಿ ಐಶ್ವರ್ಯಾ ರೈ (Aishwarya Rai)  ಜಾರಿ ನಿರ್ದೇಶನಾಲಯದ (ED) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು.

ಬೆಂಗಳೂರು (ಡಿ. 22): 2016ರಲ್ಲಿ ಬೆಳಕಿಗೆ ಬಂದಿದ್ದ ಪನಾಮಾ ಪೇಪ​ರ್ಸ್ (Panama Papers) ತೆರಿಗೆ ವಂಚನೆ ಹಗರಣ ಸಂಬಂಧ, ನಟಿ ಐಶ್ವರ್ಯಾ ರೈ (Aishwarya Rai)  ಜಾರಿ ನಿರ್ದೇಶನಾಲಯದ (ED) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಅಧಿಕಾರಿಗಳು, ತೆರಿಗೆ ವಂಚನೆಗೆ ನೆರವು ನೀಡುವ ದೇಶಗಳಲ್ಲಿ ಕಂಪನಿ ಆರಂಭಿಸಿದ ಬಗ್ಗೆ, ಅಲ್ಲಿನ ಹೂಡಿಕೆ, ವಿದೇಶಗಳಿಂದ ಬಂದ ಆದಾಯದ ಬಗ್ಗೆ ಪ್ರಶ್ನೆ ಮಾಡಿ, ಫೆಮಾ ಕಾಯ್ದೆಯಡಿ ನಟಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. 

ಬಿಜೆಪಿ ಸದಸ್ಯರು ವೈಯಕ್ತಿಕ ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೇ ತಾಳ್ಮೆ ಕಳೆದುಕೊಂಡ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್‌ (Jaya Bacchan) ‘ಬಿಜೆಪಿಗರ ಕೆಟ್ಟದಿನಗಳು ಶೀಘ್ರದಲ್ಲಿಯೇ ಆರಂಭವಾಗಲಿವೆ’ ಎಂದು ಹಿಡಿಶಾಪ ಹಾಕಿದರು. ಇದೇ ವೇಳೆ, ‘ಯಾರೊಬ್ಬರ ಮೇಲೂ ವೈಯಕ್ತಿಕ ಟೀಕೆ ಸಲ್ಲ. ಸಂಸತ್ತಿನಲ್ಲಿ ಏನು ನಡೆಯಿತೋ ಅದು ದುರದೃಷ್ಟಕರ. ಅವರು ಮಾತನಾಡಿದ ಬಗ್ಗೆ ಸಭಾಪತಿ ಸಹ ಪ್ರಶ್ನಿಸಲಿಲ್ಲ’ ಎಂದು ಬೇಸರ ಹೊರಹಾಕಿದರು.

ವಾಷಿಂಗ್ಟನ್‌ ಮೂಲದ ಜಾಗತಿಕ ತನಿಖಾ ಪತ್ರಕರ್ತರ ಒಕ್ಕೂಟವೂ, 2016ರಲ್ಲಿ ಪನಾಮಾ ದೇಶದ ಮೊಸ್ಸಾಕ್‌ ಫೋನ್ಸೆಕಾ ಎಂಬ ಕಾನೂನು ಸಂಸ್ಥೆಯ ದಾಖಲೆಗಳನ್ನು ಆಧರಿಸಿ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿತ್ತು. ಅದರಲ್ಲಿ ಹೇಗೆ ರಾಜಕಾರಣಿಗಳು, ಉದ್ಯಮಿಗಳು, ನಟರು, ಕ್ರೀಡಾಪಟುಗಳು, ಖ್ಯಾತನಾಮರು, ತೆರಿಗೆ ವಂಚನೆಗೆ ನೆರವು ನೀಡುವ ದೇಶಗಳಲ್ಲಿ ಹಣ ಹೂಡಿಕೆ ಮಾಡಿ ತಮ್ಮ ದೇಶಗಳಲ್ಲಿ ತೆರಿಗೆ ವಂಚಿಸುತ್ತಿದ್ದಾರೆ ಎಂಬ ವಿಷಯವನ್ನು ಬಹಿರಂಗ ಮಾಡಿತ್ತು.

 

20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
19:44Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
18:19ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
45:03ಕಿಚ್ಚು ಹೊತ್ತಿಸಿದ ‘ಸಂಚಾರ ಸಾಥಿ​’ ಆ್ಯಪ್; ನಾಯಿ ಇಂದಿನ ಮುಖ್ಯ ವಿಷಯ ಎಂದು ರಾಹುಲ್ ವ್ಯಂಗ್ಯ
01:49Viral Video: ಹೈದ್ರಾಬಾದ್‌ನಲ್ಲಿ ಅಮಾನವೀಯ ಕೃತ್ಯ, ಪುಟ್ಟ ಬಾಲಕಿಯ ಮೇಲೆ ಶಾಲೆಯ ಆಯಾ ಕ್ರೌರ್ಯ!
20:02ಮೋದಿ ಮಾರ್ಗ.. ಕುಮಾರ ಪರ್ವ: ಆತ್ಮನಿರ್ಭರ ಹೆಜ್ಜೆ.. ನಮೋ ಗುರಿಗೆ ಎಚ್​ಡಿಕೆ ಸಾಥ್​​!
20:35Ditwah Cyclone: ಕಾಡುವ ಮಳೆ, ನಡುಗುವು ಭೂಮಿ: ಕಡಲಿನಿಂದ ಕೇಡಿನ ಸಂದೇಶ!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
22:45ಸೌದಿಯಲ್ಲಿ ಭಾರತೀಯ ಉಮ್ರಾ ಯಾತ್ರಿಗಳ ದುರಂತ ಅಂತ್ಯ: ಅಗ್ನಿವ್ಯೂಹದಿಂದ ಪಾರಾದ ಆ ಒಬ್ಬ ಯಾರು?
01:30ಮಹಾರಾಷ್ಟ್ರ: ಡಿಜೆ ವಿಚಾರಕ್ಕೆ ವರನಿಗೆ ಚಾಕು ಇರಿತ, ಡ್ರೋನ್‌ ಮೂಲಕ 2 ಕಿ.ಮೀ ಆರೋಪಿಗಳ ಚೇಸಿಂಗ್!
Read more