Panama Papers Leak: ಐಶ್‌ಗೆ ಇ.ಡಿ ಟೆನ್ಷನ್, ಸಂಸತ್‌ನಲ್ಲಿ ಬಿಜೆಪಿಗರಿಗೆ ಹಿಡಿಶಾಪ ಹಾಕಿದ ಅತ್ತೆ!

Panama Papers Leak: ಐಶ್‌ಗೆ ಇ.ಡಿ ಟೆನ್ಷನ್, ಸಂಸತ್‌ನಲ್ಲಿ ಬಿಜೆಪಿಗರಿಗೆ ಹಿಡಿಶಾಪ ಹಾಕಿದ ಅತ್ತೆ!

Suvarna News   | Asianet News
Published : Dec 22, 2021, 05:18 PM IST

 2016ರಲ್ಲಿ ಬೆಳಕಿಗೆ ಬಂದಿದ್ದ ಪನಾಮಾ ಪೇಪ​ರ್ಸ್ (Panama Papers) ತೆರಿಗೆ ವಂಚನೆ ಹಗರಣ ಸಂಬಂಧ, ನಟಿ ಐಶ್ವರ್ಯಾ ರೈ (Aishwarya Rai)  ಜಾರಿ ನಿರ್ದೇಶನಾಲಯದ (ED) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು.

ಬೆಂಗಳೂರು (ಡಿ. 22): 2016ರಲ್ಲಿ ಬೆಳಕಿಗೆ ಬಂದಿದ್ದ ಪನಾಮಾ ಪೇಪ​ರ್ಸ್ (Panama Papers) ತೆರಿಗೆ ವಂಚನೆ ಹಗರಣ ಸಂಬಂಧ, ನಟಿ ಐಶ್ವರ್ಯಾ ರೈ (Aishwarya Rai)  ಜಾರಿ ನಿರ್ದೇಶನಾಲಯದ (ED) ಕಚೇರಿಗೆ ವಿಚಾರಣೆಗೆ ಹಾಜರಾಗಿದ್ದರು. ಈ ವೇಳೆ ಅಧಿಕಾರಿಗಳು, ತೆರಿಗೆ ವಂಚನೆಗೆ ನೆರವು ನೀಡುವ ದೇಶಗಳಲ್ಲಿ ಕಂಪನಿ ಆರಂಭಿಸಿದ ಬಗ್ಗೆ, ಅಲ್ಲಿನ ಹೂಡಿಕೆ, ವಿದೇಶಗಳಿಂದ ಬಂದ ಆದಾಯದ ಬಗ್ಗೆ ಪ್ರಶ್ನೆ ಮಾಡಿ, ಫೆಮಾ ಕಾಯ್ದೆಯಡಿ ನಟಿಯ ಹೇಳಿಕೆ ದಾಖಲಿಸಿಕೊಂಡಿದ್ದಾರೆ. 

ಬಿಜೆಪಿ ಸದಸ್ಯರು ವೈಯಕ್ತಿಕ ವಿಚಾರ ಪ್ರಸ್ತಾಪಿಸುತ್ತಿದ್ದಂತೆಯೇ ತಾಳ್ಮೆ ಕಳೆದುಕೊಂಡ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್‌ (Jaya Bacchan) ‘ಬಿಜೆಪಿಗರ ಕೆಟ್ಟದಿನಗಳು ಶೀಘ್ರದಲ್ಲಿಯೇ ಆರಂಭವಾಗಲಿವೆ’ ಎಂದು ಹಿಡಿಶಾಪ ಹಾಕಿದರು. ಇದೇ ವೇಳೆ, ‘ಯಾರೊಬ್ಬರ ಮೇಲೂ ವೈಯಕ್ತಿಕ ಟೀಕೆ ಸಲ್ಲ. ಸಂಸತ್ತಿನಲ್ಲಿ ಏನು ನಡೆಯಿತೋ ಅದು ದುರದೃಷ್ಟಕರ. ಅವರು ಮಾತನಾಡಿದ ಬಗ್ಗೆ ಸಭಾಪತಿ ಸಹ ಪ್ರಶ್ನಿಸಲಿಲ್ಲ’ ಎಂದು ಬೇಸರ ಹೊರಹಾಕಿದರು.

ವಾಷಿಂಗ್ಟನ್‌ ಮೂಲದ ಜಾಗತಿಕ ತನಿಖಾ ಪತ್ರಕರ್ತರ ಒಕ್ಕೂಟವೂ, 2016ರಲ್ಲಿ ಪನಾಮಾ ದೇಶದ ಮೊಸ್ಸಾಕ್‌ ಫೋನ್ಸೆಕಾ ಎಂಬ ಕಾನೂನು ಸಂಸ್ಥೆಯ ದಾಖಲೆಗಳನ್ನು ಆಧರಿಸಿ ಸ್ಫೋಟಕ ಮಾಹಿತಿಯನ್ನು ಬಹಿರಂಗಪಡಿಸಿತ್ತು. ಅದರಲ್ಲಿ ಹೇಗೆ ರಾಜಕಾರಣಿಗಳು, ಉದ್ಯಮಿಗಳು, ನಟರು, ಕ್ರೀಡಾಪಟುಗಳು, ಖ್ಯಾತನಾಮರು, ತೆರಿಗೆ ವಂಚನೆಗೆ ನೆರವು ನೀಡುವ ದೇಶಗಳಲ್ಲಿ ಹಣ ಹೂಡಿಕೆ ಮಾಡಿ ತಮ್ಮ ದೇಶಗಳಲ್ಲಿ ತೆರಿಗೆ ವಂಚಿಸುತ್ತಿದ್ದಾರೆ ಎಂಬ ವಿಷಯವನ್ನು ಬಹಿರಂಗ ಮಾಡಿತ್ತು.

 

18:54ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?
30:39‘ದೇಶಕ್ಕೆ ಆರ್ಥಿಕ ತೂಫಾನ್ ಬರಲಿದೆ.. ದೇಶ ಮಾರಿದ್ದಾರೆ’ ಪ್ರಧಾನಿ ಮೋದಿ ದೇಶದ್ರೋಹಿ ಎಂದು ರಾಹುಲ್ ವಿವಾದ!
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
47:39ಸೋಷಿಯಲ್ ಮೀಡಿಯಾದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ಕೋಲಾಹಲ: GenZ ಹೋರಾಟವೋ, ಬರೀ ಕ್ರೇಜೋ?
20:58ರಾಜೀವ್ ಗಾಂಧಿ ಹತ್ಯೆ ಮಾಡಿದ್ದ LTTE ಪ್ರಭಾಕರನ್ ಸ್ಮರಿಸಿದ ತಮಿಳುನಾಡು ಸಿಎಂ ವಿಜಯ್: ಕಾಂಗ್ರೆಸ್‌ಗೆ ಇಕ್ಕಟ್ಟು!
45:25ಸಾಮಾನ್ಯ ಜನರ ಜೇಬಿಗೆ ಕೈ ಹಾಕಿದ ಮೋದಿ ಸರ್ಕಾರ: ಮುಂದೈತಾ ಮಾರಿಹಬ್ಬ?
20:46ಕನಸಿಗೆ ಎದುರಾಯ್ತು ಚತುರ್ಮುಖ ಕಂಟಕ! ಭಾರತದ ಖಜಾನೆ ಖಾಲಿ, ಬಂಗಾರವೇ ವಿಲನ್!
22:50ದಳಪತಿ ಹೊಡೆತಕ್ಕೆ ಅಮ್ಮನ ಕೋಟೆ ಛಿದ್ರ, ವಿಜಯ್‌ಗೆ ಜೈ ಎಂದ ಜಯಲಲಿತಾ ಪಕ್ಷದ 30 ಶಾಸಕರು
21:28ಸಾಲ ಮಾಡಿ ತುಪ್ಪ ತಿನ್ನಿಸಬೇಕಾ ಮುಖ್ಯಮಂತ್ರಿ ವಿಜಯ್? ಏನ್ ಮಾಡ್ತಾರೆ ದಳಪತಿ ?
19:23₹10 ಲಕ್ಷ ಕೋಟಿ ಸಾಲದ ಬೆಟ್ಟ.. ಹೊಸ ಸರ್ಕಾರಕ್ಕೆ ಬಿಗ್ ಚಾಲೆಂಜ್: ವಿಜಯ್ ವಿಜಯ ತಂತ್ರವೇನು?
Read more