ವಿಷಬಾಂಬ್ ಬ್ಲಾಸ್ಟ್ ಹಿಂದಿದೆಯಾ ದೆಹಲಿ ರೈತರ ಪಾಲು..? ಬೆಂಗಳೂರಿನಲ್ಲೂ ಏರ್ ಪಾಯ್ಸನ್ ಬಾಂಬ್ ಬ್ಲಾಸ್ಟ್..!

ವಿಷಬಾಂಬ್ ಬ್ಲಾಸ್ಟ್ ಹಿಂದಿದೆಯಾ ದೆಹಲಿ ರೈತರ ಪಾಲು..? ಬೆಂಗಳೂರಿನಲ್ಲೂ ಏರ್ ಪಾಯ್ಸನ್ ಬಾಂಬ್ ಬ್ಲಾಸ್ಟ್..!

Published : Nov 06, 2023, 09:17 AM IST

ದಿನದಿಂದ ದಿನಕ್ಕೆ ಗಬ್ಬೆದ್ದು ಹೋಗ್ತಿದೆ ದೆಹಲಿ ವಾತಾವರಣ..!
ತಾಯಿ ಹೊಟ್ಟೆಯಲ್ಲಿರೋ ಮಗುವಿಗೂ ತಪ್ಪಿದ್ದಲ್ಲ ಅಪಾಯ..!
ಪಾಯ್ಸನ್ ಗ್ಯಾಸ್ ಚೇಂಬರ್ ಆಗ್ಹೋಗಿರುವ ರಾಷ್ಟ್ರ ರಾಜಧಾನಿ..! 

ದೆಹಲಿ.. ಭಾರತದ(India) ರಾಜಧಾನಿ ಮಾತ್ರವಲ್ಲ, ಈ ಪ್ರದೇಶ ಅನೇಕ ಪ್ರಾಚೀನ ಸ್ಮಾರಕಗಳ ನೆಲೆಯಾಗಿದೆ ಕೂಡ. ಅವುಗಳಲ್ಲಿ ಕೋಟೆಗಳು, ಮಸೀದಿಗಳು, ದೇವಾಲಯಗಳು ಮುಂತಾದವು ಸೇರಿವೆ. ಈ ಅದ್ಭುತ ಸ್ಮಾರಕಗಳು ಸುಂದರ ಹಾಗೂ ಬೆರಗುಗೊಳಿಸುವಂತಿದೆ ಅನ್ನುವುದರಲ್ಲಿ ಎರಡು ಮಾತೇ ಇಲ್ಲ. ದೆಹಲಿಯಲ್ಲಿ(Delhi) ನೋಡಬೇಕಾದದ್ದು ತುಂಬಾ ಇದೆ. ಕಣ್ತುಂಬಿಕೊಳ್ಳಬೇಕಾದದ್ದು ಸಾಕಷ್ಟಿದೆ. ಆಕರ್ಷಕವಾದ ಮನಮೋಹಕವಾದ ಪ್ರದೇಶ ದೆಹಲಿ.  ಐತಿಹಾಸಿಕ ಮಹತ್ವದ ಜೊತೆಗೆ ರಾಜಕೀಯ ಮಹತ್ವವನ್ನೂ ಒಗ್ಗೂಡಿಸಿಕೊಂಡಿರೋ ಅತ್ಯದ್ಭುತ ತಾಣ ಈ ದೆಹಲಿ. ಇದೇ ಕಾರಣಕ್ಕೆ, ಬಹುತೇಕರು ದೆಹಲಿಯಲ್ಲೇ ಇರೋದಕ್ಕೆ ಇಷ್ಟ ಪಡ್ತಾರೆ. ದೇಶ ವಿದೇಶಗಳ ಜನರನ್ನ, ಕೈ ಬೀಸಿ ಕರೆಯುತ್ತಿದೆ ದೆಹಲಿ. ಜನ ಸಮೂಹ ಹೆಚ್ಚಾದಂತೆ, ಬೃಹದಾಕಾರವಾಗಿ ಬೆಳೀತಾ ಇದೆ ರಾಷ್ಟ್ರ ರಾಜಧಾನಿ. ಕೆಲವೇ ಕೆಲವು ವರುಷಗಳ ಹಿಂದೆ, ಈ ಪ್ರವಾಸಿ ತಾಣಗಳನ್ನ ನೋಡಲು ದೂರದೂರಿನಿಂದ ಪ್ರವಾಸಿಗರು ಲಕ್ಷಾಂತರ ಸಂಖ್ಯೆಯಲ್ಲಿ ದೆಹಲಿಗೆ ಬರುತ್ತಿದ್ದರು. ಆದರೆ ಈಗ ಇದೇ ದೆಹಲಿಗೆ ಬರೋದಕ್ಕೆ ಜನ ಹಿಂದೇಟು ಹಾಕ್ತಿದ್ದಾರೆ. ಕಾರಣ ಈಗ ದೆಹಲಿಗೆ ಬಂದರೆ ಸಾವೇ ಫಿಕ್ಸ್ ಅನ್ನೊ ಭಯ ಅವರಿಗೆಲ್ಲ ಕಾಡ್ತಿದೆ. ದೆಹಲಿ ಈಗ ಸಾವಿನ ಕೂಪ ಅನ್ನೊ ಭಾವ ಎಲ್ಲರಿಗೂ ಕಾಡ್ತಿದೆ. ಇದೇ ಕಾರಣಕ್ಕೆ ಈಗ ದೆಹಲಿಗೆ ಬರೋ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಕಡಿಮೆ ಆಗ್ತಿದೆ. ಅಷ್ಟೆ ಅಲ್ಲ ಈಗ ದೆಹಲಿಗೆ ಬಂದು ನಿರಾಳವಾಗಿ ಉಸಿರಾಡ್ತೇನೆ ಅಂದರೂ ಕೂಡ ಸಾವು ತಪ್ಪಿದ್ದಲ್ಲ. ಈ ಪ್ರದೇಶ ಅಷ್ಟು ಭಯಾನಕ ಪ್ರದೇಶವಾಗಿ ಬದಲಾಗ್ಹೋಗಿದೆ..  ಅಷ್ಟಕ್ಕೂ ಇಲ್ಲಿ ಅಂಥಹದ್ದು ಏನಾಗ್ತಿದೆ ಅಂತಿರಾ.. ಅಲ್ಲಿ ಪ್ರತಿವರ್ಷ ಛಳಿಗಾಲ ಬಂದರೆ ಸಾಕು ವಿಷಗಾಳಿ(Air pollution) ಬಾಂಬ್ ಬ್ಲಾಸ್ಟ್ ಆಗೋದು ಫಿಕ್ಸ್. ಆ ಬಾಂಬ್ಗೆ ನೂರಾರು ಜನ ಬಲಿ ಆಗ್ಹೋದ್ರೆ. ಇನ್ನೂ ಅನೇಕರಿಗೆ ನರಳಾಡೋ ಕಾಯಿಲೆಯನ್ನ ಅಂಟಿಸಿಬಿಟ್ಟು ಹೋಗಿರುತ್ತೆ.

ಇದನ್ನೂ ವೀಕ್ಷಿಸಿ:  ವಿಶಿಷ್ಟ ಸೇವೆ ಮಾಡಿದ 16 ಜನರಿಗೆ ಅಸಮಾನ್ಯ ಕನ್ನಡಿಗ ಅವಾರ್ಡ್: ಸಮಾಜಕ್ಕೆ ಅನನ್ಯ ಸೇವೆ ಸಲ್ಲಿಸಿದವರಿಗೆ ಪ್ರಶಸ್ತಿ

39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
Read more