ಅಪಾಯ ತಂದೊಡ್ಡಿತಾ ದೇವರ ಕೋಪ..?  ಕತ್ತಲೆ ಕೂಪದಿಂದ ಪಾರಾಗೋಕೆ ಇನ್ನೆಷ್ಟು ಸಮಯ ಬೇಕು..?

ಅಪಾಯ ತಂದೊಡ್ಡಿತಾ ದೇವರ ಕೋಪ..? ಕತ್ತಲೆ ಕೂಪದಿಂದ ಪಾರಾಗೋಕೆ ಇನ್ನೆಷ್ಟು ಸಮಯ ಬೇಕು..?

Published : Nov 22, 2023, 12:40 PM IST

240 ಗಂಟೆಯಿಂದಲೂ ಸುರಂಗ ನರಕದಲ್ಲಿ 41 ಮಂದಿ..!
ಬೌಖ್ನಾಗ್ ಬಾಬಾ ಮೊರೆ ಹೋಗಿದ್ದೇಕೆ  ಆ ಊರಿನ ಜನ..?
ಒಂದು  ಮುನ್ನೆಚ್ಚರಿಕೆ ತಪ್ಪಿಸುತ್ತು ದೊಡ್ಡ ಅನಾಹುತ..?
 

ಒಂದಲ್ಲ..ಎರಡಲ್ಲಾ..ವಾರವಲ್ಲ..ಬರೋಬ್ಬರಿ 10 ದಿನ..10 ದಿನಗಳಿಂದಲೂ ನಮ್ಮ ದೇಶದ 41 ಮಂದಿ ಕಾರ್ಮಿಕರು ರೌರವ ನರಕ ಅನುಭವಿಸ್ತಾ ಇದಾರೆ.ಈ ಸುರಂಗದೊಳಗೇ(Tunnel) ಸಿಲುಕಿದ್ದಾರೆ, 41 ಮಂದಿ ಕಾರ್ಮಿಕರು. ಕಳೆದ 10 ದಿನಗಳಿಂದಲೂ, ಇಂದಲ್ಲಾ ನಾಳೆ ಸೂರ್ಯೋದಯ ನೋಡ್ತೀವಿ ಅಂತ ಕಾಯ್ತಾ ಇದಾರೆ.. ಆದ್ರೆ ಅವರ ಬಾಳನ್ನ ಕವಿದಿರೋ ಅಂಧಕಾರ ಮಾತ್ರ, ರಾಕ್ಷಸನ ಹಾಗೆ ಆವರಿಸಿಕೊಂಡುಬಿಟ್ಟಿದೆ.. ಬದುಕು ನರಕವಾಗಿದೆ. ಒಂದ್ ಕಡೆ ಸುರಂಗದೊಳಗೆ ಸಿಲುಕಿದವರ ನರಕಯಾತನೆಯಾದ್ರೆ, ಇನ್ನೊಂದ್ ಕಡೆ ತನ್ನ ಕುಟುಂಬದವರ ಪರಿಸ್ಥಿತಿ ನೋಡಿ ಕುಟುಂಬಸ್ಥರು ಯಮ ಹಿಂಸೆ ಅನುಭವಿಸ್ತಾ ಇದಾರೆ.. ನಿಜಕ್ಕೂ ಈ ದುರಂತ ಮಾತ್ರ, ಅತಿ ಭೀಕರ.. ಅತಿ ಭಯಾನಕ.. ಇದನ್ನ ನೋಡ್ತಾ ಕೂತಿರೋ ಭಾರತೀಯರ ಮನಸ್ಸಲ್ಲಿರೋದು ಒಂದೇ ಪ್ರಶ್ನೆ.. ಈ ಸುರಂಗದ ರಕ್ಕಸ ದ್ವಾರ ಯಾವಾಗ ಓಪನ್ ಆಗುತ್ತೆ ಅನ್ನೋದು. ಅವತ್ತು ನವಂಬರ್ 12.. ದೇಶವೆಲ್ಲಾ ದೀಪಾವಳಿ(Deepavali) ಸಂಭ್ರಮದಲ್ಲಿದ್ದ ದಿನ.. ಎಲ್ಲೆಲ್ಲೂ ದೀಪದ ಬೆಳಕು, ಪಟಾಕಿ ಸದ್ದು ಜಗಮಗ ಅಂತಿದ್ದ ದಿನ.. ಆದ್ರೆ ಅದೇ ದಿನ, ಸುಮಾರು 41 ಮಂದಿ ಕಾರ್ಮಿಕರು, ತಮ್ಮ ಕೆಲಸ ಮಾಡೋದಕ್ಕೆ ಅಂತ, ಉತ್ತರಖಾಂಡದ, ಉತ್ತರಕಾಶಿಯ, ಸಿಲ್ಕ್ಯಾರ ಟನಲ್ ಒಳಗೆ ಹೋಗಿದ್ರು.. ಅವತ್ತು ಹೋದೋರು, ಇವತ್ತಿನ ತನಕ ವಾಪಾಸ್ ಬರೋಕೆ ಸಾಧ್ಯವಾಗಿಲ್ಲ. ಉತ್ತರಕಾಶಿಯಲ್ಲಿ(Uttarakashi) ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿ(National high way) ನಿರ್ಮಾಣದ ಸಲುವಾಗಿ ಸುರಂಗ ಮಾರ್ಗ ನಿರ್ಮಾಣ ಮಾಡ್ತಾ ಇದ್ರು.. ಸಿಲ್ಕ್ಯಾರಾ ಮತ್ತು ದಾಂಡಲ್‌ಗಾಂವ್ ಮಧ್ಯೆ  ನಿರ್ಮಾಣ ಮಾಡ್ತಾ ಇದ್ದ ಸುಮಾರು ನಾಲ್ಕೂವರೆ ಕಿ. ಮೀ. ಉದ್ದದ ಸುರಂಗ ಮಾರ್ಗ ಇದು.  ಆದ್ರೆ, ಭಾನುವಾರ ಮುಂಜಾನೆ ಈ ಸುರಂಗ ಮಾರ್ಗದ ಒಂದು ಬದಿ ಕುಸಿದು ಬಿದ್ದಿದೆ.. ಕೆಲಸ ಮಾಡ್ತಿದ್ದ ಕಾರ್ಮಿಕರು ಒಳಗೆ ಸಿಲುಕಿದ್ದಾರೆ.

ಇದನ್ನೂ ವೀಕ್ಷಿಸಿ:  ರಿಯಲ್ ಲೈಫ್‌ನಲ್ಲಿ ಹಸೆಮಣೆ ಏರುತ್ತಿದ್ದಾರೆ ಪ್ರಥಮ್! 'ಫಸ್ಟ್ ನೈಟ್ ವಿತ್ ದೆವ್ವ'ಎಂದ ಒಳ್ಳೆ ಹುಡುಗ !

24:50ಮಹಾರಾಕ್ಷಸ El Nino ಜನ್ಮ ರಹಸ್ಯ ; 2027ರ ಬೇಸಿಗೆಯ ಎಚ್ಚರಿಕೆ ನೀಡದ ವಿಜ್ಞಾನಿಗಳು
20:322029ರ ಮಹಾಭಾರತ: ಜಿರಳೆಗಳೇ ಕಿಂಗ್ ಮೇಕರ್..! Gen Zಗಳಿಗೆ ಕನೆಕ್ಟ್ ಆಗಲು ಹೇಗಿದೆ ರಾಜಕೀಯ ನಾಯಕರ ಪ್ರಯತ್ನ..?
23:17ಪ್ಲಾಸ್ಟಿಕ್ ನೋಟ್‌ಗೆ ಹಣಕಾಸು ಸಚಿವಾಲಯ ಗ್ರೀನ್​​ ಸಿಗ್ನಲ್​​​ ! ಹರಿಯಲ್ಲ, ನೆನೆಯಲ್ಲ, ಕಳ್ಳನೋಟು ಸಾಧ್ಯವಿಲ್ಲ, ಹೇಗಿರುತ್ತೆ ಹೊಸ ಕರೆನ್ಸಿ..?
20:56Suvarna Focus: ಜಂತರ್ ಮಂತರ್‌ನಲ್ಲಿ ನಡೆದಿದ್ದೇನು? ಬೆಚ್ಚಿಬೀಳಿಸಿದ ರಿಪೋರ್ಟ್! ಆಪರೇಷನ್ 2873 ಅಸಲಿ ಸೀಕ್ರೆಟ್?
50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?