ಚಳಿಗಾಲದಲ್ಲಿ ಆರೋಗ್ಯದ ಕಾಳಜಿ ಹೇಗೆ ? ಜಯದೇವ ಆಸ್ಪತ್ರೆಯ ಡಾ.ಸಿಎನ್ ಮಂಜುನಾಥ್ ಏನ್ ಹೇಳ್ತಾರೆ ?

ಚಳಿಗಾಲದಲ್ಲಿ ಆರೋಗ್ಯದ ಕಾಳಜಿ ಹೇಗೆ ? ಜಯದೇವ ಆಸ್ಪತ್ರೆಯ ಡಾ.ಸಿಎನ್ ಮಂಜುನಾಥ್ ಏನ್ ಹೇಳ್ತಾರೆ ?

Published : Jan 11, 2023, 03:39 PM IST

ದೇಶಾದ್ಯಂತ ಚಳಿಯ ಪ್ರಮಾಣ ಹೆಚ್ಚಾಗಿದೆ. ಉತ್ತರ ಭಾರತವಂತೂ ಚಳಿಗೆ ತತ್ತರಿಸಿ ಹೋಗಿದೆ. ರಾಜ್ಯದಲ್ಲೂ ಚಳಿಯ ಪ್ರಮಾಣ ಕಡಿಮೆಯೇನಿಲ್ಲ. ಪತರಗುಟ್ಟಿಸೋ ಚಳಿಯಿಂದ ಜನರು ಹೈರಾಣಾಗಿದ್ದಾರೆ. ಹೀಗಿರುವಾಗ ಕೊರೆವ ಚಳಿಯ ಮಧ್ಯೆ ನಿಮ್ಮ ಆರೋಗ್ಯದ ಬಗ್ಗೆ ಎಚ್ಚರದಿಂದಿರಿ ಅಂತ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿ.ಎನ್ ಮಂಜುನಾಥ್ ಏಷ್ಯಾನೆಟ್ ಸುವರ್ಣ ನ್ಯೂಸ್ ಗೆ ಹೇಳಿದ್ದಾರೆ. 

ದೇಶಾದ್ಯಂತ ವಿಪರೀತ ಚಳಿ ಮೈ ನಡುಗಿಸುತ್ತಿದೆ. ಥರಗುಟ್ಟುವ ಚಳಿಗೆ ಹೃದಯ ಸಂಬಂಧಿ ಖಾಯಿಲೆಗಳು (Heart disease) ಹೆಚ್ಚಾಗ್ತಿದೆ ಅಂತ ಜಯದೇವ ಆಸ್ಪತ್ರೆಯ ನಿರ್ದೇಶಕರಾದ ಡಾ.ಸಿಎನ್ ಮಂಜುನಾಥ್ ಹೇಳಿದ್ದಾರೆ. ಭಾರೀ ಚಳಿ ಹಾಗೂ ಮಂಜು ಮುಸುಕಿದ ವಾತಾವರಣಕ್ಕೆ ಹಾರ್ಟ್ ಅಟ್ಯಾಕ್ ಆಗುವವರ ಸಖ್ಯೆ ದಿನಕ್ಕೆ ಶೇ 4% ಹೆಚ್ಚಳವಾಗಿದೆ. ಹೀಗಾಗಿ ಮಕ್ಕಳು (Children), ವೃದ್ದರು ಎಚ್ಚರದಿಂದಿರಿ ಎಂದು ಎಚ್ಚರಿಸಿದ್ದಾರೆ.

ಈ ಹಿಂದೆ ದಿನಕ್ಕೆ ಜಯದೇವ ಆಸ್ಪತ್ರೆಗೆ 100 ಹೃದಯಘಾತ (Heart attack)ಕ್ಕೊಳಗಾದವರು ಬರ್ತಿದ್ರು. ಆದ್ರೆ ಭಾರೀ ಚಳಿಗೆ ರೋಗಿಗಳ ಸಂಖ್ಯೆ 150ಕ್ಕೂ ಹೆಚ್ಚಾಗ್ತಿದೆ. ವಿಪರೀತ ಚಳಿಗೆ ರಕ್ತದೊತ್ತಡದಲ್ಲಿ ಏರುಪೇರಾಗಿ ರಕ್ತ ಹೆಪ್ಪುಗಟ್ಟಿ ಮೆದುಳು, ಹೃದಯಾಘಾತ ಸಂಭವಿಸುತ್ತಿದೆ. ತೀವ್ರ ಚಳಿ ಪ್ರಾಣಾಪಾಯ ತಂದೊಡ್ಡುವ ಸಾಧ್ಯತೆ ಹೆಚ್ಚು ಎಂದು ಅವರು ಹೇಳಿದ್ದಾರೆ. ಮಾತ್ರವಲ್ಲ, ಚಳಿಗಾಲದಲ್ಲಿ ವಾಕ್ ಮಾಡುವಾಗ ಬೆಚ್ಚನೆಯ ಉಡುಪು, ಮಾಸ್ಕ್ ಧರಿಸ್ಬೇಕು. ವಿಟಮಿನ್ ಯುಕ್ತ ಆಹಾರ (Food) ಸೇವನೆ ಮಾಡೋದು ಮುಖ್ಯ ಎಂದು ಸಿ.ಎನ್ ಮಂಜುನಾಥ್ ಮಾಹಿತಿ ನೀಡಿದ್ದಾರೆ.

24 ಗಂಟೆಯಲ್ಲಿ ಹೃದಯಾಘಾತಕ್ಕೆ 14 ಬಲಿ ಬೆಚ್ಚಿಬೀಳಿಸುತ್ತಿದೆ ಕಾನ್ಪುರದ ಸ್ಥಿತಿ

02:42ಸಿನಿಲೋಕದ ಸುಂದರಿಯರ ಸೌಂದರ್ಯದ ಸೀಕ್ರೆಟ್ಟು, 44ರಲ್ಲೂ ಕರೀನಾ ಕಪೂರ್ ಬ್ಯೂಟಿ ರಹಸ್ಯವಿದು!
02:51ಈಗಲೂ 20ರ ಯುವತಿಯಂತೆ ಕಾಣುವ ಕತ್ರಿನಾ; ಕೋಮಲಾಂಗಿ ಕತ್ರಿನಾ ಬ್ಯೂಟಿ ಸೀಕ್ರೆಟ್ ಏನು ಗೊತ್ತಾ?
05:07ಬೆಂಗಳೂರು 8 ತಿಂಗಳ ಮಗುವಿಗೆ HMPV ಸೋಂಕು, ಇಲ್ಲಿದೆ ಲೇಟೆಸ್ಟ್‌ ಹೆಲ್ತ್‌ ಅಪ್ಡೇಟ್
05:35ಚೀನಾ ವೈರಸ್ ಬಗ್ಗೆ ನಿರ್ಲಕ್ಷ್ಯ ಬೇಡ, ರಾಜ್ಯದ ಜನರಿಗೆ ಸರ್ಕಾರದ ಸೂಚನೆ!
01:35ಲ್ಯುಕೇಮಿಯಾ ಕ್ಯಾನ್ಸರ್‌ಗೆ ಚಿಕಿತ್ಸೆಯೇನು?
01:25ಇಮ್ಯುನೋ ಥೆರಪಿಯಿಂದ ಕ್ಯಾನ್ಸರ್‌ ವಾಸಿಯಾಗುತ್ತಾ?
01:27Cardiac rehabilitation ಎಂದರೇನು, ಹೃದಯದ ಆರೋಗ್ಯಕ್ಕೇನು ಪ್ರಯೋಜನ?
02:39ಸರ್ವಿಕಲ್ ಕ್ಯಾನ್ಸರ್‌ ಎಂದರೇನು? ಕ್ಯಾನ್ಸರ್‌ ತಜ್ಞೆ ಡಾ. ಪ್ರತಿಮಾ ರಾಜ್ ವಿವರಿಸುತ್ತಾರೆ..
01:23ಕ್ಯಾನ್ಸರ್‌ ಇರುವುದನ್ನು ಪತ್ತೆ ಹಚ್ಚುವುದು ಹೇಗೆ?
04:24ಹೃದಯಾಘಾತವಾದ ತಕ್ಷಣ ಹೃದಯದ ಸೆಲ್‌ ಬೇಗ ಸಾಯುವುದಿಲ್ಲ
Read more