ಒಮ್ಮೆ ಪರಶುರಾಮನು 21 ಸಲ ಭೂಮಂಡಲವನ್ನು ಸುತ್ತಿ ಕ್ಷತ್ರಿಯರೇ ಇಲ್ಲದಿರುವ ಹಾಗೆ ಮಾಡುವುದು ಹೇಗೆ ಎಂದು ಕೇಳಿದಾಗ ಶಂಕರರು, ಗಣಪತಿಗೆ ಇಷ್ಟವಾದ ಷಡಾಕ್ಷರ ಮಂತ್ರವನ್ನು ಉಪದೇಶ ಮಾಡುತ್ತಾರೆ. ನಿಯಮಗಳನ್ನು ಹೇಳುತ್ತಾರೆ.
ಒಮ್ಮೆ ಪರಶುರಾಮನು 21 ಸಲ ಭೂಮಂಡಲವನ್ನು ಸುತ್ತಿ ಕ್ಷತ್ರಿಯರೇ ಇಲ್ಲದಿರುವ ಹಾಗೆ ಮಾಡುವುದು ಹೇಗೆ ಎಂದು ಕೇಳಿದಾಗ ಶಂಕರರು, ಗಣಪತಿಗೆ ಇಷ್ಟವಾದ ಷಡಾಕ್ಷರ ಮಂತ್ರವನ್ನು ಉಪದೇಶ ಮಾಡುತ್ತಾರೆ. ನಿಯಮಗಳನ್ನು ಹೇಳುತ್ತಾರೆ. ರಾಮ ಇದನ್ನು ಜಪಿಸು. ಗಣಪತಿ ನಿನಗೆ ಅನುಗ್ರಹಿಸುತ್ತಾನೆ ಎಂದು ಪರಶಿವ ಹೇಳುತ್ತಾನೆ.
ಅದರಂತೆ ಪರಶುರಾಮ ಕೃಷ್ಣಾತೀರಕ್ಕೆ ಬಂದು ತಪಸ್ಸು ಮಾಡುತ್ತಾನೆ. ಅವನ ಭಕ್ತಿಗೆ ಪರವಶನಾದ ಗಣಪತಿ ಪ್ರತ್ಯಕ್ಷನಾಗುತ್ತಾನೆ. ಶತ್ರುವನ್ನು ಮಣಿಸುವ ಪರಶು ಎನ್ನುವ ಅಸ್ತ್ರವನ್ನು ಕರುಣಿಸುತ್ತಾನೆ. ಹಾಗಾಗಿಯೇ ಆತನಿಗೆ ಪರಶುರಾಮ ಎಂದು ಹೆಸರು ಬಂದಿದೆ. ಈ ಕಥೆಯನ್ನು ಗಣಪತಿ ಸಚ್ಚಿದಾನಂದ ಸ್ವಾಮೀಜಿ ವಿವರಿಸಿದ್ದಾರೆ. ಕೇಳಿ.