ಸೂರ್ಯಗ್ರಹಣದ ಬೆನ್ನಲ್ಲೇ ಚಂದ್ರಗ್ರಹಣ: 1000 ವರ್ಷಗಳ ನಂತರ ಮಹಾ ವಿಚಿತ್ರ- ಇದು ಅಪಾಯದ ಮುನ್ಸೂಚನೆಯೇ?

ಸೂರ್ಯಗ್ರಹಣದ ಬೆನ್ನಲ್ಲೇ ಚಂದ್ರಗ್ರಹಣ: 1000 ವರ್ಷಗಳ ನಂತರ ಮಹಾ ವಿಚಿತ್ರ- ಇದು ಅಪಾಯದ ಮುನ್ಸೂಚನೆಯೇ?

Published : Apr 30, 2022, 01:41 PM IST

ಸಾವಿರ ವರ್ಷಗಳ ಬಳಿಕ ಒಂದೇ ಸಾಲಿನಲ್ಲಿ ಬಂದು  ನಿಲ್ಲುತ್ತಿವೆ ಗುರು, ಶುಕ್ರ, ಶನಿ, ಕುಜ ಗ್ರಹಗಳು.. ಸೂರ್ಯಗ್ರಹಣದ ಬೆನ್ನಲ್ಲೇ ಚಂದ್ರಗ್ರಹಣ. ಈ ನಭೋ ವಿಸ್ಮಯಗಳು ಸೃಷ್ಟಿಸೋ ಅಪಾಯ ಎಂಥದ್ದು? ಈ ಗ್ರಹಗತಿಗಳ ಲಾಭ ಯಾರಿಗೆ ಯಾವ ರೀತಿ ಇರಲಿದೆ? 

2022ರ ಈ ವರ್ಷ ಅನೇಕ ವಿಸ್ಮಯಗಳಿಗೆ ಕಾರಣವಾಗಿದೆ. ಅಂಥ ಮತ್ತೊಂದು ವಿಸ್ಮಯ ಈಗ ಗ್ರಹಕೂಟದಲ್ಲಿ ನಡೆಯಲಿದೆ. ಬರೋಬ್ಬರಿ 1000 ವರ್ಷಗಳ ಬಳಿಕ, ನಾಲ್ಕು ಗ್ರಹಗಳು ಒಂದೇ ನೇರಕ್ಕೆ ಬಂದು ನಿಲ್ಲಲಿವೆ. 

1,000 ವರ್ಷಗಳ ನಂತರ, ಏಪ್ರಿಲ್ ಕೊನೆಯ ವಾರದಲ್ಲಿ ಶುಕ್ರ, ಮಂಗಳ, ಗುರು ಮತ್ತು ಶನಿ(Saturn) ಈ ನಾಲ್ಕು ಗ್ರಹಗಳು ಸೂರ್ಯೋದಯಕ್ಕೆ ಒಂದು ಗಂಟೆ ಮೊದಲು ಆಕಾಶದ ಪೂರ್ವ ಭಾಗದಲ್ಲಿ ನೇರ ರೇಖೆಯಲ್ಲಿ ಜೋಡಿಸಿದಂತೆ ಕಾಣೋ ಅಪರೂಪದ ಮತ್ತು ವಿಶಿಷ್ಟ ಖಗೋಳ ಘಟನೆ ಘಟಿಸಿದೆ.

ಇದು ಖಗೋಳ ಶಾಸ್ತ್ರದಲ್ಲಾಗ್ತಾ ಇರೋ ಬದಲಾವಣೆಯಾದ್ರೆ, ಇನ್ನು ಜ್ಯೋತಿಷ ಶಾಸ್ತ್ರ(Astrology)ದಲ್ಲಿ ಮತ್ತೊಂದು ಬಗೆಯ ವಿಸ್ಮಯ ಘಟಿಸುತ್ತಿದೆ. ಅದೆಂದರೆ ಸೂರ್ಯ ಚಂದ್ರಾದಿ 9 ಗ್ರಹಗಳೂ ಏಪ್ರಿಲ್‌ನಲ್ಲಿ ಸಂಚಾರ ನಡೆಸಲಿವೆ. 

2022ರ ವರ್ಷದ ಮೊದಲ ಸೂರ್ಯಗ್ರಹಣ(Solar Eclipse) ಏಪ್ರಿಲ್‌ 30ರಂದು ಸಂಭವಿಸಲಿದೆ. ಈ ದಿನದ ಅಮಾವಾಸ್ಯೆಯನ್ನು  ಶನಿ ಅಮಾವಾಸ್ಯೆ, ಅಕ್ಷಯ ತದಿಗೆ ಅಮಾವಾಸ್ಯೆ ಅಂತೆಲ್ಲ ಕರೆಯುತ್ತಾರೆ.  ಮೇಷ ರಾಶಿಯಲ್ಲಿ ಘಟಿಸ್ತಾ ಇರೋ ಈ ಸೂರ್ಯಗ್ರಹಣ ಹನ್ನೆರಡು ರಾಶಿಗಳ ಮೇಲೂ ಅಗಾಧ ಪರಿಣಾಮ ಬೀರಲಿದೆ.  

Solar Eclipse 2022 Live : ಗ್ರಹಣದ ಈ ದಿನ ಶನಿ ಅಮಾವಾಸ್ಯೆ ಕೂಡಾ!

ಭಾರತದಲ್ಲಿ ಈ ಸೂರ್ಯಗ್ರಹಣ ಗೋಚರವಾಗೋದಿಲ್ಲ, ಹಾಗಾಗಿ ಅದರ ಪ್ರಭಾವದ ಬಗ್ಗೆನೂ ತಲೆಕೆಡಿಸಿಕೊಳ್ಳೋ ಅವಶ್ಯಕತೆ ಇಲ್ಲ ಅಂತಾರೆ ವಿಜ್ಞಾನಿಗಳು. ಹಾಗಿದ್ದೂ, ಗ್ರಹಣ ಜಗತ್ತಿನ ಯಾವುದೇ ಮೂಲೆಯಲ್ಲಿ ನಡೆದರೂ ಅದರ ಎಫೆಕ್ಟ್ ಇದ್ದೇ ಇರುತ್ತೆ. ಹಾಗಾಗಿಯೇ ಎಚ್ಚರಿಕೆಯಿಂದ ಇರಬೇಕು ಅಂತಾರೆ  ಜ್ಯೋತಿಷ ಶಾಸ್ತ್ರಜ್ಞರು.. 

ಆದ್ರೆ, ಇದಕ್ಕಿಂತಾ ದೊಡ್ಡದೊಂದು ಬದಲಾವಣೆ ನಭೋಮಂಡಲದಲ್ಲಿ ಉಂಟಾಗ್ತಾ ಇದೆ.. ಅದರ ಪರಿಣಾಮ ಪ್ರತಿಯೊಬ್ಬರನ್ನು ಕಾಡಲಿದೆ ಅಂತಿದ್ದಾರೆ.. ಆ ಬದಲಾವಣೆ ಏನು? ಅದರ ಪರಿಣಾಮಗಳೇನು ನೋಡೋಣ.

21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
26:57ಡಿಕೆ ಶಿವಕುಮಾರ್ ಸಿಎಂ ಪ್ರಮಾಣವಚನಕ್ಕೆ ಫಿಕ್ಸ್ ಮಹಾ ಮುಹೂರ್ತ? ರಾಜಭವನದಲ್ಲಿ ಭರ್ಜರಿ ಸಿದ್ಧತೆ
24:18ಮೇಲಂತಬೆಟ್ಟು ಗ್ರಾಮದ ನಾಗಬ್ರಹ್ಮ ಕ್ಷೇತ್ರ: ನಾಗದೋಷ–ನಾಗಬಾಧೆಗಳಿಂದ ಮುಕ್ತಿ ನೀಡುವ ಶಕ್ತಿಸನ್ನಿಧಾನ
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
Read more