
ಜೈಲಿನಲ್ಲಿರುವ ದರ್ಶನ್ ಈ ಬಾರಿ ಸಂಪೂರ್ಣ ಬದಲಾಗಿದ್ದಾರೆ. ಕೋಟಿ ಸಂಭಾವನೆ ಪಡೆದು ಸುಖಸಮೃದ್ಧ ಜೀವನ ನಡೆಸುತ್ತಿದ್ದ ದರ್ಶನ್ ಈಗ ಜೈಲು ಜೀವನದಲ್ಲಿ ‘ಅಸಲಿ ದರ್ಶನ’ ಕಂಡಿದ್ದಾರೆ.
ಜೈಲಿನಲ್ಲಿರುವ ದರ್ಶನ್ ಈ ಬಾರಿ ಸಂಪೂರ್ಣ ಬದಲಾಗಿದ್ದಾರೆ. ಕೋಟಿ ಸಂಭಾವನೆ ಪಡೆದು ಸುಖಸಮೃದ್ಧ ಜೀವನ ನಡೆಸುತ್ತಿದ್ದ ದರ್ಶನ್ ಈಗ ಜೈಲು ಜೀವನದಲ್ಲಿ ‘ಅಸಲಿ ದರ್ಶನ’ ಕಂಡಿದ್ದಾರೆ. ಚಾಪೆ ಹಾಸಿ, ಕಂಬಳಿ ಹೊದ್ದು, ತಂಪಿನ ನಡುವೆ ದಿನಗಳನ್ನು ಕಳೆಯುತ್ತಾ, 16 ಪುಸ್ತಕಗಳಲ್ಲಿ ಮಗ್ನರಾಗಿದ್ದಾರೆ. ಸ್ವಾಮಿ ವಿವೇಕಾನಂದರ ಆಧ್ಯಾತ್ಮಿಕ ಗ್ರಂಥಗಳು ದಾಸನ ಮನಸ್ಸಿಗೆ ನೆಮ್ಮದಿ ನೀಡುತ್ತಿವೆ. ಹಾಸಿಗೆ, ದಿಂಬಿಗಾಗಿ ಪರದಾಡುತ್ತಿದ್ದ ದರ್ಶನ್ಗೆ, ಜೈಲು ಜೀವನ ನಶ್ವರತೆ ಅರಿವಿಗೆ ತಂದಿದೆ. ಜೈಲು ದಂಡನೆ ದಾಸನನ್ನು ಭಕ್ತಿ, ಅಧ್ಯಾತ್ಮ ಮತ್ತು ವಿರಕ್ತಿಯತ್ತ ತಳ್ಳಿದೆ.