ತಮಿಳುನಾಡು ಬಿಜೆಪಿಗೆ ಮತ್ತೊಬ್ಬ ಸೂಪರ್ ಸ್ಟಾರ್ ಎಂಟ್ರಿ..? ದಳಪತಿ ವಿಜಯ್‌ಗೆ ಟಕ್ಕರ್ ಕೊಡ್ತಾರಾ..?

ತಮಿಳುನಾಡು ಬಿಜೆಪಿಗೆ ಮತ್ತೊಬ್ಬ ಸೂಪರ್ ಸ್ಟಾರ್ ಎಂಟ್ರಿ..? ದಳಪತಿ ವಿಜಯ್‌ಗೆ ಟಕ್ಕರ್ ಕೊಡ್ತಾರಾ..?

Published : Jun 27, 2025, 04:51 PM ISTUpdated : Jun 27, 2025, 04:52 PM IST

ವಿಜಯ್ ಅಷ್ಟೇ ಅಲ್ಲದೇ ತಮಿಳುನಾಡು ಪಾಲಿಟಿಕ್ಸ್​​ನಲ್ಲಿ ಇನ್ನೂ ಹಲವು ತಾರೆಯರಿದ್ದಾರೆ. ಕಮಲ್ ಹಾಸನ್ ಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಾರೆ. ಖುಷ್ಬು ಭಾರತೀಯ ಜನತಾ ಪಾರ್ಟಿಯಲ್ಲಿದ್ದಾರೆ. ಶರತ್​​ ಕುಮಾರ್ ಕೂಡ ತಮ್ಮದೇ ಪಕ್ಷವನ್ನ ಕಟ್ಟಿ ಅಖಾಡಲ್ಲಿದ್ದಾರೆ. ಈಗ ಮತ್ತೊಬ್ಬ ಸ್ಟಾರ್ ನಟಿ 

ತಮಿಳುನಾಡಿನಲ್ಲಿ ಇನ್ನೂ ಕೆಲವೇ ತಿಂಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಸೋ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಈಗಾಗ್ಲೇ ದಳಪತಿ ವಿಜಯ್ ತಮ್ಮದೇ ಹೊಸ ಪಕ್ಷ ಕಟ್ಟಿ ರಾಜಕೀಯ ಅಖಾಡಕ್ಕೆ ಧುಮುಕಿದ್ದಾರೆ.  ವಿಜಯ್ ಮಾತ್ರ ಅಲ್ಲ ಇನ್ನೂ ಹಲವು ನಟ-ನಟಿಯರು ರಾಜಕೀಯಕ್ಕೆ ಧುಮುಕ್ತಾ ಇದ್ದಾರೆ. ಸದ್ಯ ಪುಟ್ನಂಜಿ ಮೀನಾ ಕೂಡ ಕಮಲ ಮುಡಿದು ರಾಜಕೀಯ ರಂಗಕ್ಕೆ ಇಳದಿದ್ದಾರೆ.

2026ರಲ್ಲಿ ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇನ್ನೂ ಕೆಲವೇ ತಿಂಗಳಲ್ಲಿ ನಡೆಯಲಿರೋ ಎಲೆಕ್ಷನ್ ಬಗ್ಗೆ ಈಗಿನಿಂದಲೂ ಭರ್ಜರಿ ತಯಾರಿ ಶುರುವಾಗಿದೆ. ಸೋ ಸಿನಿರಂಗದಲ್ಲೂ ಈ ಬಗ್ಗೆ ಸಂಚಲನ ಶುರುವಾಗಿದೆ. ತಮಿಳುನಾಡಿನಲ್ಲಿ ಮೊದಲಿಂದಲೂ ರಾಜಕಾರಣಕ್ಕೂ ಸಿನಿಮಾಗೂ ಅವಿನಾಭಾವ ನಂಟು. ತಮಿಳುನಾಡಿನ ಸಿಎಂಗಳಾಗಿ ಮೆರೆದ ಎಂ.ಜಿ.ಆರ್, ಕರುಣಾನಿಧಿ, ಜಯಲಲಿತಾ ಸಿನಿಮಾರಂಗದಿಂದಲೇ ಬಂದವರು.

ಯೆಸ್ ಎಂ.ಜಿ.ಆರ್ , ಕರುಣಾನಿಧಿ, ಜಯಲಲಿಲಾ ಜಾಗವನ್ನ ತುಂಬ್ತಿನಿ ಅಂತ ಈ ಸಾರಿ ದಳಪತಿ ವಿಜಯ್ ಸಜ್ಜಾಗಿದ್ದಾರೆ. ಡಿಎಂಕೆ, ಎಐಎಡಿಎಂಕೆ ನಡುವೆ ತಮ್ಮದೇ ಆದ ಟಿವಿಕೆ ಪಾರ್ಟಿ ಕಟ್ಟಿ ಅಖಾಡಕ್ಕೆ ಇಳಿದಿದ್ದಾರೆ ವಿಜಯ್. ರಾಜಕೀಯಕ್ಕಾಗಿ ಸಿನಿಮಾರಂಗದಿಂದಲೇ ದೂರವಾಗ್ತಾ ಇದ್ದಾರೆ. ಜನನಾಯಗನ್ ವಿಜಯ್ ಅವರ ಕೊನೆ ಚಿತ್ರವಾಗಲಿದೆ.

ವಿಜಯ್ ಅಷ್ಟೇ ಅಲ್ಲದೇ ತಮಿಳುನಾಡು ಪಾಲಿಟಿಕ್ಸ್​​ನಲ್ಲಿ ಇನ್ನೂ ಹಲವು ತಾರೆಯರಿದ್ದಾರೆ. ಕಮಲ್ ಹಾಸನ್   ಡಿಎಂಕೆ ಜೊತೆಗೆ  ಮೈತ್ರಿ ಮಾಡಿಕೊಂಡಿದ್ದಾರೆ. ಖುಷ್ಬು ಭಾರತೀಯ ಜನತಾ ಪಾರ್ಟಿಯಲ್ಲಿದ್ದಾರೆ. ಶರತ್​​ ಕುಮಾರ್ ಕೂಡ ತಮ್ಮದೇ ಪಕ್ಷವನ್ನ ಕಟ್ಟಿ ಅಖಾಡಲ್ಲಿದ್ದಾರೆ. ಇವರೆಲ್ಲರ ನಡುವೆ ಈಗ ಮತ್ತೊಬ್ಬ ಸ್ಟಾರ್ ನಟಿ ರಾಜಕೀಯ ರಂಗಕ್ಕೆ ಧುಮುಕಿದ್ದಾರೆ.

ಹೌದು ನಟಿ ಮೀನಾ ರಾಜಕೀಯಕ್ಕೆ ಬರೋದು ಬಹುತೇಕ ಖಚಿತವಾಗಿದೆ. ಬಾಲನಟಿಯಾಗಿ ಬಣ್ಣದ ದುನಿಯಾಗೆ ಬಂದ ಮೀನಾ ಮುಂದೆ ನಾಯಕನಟಿಯಾಗಿ ಪಂಚಭಾಷಾ ತಾರೆಯರಾಗಿ ಮಿಂಚಿದವರು. ಕನ್ನಡದಲ್ಲೂ ಮೀನಾ ಹಲವು ಚಿತ್ರಗಳನ್ನ ಮಾಡಿದ್ದಾರೆ. ಅದ್ರಲ್ಲೂ ಪುಟ್ನಂಜ ಸಿನಿಮಾದಲ್ಲಿ ರವಿಮಾಮನ ಜೊತೆ ಪುಟ್ನಂಜಿಯಾಗಿ ಇವರು ಮಾಡಿದ ಮೋಡಿ ಮರೆಯೋದುಂಟೇ.

ಪುಟ್ನಂಜ, ಮೊಮ್ಮಗ, ಚೆಲುವೆ, ಸಿಂಹಾದ್ರಿಯ ಸಿಂಹ,  ಸ್ವಾತಿ ಮುತ್ತು , ಶ್ರೀಮಂಜುನಾಥ ಸೇರಿದಂತೆ ಮೀನಾ ಹಲವು ಕನ್ನಡ ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಮೀನಾ ನಟಸಿದ ಕೊನೆ ಕನ್ನಡ ಸಿನಿಮಾ ಮೈ ಆಟೋಗ್ರಾಫ್.

ಮೀನಾ ಇತ್ತೀಚಿಗೆ ಉಪರಾಷ್ಟ್ರಪತಿ ಜಗದೀಪ್ ದಂಖರ್ ಅವರನ್ನ ಭೇಟಿ ಮಾಡಿದ್ರು. ಕಳೆದ ಕೆಲವು ದಿನಗಳಿಂದ ಅನೇಕ ರಾಜಕೀಯ ನಾಯಕರನ್ನ ಭೇಟಿ ಮಾಡಿದ್ದಾರೆ. ಸೋ ಮೀನಾ ನಡೆಗಳನ್ನ ನೋಡಿದವರು ಸದ್ಯದಲ್ಲೇ ಅವರು ಬಿಜೆಪಿ ಸೇರ್ಪಡೆಯಾಗ್ತಾರೆ ಅಂತ ಹೇಳ್ತಾ ಇದ್ದಾರೆ.

ಒಟ್ನಲ್ಲಿ ತಮಿಳುನಾಡಿನ ಸಿನಿಪಾಲಿಟಿಕ್ಸ್​​ನಲ್ಲಿ ಮೀನಾ ತಮ್ಮದೂ ಒಂದು ಅಧ್ಯಾಯ ಓಪನ್ ಮಾಡೋಕೆ ಸಜ್ಜಾಗಿದ್ದಾರೆ. ಮೀನಾ ಕನ್ನಡಿಗರಿಗೂ ಚಿರಪರಿಚಿತೆ. ಸೋ ಕನ್ನಡಿಗರು ಪುಟ್ನಂಜಿಯ ಪಾಲಿಟಿಕ್ಸ್​ಗೆ ಆಲ್ ದಿ ಬೆಸ್ಟ್ ಹೇಳ್ತಾ ಇದ್ದಾರೆ.

ಹೆಚ್ಚಿನ ಮಾಹಿತಿಗೆ ವಿಡಿಯೋ ನೋಡಿ..

02:59ಜಯಪ್ರಕಾಶ್ ಶೆಟ್ಟಿ ನಟನೆ, ಕನ್ನಡ-ತುಳು ಭಾಷೆಯ 'ಬನ' ರಿಲೀಸ್ ಡೇಟ್ ಅನೌನ್ಸ್!
02:04ನೀಟ್ ಪ್ರಶ್ನೆ ಪತ್ರಿಕೆ ಲೀಕ್ ವಿಚಾರವಾಗಿ ಪ್ರಿಯಾಂಕ ಉಪೇಂದ್ರ ಪ್ರತಿಕ್ರಿಯೆ
02:24ನೆಪೋಟಿಸಂ ಬಗ್ಗೆ ಪ್ರಿಯಾಂಕಾ ಉಪೇಂದ್ರ ಹೇಳಿದ್ದೇನು..?!
05:09ಬಿಗ್ ಬಾಸ್ ಮನೆಯಲ್ಲಿ ಕಾವ್ಯನಿಗೆ ಡಾರ್ಲಿಂಗ್ ಎಂದು, ಗಿಲ್ಲಿ ಫ್ಯಾನ್ಸ್ ಕೆಂಗಣಿಗೆ ಗುರಿಯಾದ ವಿನೋದ್ ಗೊಬ್ರಗಾಲ.!
05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
04:57ಅಪ್ಪನ ಆಸೆ.. ಮಗಳ ಕನಸು.. ಅಪ್ಪ ಇಟ್ಟ ಹೆಸರಲ್ಲೇ ಬಿಜಿನೆಸ್​ಶುರು ಮಾಡಿದ ಅಪ್ಪು ಪುತ್ರಿ ವಂದಿತಾ..!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
02:35ಬೆಳ್ಳಿತೆರೆ ಮೇಲೆ ಲಾರ್ಡ್ಸ್ ಅಂಗಳದ ಅಧಿಪತಿ, ‘ದಾದಾ’ಗಿರಿಯ ದಿನಗಳು! Sourav Ganguly ಬಯೋಪಿಕ್‌ ಫಸ್ಟ್ ಲುಕ್ ಔಟ್
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
08:02Toxic Movie: ಲಸ್ಟ್ ಸ್ಟೋರೀಸ್, ಕಬೀರ್ ಸಿಂಗ್ ಆಯ್ತು; ಮದುವೆಯಾಗಿ ಮಗು ಆದ್ರೂ ಕಮ್ಮಿಯಾಗಿಲ್ಲ Kiara Advani ಬ್ಯೂಟಿ
Read more