ಮೈಸೂರು ಮಿರ್ಚಿಯಿಂದ ವೃದ್ಧಾಶ್ರಮಗಳಿಗೆ ಆಹಾರ ಪೂರೈಕೆ

Apr 7, 2020, 3:33 PM IST

ಮೈಸೂರು(ಏ.07): ಕೊರೋನಾ ವೈರಸ್‌ನಿಂದ ಕಂಗೆಟ್ಟ ಗ್ರಾಮದ ಜನರಿಗೆ ನಟಿ, ನಿರ್ಮಾಪಕಿ ಶ್ರುತಿ ನಾಯ್ಡು ನೆರವಾಗಿದ್ದಾರೆ. ಗ್ರಾಮದ ಜನರಿಗೆ ತಿಂಗಳಿಗೆ ಬೇಕಾದ ದಿನಸಿಯನ್ನು ಹಂಚಿದ್ದಾರೆ.

ಮೈಸೂರು ಗ್ರಾಮಾಂತರ ಭಾಗದ ಹಾಡಿಗಳಲ್ಲಿ ಅಲ್ಲಿನ ಬಡ ಜನರಿಗೆ ಆಹಾರ ಪೋರೈಸಿದ್ದಾರೆ. ಈ ಹಿಂದೆ ಕನ್ನಡಪ್ರಭ ಹಾಗೂ ಸುವರ್ಣ ನ್ಯೂಸ್ ಜೊತೆ ಕೈ ಜೋಡಿಸಿ ಸೇವ್‌ ವೈಲ್ಡ್‌ ಲೈಫ್‌ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು.

ಚೀನಾ ಕಂಟೈನರ್‌ನಲ್ಲಿ ಕೂತು ಮೈಸೂರಿಗೆ ಬಂದಿತ್ತಾ ಕರೋನಾ ಕಂಟಕ..?

ಮೈಸೂರು ಮಿರ್ಚಿ ರೆಸ್ಟೋರೆಂಟ್‌ ಕಡೆಯಿಂದಲೂ ವೃದ್ಧಾಶ್ರಮದ ಜನರಿಗೆ, ಅಂಧ ಮಕ್ಕಳಿರುವ ಆಶ್ರಮಗಳಿಗೆ ಆಹಾರ ತಲುಪಿಸುವ ವ್ಯವಸ್ಥೆಯನ್ನೂ ಮಾಡಲಾಗಿದೆ. ಈ ಮೂಲಕ ಶ್ರುತಿ ಅವರು ಲಾಕ್‌ಡೌನ್ ಸಂದರ್ಭ ಜನರಿಗೆ ನೆರವಾಗುತ್ತಿದ್ದಾರೆ.