ಜೂನ್ 1ಕ್ಕೆ ಕಿಚ್ಚನ ಹೊಸ ಸಿನಿಮಾ ಅನೌನ್ಸ್: ಸುದೀಪ್ 46 ಚಿತ್ರಕ್ಕೆ ಆಕ್ಷನ್ ಕಟ್ ಹೇಳೋದ್ಯಾರು?

ಜೂನ್ 1ಕ್ಕೆ ಕಿಚ್ಚನ ಹೊಸ ಸಿನಿಮಾ ಅನೌನ್ಸ್: ಸುದೀಪ್ 46 ಚಿತ್ರಕ್ಕೆ ಆಕ್ಷನ್ ಕಟ್ ಹೇಳೋದ್ಯಾರು?

Published : May 25, 2023, 12:59 PM ISTUpdated : May 25, 2023, 01:00 PM IST

ಪ್ಯಾನ್ ಇಂಡಿಯಾ ಬಾದ್ ಷಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಒಂದು ವರ್ಷದ ಬಳಿಕೆ ಸರ್ಪ್ರೈಸ್ ಸುದ್ದಿಯೊಂದನ್ನ ನಿಮ್ಮ ಮುಂದಿಡುತ್ತಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಬಳಿಕ ಕಿಚ್ಚನ ಮುಂದಿನ ಸ್ಟೆಪ್ ಏನು ಅಂತಿದ್ದವರಿಗೆ ಬಾದ್ ಷಾ ಜೂನ್ 1ಕ್ಕೆ ಉತ್ತರ ಕೊಡುತ್ತಿದ್ದಾರೆ. ಸುದೀಪ್ 46 ಸಿನಿಮಾದ ಫಸ್ಟ್ ಲುಕ್ ಅನೌನ್ಸ್ ಆಗುತ್ತಿದೆ. 

ಪ್ಯಾನ್ ಇಂಡಿಯಾ ಬಾದ್ ಷಾ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಒಂದು ವರ್ಷದ ಬಳಿಕೆ ಸರ್ಪ್ರೈಸ್ ಸುದ್ದಿಯೊಂದನ್ನ ನಿಮ್ಮ ಮುಂದಿಡುತ್ತಿದ್ದಾರೆ. ವಿಕ್ರಾಂತ್ ರೋಣ ಸಿನಿಮಾ ಬಳಿಕ ಕಿಚ್ಚನ ಮುಂದಿನ ಸ್ಟೆಪ್ ಏನು ಅಂತಿದ್ದವರಿಗೆ ಬಾದ್ ಷಾ ಜೂನ್ 1ಕ್ಕೆ ಉತ್ತರ ಕೊಡುತ್ತಿದ್ದಾರೆ. ಸುದೀಪ್ 46 ಸಿನಿಮಾದ ಫಸ್ಟ್ ಲುಕ್ ಅನೌನ್ಸ್ ಆಗುತ್ತಿದೆ. ಹೈದರಾಬಾದ್‌ನಲ್ಲಿ 46 ಸಿನಿಮಾದ ಫಸ್ಟ್ ಲುಕ್ ಫೋಟೋ ಶೂಟ್ ನಡೆದಿದೆ. ಬಾದ್ ಷಾ ಕಿಚ್ಚನ 46 ಸಿನಿಮಾ ಮೇಲೆ ಈಗ ಎಲ್ಲರ ಕಣ್ಣಿದೆ. ವಿಕ್ರಾಂತ್ ರೋಣ ಸಿನಿಮಾದಿಂದ ಸುದೀಪ್ ಪ್ಯಾನ್ ಇಂಡಿಯಾದಲ್ಲಿ ಸದ್ದು ಮಾಡಿದ್ಮೇಲೆ ನೆಕ್ಸ್ಟ್ ವೆಂಚರ್ ಹೇಗಿರುತ್ತೆ.? ಯಾರು ನಿರ್ಮಾಪಕರು.? ಸುದೀಪ್‌ಗೆ ಆಕ್ಷನ್ ಕಟ್ ಹೇಳೊದ್ಯಾರು ಅಂತೆಲ್ಲಾ ಭಾರಿ ಚರ್ಚೆಗಳು ನಡೆದಿದ್ವು. ಆದ್ರೆ ಈಗ ಸುದೀಪ್ 46 ಬಗ್ಗೆ ಕಿಚ್ಚನ ಆಪ್ತ ಮೂಲಗಳಿಂದ ಒಂದಿಷ್ಟು ಮಾಹಿತಿ ಸಿಕ್ಕಿದೆ. 

ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಸೂಪರ್ ಹಿಟ್ ಕಬಾಲಿ ಸಿನಿಮಾ ನಿರ್ಮಾಣ ಮಾಡಿದ್ದ ನಿರ್ಮಾಫಕ ಕಲೈಪುಲಿ ಎಸ್.ಥಾನು ಸದೀಪ್ 46 ಸಿನಿಮಾಗೆ ಬಂಡವಾಳ ಹೂಡುತ್ತಿದ್ದಾರೆ. ನಿರ್ದೇಶಕ ವಿಜಯ್ ಕಿಚ್ಚನಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರಂತೆ. ಕಬಾಲಿ ಪ್ರೊಡ್ಯೂಸರ್ ಕಲೈಪುಲಿ ಎಸ್.ಥಾನು ಕಿಚ್ಚನ 46 ಸಿನಿಮಾವನ್ನ ಬಿಗ್ ಸ್ಕೇಲ್ನಲ್ಲೇ ನಿರ್ಮಾಣ ಮಾಡೋಕ್ಕೆ ಸ್ಕೆಚ್ ಹಾಕಿದ್ದಾರಂತೆ. ಹೆಬ್ಬುಲಿ ಕಿಚ್ಚ ಈ ಭಾರಿ ಹೊಸ ಪ್ರಯೋಗಕ್ಕೆ ತೆರೆದುಕೊಂಡಿದ್ದು, ಯಂಗ್ ಟ್ಯಾಲೆಂಟೆಡ್ ಡೈರೆಕ್ಟರ್ ವಿಜಯ್ಗೆ ಚಾನ್ಸ್ ಕೊಟ್ಟಿದ್ದಾರೆ. ಯಾರು ಈ ವಿಜಯ್ ಅಂತ ನೀವ್ ಕೇಳಿದ್ರೆ ಅದಕ್ಕೆ ಉತ್ತರ ಟಾಲಿವುಡ್ನಲ್ಲಿ ಕೆಲವು ಸಿನಿಮಾಗಳಲ್ಲಿ ಅಸೋಷಿಯೆಟ್ ಆಗಿ ಕೆಲಸ ಮಾಡಿದ್ದು, ಈಗ ಕಿಚ್ಚನಿಗೆ ಅದ್ಭುತ ಕತೆ ರೆಡಿ ಮಾಡಿ ಅಕ್ಷನ್ ಕಟ್ ಹೇಳೋಕೆ ರೆಡಿಯಾಗಿದ್ದಾರೆ.

02:25AIADMK: ಎರಡೆಲೆ ಚಿಹ್ನೆಯ ಹಿಂದಿದೆ ಮೂಕಾಂಬಿಕೆ ಕಥೆ: ಈಗ ವಿಜಯ್ ಕೂಡ ದೇವಿಯ ಮೊರೆ!
03:36Kollur Mookambika ದೇವಿಗೆ ಖಡ್ಗವೇ ಯಾಕೆ ಅರ್ಪಿಸುತ್ತಾರೆ? ಇದರ ಹಿಂದಿದೆ ವಿಜಯದ ರಹಸ್ಯ!
15:12ಶುಕ್ರವಾರ ಮೂಕಾಂಬಿಕೆ ಸನ್ನಿಧಿಯಲ್ಲಿ Thalapathy Vijay: ಅಮ್ಮನ ಹರಕೆ.. ದೇವಿ ಪೂರೈಕೆ.. ದಳಪತಿ ದೇಗುಲ ದರ್ಶನ!
04:30Cine Express: ಈ ವಾರ ಸಿನಿ ಇಂಡಸ್ಟ್ರಿಯಲ್ಲಿ ಹೆಚ್ಚು ಚರ್ಚೆಯಾದ 5 ದೊಡ್ಡ ಅಪ್‌ಡೇಟ್‌ಗಳು ಯಾವುವು?
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
04:09ಅಪ್ಪನಿಗಾಗಿ ಬಂದ ಹೊಸ ಹಾಡು, ಕಾನ್ಸ್‌ನಲ್ಲಿ ಮೆಚ್ಚುಗೆ ಪಡೆದ ಚಿತ್ರದ ಟ್ರೇಲರ್: ಸಿನಿರಂಗದಲ್ಲಿ ಏನಾಗುತ್ತಿದೆ?
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!
02:48ಪೆದ್ದಿ ಸೆಟ್​ನಲ್ಲಿ ಕಣ್ಣೀರಿಟ್ಟಿದ್ರಾ ಜಾನ್ವಿ ಕಪೂರ್? ಚಾಟ್ಸ್ ವಿವರ ವೈರಲ್, ಏನಿದು ಜಾನು ಚಾಟ್ ಸೀಕ್ರೆಟ್!
04:41ಸಾಯಿ ಪಲ್ಲವಿ, ರುಕ್ಮಿಣಿ ವಸಂತ್ ಕೂಡ ಅಲ್ಲ: ಸುಬ್ಬುಲಕ್ಷ್ಮಿ ಬಯೋಪಿಕ್​ಗೆ ರಶ್ಮಿಕಾ ಎಂಟ್ರಿ?
Read more