ಶೋಕಿ ನೋಡಿ ಪ್ರೀಸಿಸಿ ಮದುವೆಯಾಗು ಅಂದ ಸೀರಿಯಲ್​​ ನಟಿ: ಎಣ್ಣೆ ಪಾರ್ಟಿಯಲ್ಲಿ ಅವರಿಬ್ಬರ ನಡುವೆ ನಡೆದಿದ್ದೇನು?

ಶೋಕಿ ನೋಡಿ ಪ್ರೀಸಿಸಿ ಮದುವೆಯಾಗು ಅಂದ ಸೀರಿಯಲ್​​ ನಟಿ: ಎಣ್ಣೆ ಪಾರ್ಟಿಯಲ್ಲಿ ಅವರಿಬ್ಬರ ನಡುವೆ ನಡೆದಿದ್ದೇನು?

Published : Oct 04, 2024, 07:29 PM IST

ಒಟ್ಟಿಗೇ ಕೂತು ಎಣ್ಣೆ ಪಾರ್ಟಿ ಮಾಡಿದ್ದಾರೆ.. ಪಾರ್ಟಿ ನಂತರ ಇಬ್ಬರ ನಡುವೆ ಜೋರು ಜಗಳವಾಗಿದೆ.. ಆಕೆ ಮತ್ತೇ ಮದುವೆಯಾಗು ಅಂತ ಹಠ ಹಿಡಿದಿದ್ದಾಳೆ.. ಈ ವೇಳೆಯಲ್ಲಿ ನಾನಿದ್ರೇನೇ ತಾನೆ ಈವೆಲ್ಲಾ ಅಂತ ಹೇಳಿ ಸೀದಾ ಬಾಥ್​​ರೂಮ್​ಗೆ ಹೋಗಿ ನೇಣಿಗೆ ಶರಣಾಗಿಬಿಟ್ಟಿದ್ದಾನೆ. 

ಬೆಂಗಳೂರು(ಅ.04):  ಅವಳು ಸೀರಿಯಲ್​ ನಟಿ, ಒಂದೆರಡು ಸೀರಿಯಲ್​ನಲ್ಲಿ ನಟಿಸಿ ಸೈ ಅನ್ನಿಸಿಕೊಂಡಿದ್ಲು. ಇನ್ನೂ ಆತ ಶೋಕ್​ದಾರ್​​.. ಪಾರಿವಾಳಗಳನ್ನ ಹಾರಿಸಿ ದುಡ್ಡು ಸಂಪಾದಿಸುತ್ತಿದ್ದ.. ಟೂರ್ನಾಮೆಂಟ್​ಗಳಲ್ಲಿ ಕಪ್​ಗಳನ್ನ ಗೆದ್ದು ಒಳ್ಳೆ ಹೆಸರು ಮಾಡಿದ್ದ. ಈ ಇಬ್ಬರೂ ಇನ್​ಸ್ಟಾ ಮೂಲಕ ಸ್ನೇಹಿತರಾದ್ರು ನಂತರ ಒಂದು ವರ್ಷ ಲವ್​ ಮಾಡಿದ್ರು.. ಆದ್ರೆ ಇವತ್ತು ಆ ಶೋಕ್​​ದಾರ್​​​ ಅದೇ ಪ್ರೀತಿಯಿಂದ ಹೆಣವಾಗಿದ್ದಾನೆ. ಅವಳದ್ದೇ ಮನೆಯಲ್ಲಿ ರಾತ್ರಿ ಪಾರ್ಟಿ ಮಾಡಿದ್ದಾರೆ ಆದ್ರೆ ಪಾರ್ಟಿ ನಂತರ ಆಕೆ ನಿದ್ರೆಗೆ ಜಾರಿದ್ರೆ ಆತ ಸೀದಾ ಬಾತ್​ರೂಮ್​ಗೆ ಹೋಗಿ ನೇಣುಗಿದುಕೊಂಡಿದ್ದ.. ಅಷ್ಟಕ್ಕೂ ಆ ಹುಡುಗನ ಸಾವಿಗೆ ಕಾರಣವೇನು..? ಆ ಮನೆಯಲ್ಲಿ ನೆನ್ನೆ ರಾತ್ರಿ ನಡೆದಿದ್ದಾದ್ರೂ ಏನು..? ದುರಂತ ಅಂತ್ಯ ಕಂಡ ಒಂದು ಲವ್​​​ ಸ್ಟೋರಿಯೇ ಇವತ್ತಿನ ಎಫ್‌ಐಆರ್​​​.

ಪಾರ್ಟಿ ಮಾಡಿದ ಮೇಲೆ ಬಾಥ್​​ರೂಮ್​​ಗೆ ಹೋದ ಮದನ್​​​ ನೇಣಿಗೆ ಶರಣಾಗಿದ್ದ.. ಆದ್ರೆ ಆತ ಸಾಯುತ್ತಿದ್ರೆ ವೀಣಾ ಹೆಡ್​ ಫೋನ್​​ ಹಾಕೊಂಡು ರೂಮ್​ನಲ್ಲಿ ಮಲಗಿದ್ದಳು.. ಅಷ್ಟಕ್ಕೂ ಮದನ್​​ ಇದ್ದಕ್ಕಿದ್ದ ಹಾಗೆ ಹೋಗಿ ನೇಣುಬಿಗಿದುಕೊಂಡಿದ್ದೇಕೆ..? ನಿನ್ನೆ ಆ ಪಾರ್ಟಿಯಲ್ಲಿ ಇಬ್ಬರ ನಡುವೆ ಏನಾಯ್ತು..? 

ಒಟ್ಟಿಗೆ ಆಡಿ ಬೆಳೆದವರು ಹೆಣ್ಣಿಗಾಗಿ ಕಾದಾಟ: ಅವಳಿಗಾಗಿ ಪ್ರಾಣ ಸ್ನೇಹಿತನನ್ನೇ ಕೊಂದು ಮುಗಿಸಿದ್ದ

ಆಕೆಗೆ ಮೊದಲೇ ಒಂದು ಲವ್​ ಬ್ರೇಕ್​​ಅಪ್​ ಆಗಿತ್ತು. ಮೊದಲ ಹುಡುಗ ಕೈಕೊಟ್ಟಾಗ ಡಿಪ್ರೆಷನ್​​ನಲ್ಲಿದ್ದವಳಿಗೆ ಸಿಕ್ಕಿದ್ದೇ ಈ ಮದನ್​​.. ಆದ್ರೆ ಮದನ್​ ಜೊತೆಗೆ ಪ್ರೀತಿಯಲ್ಲಿ ಬಿದ್ದಾಗಲೂ ಆಕೆ ಬೇರೆ ಹುಡುಗರ ಜೊತೆ ಓಡಾಡುತ್ತಿದ್ದಳಂತೆ.. ಇದನ್ನ ತಿಳಿದ ಮದನ್​ ಆಕೆಯ ಜೊತೆಗೆ ಬ್ರೇಕ್​​​​​ ಅಪ್​ ಮಾಡಿಕೊಳ್ಳೋದಿಕ್ಕೆ ನಿರ್ಧರಿಸಿದ್ದ.. ಆದ್ರೆ ಅವಳು ಮಾತ್ರ ನೀನೇ ಬೇಕು ಅಂತ ಅವನ ಹಿಂದೆ ಬಿದ್ದಿದ್ದಳು.. ಇನ್ನೂ ಒಮ್ಮೆ ಅವನ ಮನೆ ಮುಂದೆಯೇ ಹೋಗಿ ಜಗಳ ಕೂಡ ಮಾಡಿದ್ದಳು.. ಪರಿಸ್ಥಿತಿ ಹೀಗಿರುವಾಗ್ಲೇ ಆವತ್ತು ಇಬ್ಬರೂ ಅವಳದ್ದೇ ಮನೆಯಲ್ಲಿ ಮೀಟ್​​ ಮಾಡಿದ್ದಾರೆ.. ಒಟ್ಟಿಗೇ ಕೂತು ಎಣ್ಣೆ ಪಾರ್ಟಿ ಮಾಡಿದ್ದಾರೆ.. ಪಾರ್ಟಿ ನಂತರ ಇಬ್ಬರ ನಡುವೆ ಜೋರು ಜಗಳವಾಗಿದೆ.. ಆಕೆ ಮತ್ತೇ ಮದುವೆಯಾಗು ಅಂತ ಹಠ ಹಿಡಿದಿದ್ದಾಳೆ.. ಈ ವೇಳೆಯಲ್ಲಿ ನಾನಿದ್ರೇನೇ ತಾನೆ ಈವೆಲ್ಲಾ ಅಂತ ಹೇಳಿ ಸೀದಾ ಬಾಥ್​​ರೂಮ್​ಗೆ ಹೋಗಿ ನೇಣಿಗೆ ಶರಣಾಗಿಬಿಟ್ಟಿದ್ದಾನೆ. 

ಪ್ರೀತಿ ಮಾಡಿದ ತಪ್ಪಿಗೆ ಇವತ್ತು ಮದನ್​ ಮಸಣ ಸೇರಿದ್ದಾನೆ. ಅವನನ್ನೇ ನಂಬಿದ್ದ ಆತನ ಹೆತ್ತವರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ.. ವಯಸ್ಸಲ್ಲದ ವಯಸಲ್ಲಿ ಲವ್​​​ ಬಲೆಗೆ ಬಿದ್ದು ನಂತರ ಪ್ರೀತಿಯಲ್ಲಿ ಮೋಸ ಹೋದ್ವಿ ಅನ್ನೋ ಕಾರಣಕ್ಕೆ ತಮ್ಮ ಜೀವನವನ್ನೇ ಅಂತ್ಯ ಮಾಡಿಕೊಳ್ಳುವವರಿಗೆ ಈ ಎಪಿಸೋಡ್​​ ಪಾಠವಾಗಲಿ. 

24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more