Ramanagar : ನಿಧಿಗಾಗಿ ಮಹಿಳೆಯನ್ನು ಬೆತ್ತಲೆಗೊಳಿಸಿ ವಾಮಾಚಾರ

Ramanagar : ನಿಧಿಗಾಗಿ ಮಹಿಳೆಯನ್ನು ಬೆತ್ತಲೆಗೊಳಿಸಿ ವಾಮಾಚಾರ

Published : Nov 12, 2021, 10:36 AM ISTUpdated : Nov 12, 2021, 11:59 AM IST

ನಿಧಿ ಆಸೆ​ಗಾಗಿ ಅಮಾ​ಯಕ ಮಹಿ​ಳೆ​ಯನ್ನು ವಿವಸ್ತ್ರಗೊಳಿಸಿ ಪೂಜೆ ನೆರ​ವೇ​ರಿ​ಸಿದ ನಂತರ ಬಲಿ ಕೊಡಲು ತಯಾರಿ ನಡೆ​ಸಿದ್ದ ಆರು ಮಂದಿ ಆರೋ​ಪಿ​ಗ​ಳನ್ನು ಪೊಲೀ​ಸರು ಬಂಧಿ​ಸಿ​ರುವ ಘಟನೆ ಕನ​ಕ​ಪುರ ತಾಲೂಕು ಸಾತನೂರು ಸಮೀ​ಪದ ಭೂಹಳ್ಳಿ ಗ್ರಾಮ​ದಲ್ಲಿ ನಡೆ​ದಿದೆ. 

 

ರಾಮ​ನ​ಗ​ರ (ನ. 12):  ನಿಧಿ ಆಸೆ​ಗಾಗಿ ಅಮಾ​ಯಕ ಮಹಿ​ಳೆ​ಯನ್ನು ವಿವಸ್ತ್ರಗೊಳಿಸಿ ಪೂಜೆ ನೆರ​ವೇ​ರಿ​ಸಿದ ನಂತರ ಬಲಿ ಕೊಡಲು ತಯಾರಿ ನಡೆ​ಸಿದ್ದ ಆರು ಮಂದಿ ಆರೋ​ಪಿ​ಗ​ಳನ್ನು ಪೊಲೀ​ಸರು ಬಂಧಿ​ಸಿ​ರುವ ಘಟನೆ ಕನ​ಕ​ಪುರ (Kanakapura)  ತಾಲೂಕು ಸಾತನೂರು ಸಮೀ​ಪದ ಭೂಹಳ್ಳಿ ಗ್ರಾಮ​ದಲ್ಲಿ ನಡೆ​ದಿದೆ. 

ಭೂ ಹಳ್ಳಿ ಗ್ರಾಮದ ಶ್ರೀನಿವಾಸ್ ಎಂಬುವವರು ವ್ಯವಹಾರದಲ್ಲಿ ಸಾಕಷ್ಟು ನಷ್ಟ ಹೊಂದಿದ್ದರು. ತಮಿಳುನಾಡು ಮೂಲದ ಶಶಿಕುಮಾರ್ ಎಂಬ ಗುರೂಜಿ, ನಿಮ್ಮ ಮನೆಯಲ್ಲಿ ನಿಧಿಯಿದೆ. ಹೀಗಾಗಿ ನಿನಗೆ ನಷ್ಟವಾಗುತ್ತಿದೆ. ಮನೆಯಲ್ಲಿ ಪೂಜೆ ಮಾಡಿ ಎಂದು ಸಲಹೆ ನೀಡಿದ್ದಾರೆ. ಗುರೂಜಿ ಶಶಿಕುಮಾರ್ ಸಲಹೆ ಮೇರೆಗೆ ಅಮಾವಾಸ್ಯೆ ದಿನ ಮಹಿಳೆಯನ್ನು ವಿವಸ್ತ್ರಗೊಳಿಸಿ ಪೂಜೆ ಮಾಡಿಸಿದ್ಧಾರೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ತಮಿಳುನಾಡು ಮೂಲದವರಾದ ಪಾರ್ಥ ಸಾರಥಿ, ನಾಗರಾಜು, ಶಶಿಕುಮಾರ್‌, ಲೋಕೇಶ್‌, ಮೋಹನ್‌, ಲಕ್ಷ್ಮಿ ನರಸಪ್ಪ ಎಂಬುವರನ್ನು ಬಂಧಿಸಲಾಗಿದ್ದು, ಪೂಜೆ ನೆಪದಲ್ಲಿ ಬಲಿಯಾಗುತ್ತಿದ್ದ ಕೂಲಿ ಕಾರ್ಮಿಕರಾದ ಸುಜಾತಾ ಎಂಬವರನ್ನು ರಕ್ಷಿಸಲಾಗಿದೆ.

ನಿಧಿಗಾಗಿ ಮಹಿಳೆಯನ್ನು ಬೆತ್ತಲೆಗೊಳಿಸಿ ವಾಮಾಚಾರ

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more