ಕೋಲ್ಕತ್ತಾದ ವೈದ್ಯ ವಿದ್ಯಾರ್ಥಿನಿ ರೇಪ್ & ಮರ್ಡರ್..! ಡಾಕ್ಟರ್ ಅಭಯಾ ಕೇಸ್ ಮುಚ್ಚಿ ಹಾಕೋ ಸಂಚು ನಡೆದಿತ್ತಾ

ಕೋಲ್ಕತ್ತಾದ ವೈದ್ಯ ವಿದ್ಯಾರ್ಥಿನಿ ರೇಪ್ & ಮರ್ಡರ್..! ಡಾಕ್ಟರ್ ಅಭಯಾ ಕೇಸ್ ಮುಚ್ಚಿ ಹಾಕೋ ಸಂಚು ನಡೆದಿತ್ತಾ

Published : Aug 21, 2024, 12:06 PM IST

ಕೋಲ್ಕತ್ತಾದಲ್ಲಿ ನಡೆದ ಡಾಕ್ಟರ್ ರೇಪ್ & ಮರ್ಡರ್ ಕೇಸಿನಲ್ಲಿ, ದೇಶಾದ್ಯಂತ ಇರೋ ವೈದ್ಯರೆಲ್ಲ ರೊಚ್ಚಿಗೆದ್ದು ಬೀದಿಗೆ ಇಳಿದಿದ್ದು ಈ ಕಾರಣಕ್ಕೆ. ಸುಪ್ರೀಂಕೋರ್ಟ್ ಉಗಿದಿರೋದೂ ಕೂಡಾ ಅದಕ್ಕೇ. ಸರ್ಕಾರದ ಒಂದು ವ್ಯವಸ್ಥೆಯೇ ಆರೋಪಿಗಳ ರಕ್ಷಣೆಗೆ ನಿಂತಿದ್ಯೇನೋ ಅನ್ನಿಸೋಕೆ ಕಾರಣ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ. 

ಕೋಲ್ಕತ್ತಾ(ಆ.21): ಒಬ್ಬ ಹೆಣ್ಣು ಮಗಳು, ಇಂಡಿಪೆಂಡೆಂಟ್ ಆಗಿ ಡಾಕ್ಟರ್ ಆಗಿ ಕೆಲಸ ಮಾಡಬೇಕಿದ್ದ ಟ್ರೈನಿ ಡಾಕ್ಟರ್ ಒಬ್ಬರು, ತಾನು ಕೆಲಸ ಮಾಡ್ತಿದ್ದ ಆಸ್ಪತ್ರೆಯಲ್ಲೇ ರೇಪ್ ಆಗ್ತಾರೆ. ಬರ್ಬರವಾಗಿ ಕೊಲೆಯಾಗ್ತಾರೆ. ಆ ರೇಪ್ & ಮರ್ಡರ್‌ಅನ್ನು ಮುಚ್ಚಿ ಹಾಕೋಕೆ ಒಂದಿಡೀ ಸಿಸ್ಟಂ ಇನ್ನಿಲ್ಲದ ಪ್ರಯತ್ನ ಮಾಡುತ್ತೆ. ಆದರೆ ಆ ಕೇಸ್, ಇಡೀ ದೇಶವನ್ನ ಒಂದುಗೂಡಿಸುತ್ತೆ. ಸುಪ್ರೀಂಕೋರ್ಟ್‌ ಈಗ ರಾಜ್ಯ ಸರ್ಕಾರಕ್ಕೆ ಉಗಿದು ಉಪ್ಪಿನಕಾಯಿ ಹಾಕಿದೆ. ಅದೇ ಈ ಹೊತ್ತಿನ ವಿಶೇಷ ಜಸ್ಟೀಸ್ ಫಾರ್ ಅಭಯಾ.

ಜೀವ ಉಳಿಸಬೇಕಾದ ಡಾಕ್ಟರ್‌ಗೆ, ತಾನು ಕೆಲಸ ಮಾಡೋ ಆಸ್ಪತ್ರೆಯಲ್ಲೇ ರಕ್ಷಣೆ ಇಲ್ಲ ಅಂತಾದ್ರೆ.. ಡಾಕ್ಟರ್ಸ್ ಇನ್ ಡೇಂಜರ್ ಅಂತಾ ಭಯ ಹುಟ್ಟಲ್ವಾ..? ಕೋಲ್ಕತ್ತಾದಲ್ಲಿ ನಡೆದ ಡಾಕ್ಟರ್ ರೇಪ್ & ಮರ್ಡರ್ ಕೇಸಿನಲ್ಲಿ, ದೇಶಾದ್ಯಂತ ಇರೋ ವೈದ್ಯರೆಲ್ಲ ರೊಚ್ಚಿಗೆದ್ದು ಬೀದಿಗೆ ಇಳಿದಿದ್ದು ಈ ಕಾರಣಕ್ಕೆ. ಸುಪ್ರೀಂಕೋರ್ಟ್ ಉಗಿದಿರೋದೂ ಕೂಡಾ ಅದಕ್ಕೇ. ಸರ್ಕಾರದ ಒಂದು ವ್ಯವಸ್ಥೆಯೇ ಆರೋಪಿಗಳ ರಕ್ಷಣೆಗೆ ನಿಂತಿದ್ಯೇನೋ ಅನ್ನಿಸೋಕೆ ಕಾರಣ, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ. 

ಡ್ರಾಪ್​​ ಕೇಳಿದವಳ ಮೇಲೆಯೇ ಎರಗಿಬಿಟ್ಟ ಪಾಪಿ! ಅವಳ ಮಾನ, ಪ್ರಾಣ ಉಳಿಸಿದ್ದು ಪ್ಯಾನಿಕ್​​ ಬಟನ್​..!

ದೇಶದಲ್ಲಿ ಶಿಕ್ಷೆ ಕೊಡೋಕೆ ಒಂದು ವ್ಯವಸ್ಥೆ ಹೇಗೆ ಕೆಲಸ ಮಾಡುತ್ತೆ ಅನ್ನೋದರ ಬಗ್ಗೆ ನಮಗೆಲ್ಲ ಒಂದು ಕಲ್ಪನೆ ಇದೆ. ಆದರೆ, ಅದೇ ವ್ಯವಸ್ಥೆ, ಶಿಕ್ಷೆ ಕೊಡಿಸೋದಿರ್ಲಿ, ಅಪರಾಧಿಗಳನ್ನ ರಕ್ಷಣೆ ಮಾಡೋಕೆ ನಿಂತ್ರೆ ಹೇಗಿರುತ್ತೆ ಅನ್ನೋದನ್ನ ಅರ್ಥ ಮಾಡ್ಕೋಬೇಕು ಅಂದ್ರೆ, ಕೋಲ್ಕತ್ತಾದಲ್ಲಿ  ನಡೆದ ಈ ಡಾಕ್ಟರ್ ರೇಪ್ & ಮರ್ಡರ್ ಕೇಸ್ನ ಇನ್ವೆಸ್ಟಿಗೇಷನ್ ನೋಡ್ಬೇಕು.

ನ್ಯಾಯ ಕೊಡಿಸಬೇಕಾದವರೇ, ನ್ಯಾಯಕ್ಕೆ ನೇಣು ಹಾಕೋಕೆ ಹೋದಂತಾಗಿದೆ. ಈಗ ಆ ಹೆಣ್ಣು ಮಗಳ  ಅಪ್ಪ ಏನ್ ಮಾಡ್ಬೇಕು. ಮಗಳು ಡಾಕ್ಟರ್ ಆಗ್ಬೇಕಂತೆ ಕನಸು ಕಂಡಿದ್ದ ಅಪ್ಪ, ಪ್ರಕರಣ ಕೇಳಿದ್ರೆ ಸಾಕು, ಕಣ್ಣೀರಾಗ್ತಾರೆ. ಮಗಳ ಸಾವಿಗೆ ನ್ಯಾಯ ಕೊಡ್ಸಿ ಅನ್ನೋ ಆ ತಂದೆ ತಾಯಿ, ದೇಶದ ಇನ್ನೊಬ್ಬ ಹೆಣ್ಣು ಮಗಳಿಗೆ ಇಂತಾ  ಅನ್ಯಾಯ ಆಗ್ಬಾರ್ದು ಅಂತಾರೆ. ನ್ಯಾಯ ಸಿಗುತ್ತಾ..? ಅದು ನಮ್ಮ ಪ್ರಶ್ನೆಯೂ ಹೌದು. ಏನೇ ಹೋರಾಟ ಮಾಡಿದ್ರೂ.. ನಾವು ಅದೇ ವ್ಯವಸ್ಥೆಯ ಒಳಗೇ ಮಾಡ್ಬೇಕಲ್ವಾ?. 

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
Read more