ಕಲಬುರಗಿ ಜೈಲಿನಲ್ಲಿ ಖೈದಿಗಳ ಬಿಂದಾಸ್ ಲೈಫ್:  ಇದು ಅಧೀಕ್ಷಕಿ ವಿರುದ್ಧದ ಷಡ್ಯಂತ್ರವೇ?

ಕಲಬುರಗಿ ಜೈಲಿನಲ್ಲಿ ಖೈದಿಗಳ ಬಿಂದಾಸ್ ಲೈಫ್: ಇದು ಅಧೀಕ್ಷಕಿ ವಿರುದ್ಧದ ಷಡ್ಯಂತ್ರವೇ?

Published : Dec 08, 2024, 02:11 AM IST

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಖೈದಿಗಳು ಮೊಬೈಲ್ ಬಳಕೆ, ಧೂಮಪಾನ ಮತ್ತು ಇತರ ಚಟುವಟಿಕೆಗಳಲ್ಲಿ ತೊಡಗಿರುವ ವಿಡಿಯೋಗಳು ವೈರಲ್ ಆಗಿವೆ. ಜೈಲು ಅಧಿಕ್ಷಕಿ ವಿರುದ್ಧ ಷಡ್ಯಂತ್ರ ನಡೆದಿದೆಯೇ ಎಂಬ ಅನುಮಾನ ವ್ಯಕ್ತವಾಗಿದೆ. ಈ ಘಟನೆಯ ಬಗ್ಗೆ ತನಿಖೆ ನಡೆಸಿ ಸತ್ಯಾಂಶ ಹೊರಗೆಡಹಬೇಕಿದೆ.

ಕಲಬುರಗಿ ಕೇಂದ್ರ ಕಾರಾಗೃಹ   ಮತ್ತೊಂದು ಕರ್ಮಕಾಂಡ ಬಯಲಿಗೆ ಬಂದಿದೆ. ಖೈದಿಗಳ ಬಿಂದಾಸ್ ಲೈಫ್‌ನ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ವೈರಲ್ ಆಗಿದೆ. ಮೊಬೈಲ್ ಬಳಕೆ, ಸಿಗರೇಟ್ ಸೇದುವುದು, ಎಣ್ಣೆ ಹೊಡೆಯೊ ವಿಡಿಯೋ, ರಾಶಿರಾಶಿ ಗುಟ್ಕಾ, ಸಿಗರೇಟ್ ವಿಡಿಯೋಗಳು. ಮತ್ತೊಂದೆಡೆ ಕೈದಿಗಳಿಬ್ಬರು ಹಣ ಮುಂದಿಟ್ಟುಕೊಂಡು ಜೈಲು ಅಧಿಕ್ಷಕಿ ಅನೀತಾ ಮೇಡಂಗೆ ದುಡ್ಡು ಕೊಡೋದಿದೆ ಎನ್ನುತ್ತಿರುವ ಖೈದಿ.

ಸುರೇಶ್ ಎಂಬಾತನ ಮೂಲಕ ಡೀಲ್ ಕುದುರಿಸಿಕೊಳ್ಳಲು ಸಲಹೆ ನೀಡಿದ ಖೈದಿ. ಈ ಮೂಲಕ 35 ಸಾವಿರ ರೂ ಹಣ ಜೈಲು ಅಧಿಕ್ಷಕಿ ಡಾ ಅನೀತಾಗೆ ನೀಡಲು ಖೈದಿಗಳ ನಡುವೆ ಮಾತುಕತೆ ನಡೆದಿದೆ. ಈ ವಿಡಿಯೋಗಳು ಹರಿಬಿಟ್ಟಿರುವ ಉದ್ದೇಶವೇ ಅಧೀಕ್ಷಕಿ ಡಾ. ಅನೀತಾ ವಿರುದ್ದದ ಷಡ್ಯಂತ್ರವಾ ?

ಜೈಲಿನಲ್ಲಿ ಇಷ್ಟೆಲ್ಲಾ ಇದ್ರೂ ಅಧೀಕ್ಷಕಿ‌ ಡಾ. ಅನಿತಾ ಸೇರಿ ಅಧಿಕಾರಿಗಳು ಮೌನವಾಗಿದ್ದೇಕೆ ? ಹಾಗಾದ್ರೆ ಇದೆಲ್ಲಾ ಪೂರೈಕೆಯಾಗಿದ್ದು ಯಾವಾಗ? ಜೈಲಿನ ಕೆಲ ಸಿಬ್ಬಂದಿಗಳೂ ಇದರಲ್ಲಿ ಶಾಮೀಲಿರುವ ಶಂಕೆ ವ್ಯಕ್ತವಾಗಿದೆ.

ಇದೇ ಕಾರಣಕ್ಕೆ ಆರು ಖೈದಿಗಳಿಗೆ ಬೇರೆ ಬೇರೆ ಜೈಲುಗಳಿಗೆ ಸ್ಥಳಾಂತರ ಮಾಡಲಾಗಿದೆ. ಈಗ ವೈರಲ್ ಆಗುತ್ತಿರುವ ವಿಡಿಯೋಗಳು ಯಾವಾಗಿಂದು ಎನ್ನುವುದರ ಖಚಿತತೆ ಇಲ್ಲ. ಆದ್ರೆ ಈ ವಿಡಿಯೋಗಳೆಲ್ಲಾ ಅನಿತಾ ಅಧಿಕ್ಷಕಿಯಾಗಿ ಬಂದ ನಂತರದ್ದೇ ಎನ್ನುವುದಕ್ಕೆ ಅಕ್ಟೋಬರ್ 29 ರ ನ್ಯೂಸ್ ಪೇಪರ್ ಸಾಕ್ಷಿಯಾಗಿದೆ. ಕೆಲವರಿಗಷ್ಟೇ ಕಲಬುರಗಿ ಜೈಲಿನಲ್ಲಿ ಸೌಲಭ್ಯ ನೀಡಲಾಗ್ತಿದೆಯಾ ? ಎನ್ನುವ ಅನುಮಾನ ಮೂಡಿಸುತ್ತಿರುವ ವಿಡಿಯೋಗಳು. ಅದಾಗ್ಯೂ ಈ ಬಗ್ಗೆ ತನಿಖೆ ನಡೆದು ಸತ್ಯಾಂಶ ಹೊರಬರಬೇಕಿದೆ.

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
Read more