Police with People : ಮಾಲೀಕರ ಮುಖದಲ್ಲಿ ಸಂತಸ ಉತ್ತರ ಕನ್ನಡ ಪೊಲೀಸರ ಮಹತ್ಕಾರ್ಯ

Police with People : ಮಾಲೀಕರ ಮುಖದಲ್ಲಿ ಸಂತಸ ಉತ್ತರ ಕನ್ನಡ ಪೊಲೀಸರ ಮಹತ್ಕಾರ್ಯ

Published : Dec 17, 2021, 09:08 PM IST

* 2020-21ರ ಸಾಲಿನಲ್ಲಿ 18 ಮರ್ಡರ್  ಸೇರಿದಂತೆ ಬರೋಬ್ಬರಿ 204 ಪ್ರಕರಣ ದಾಖಲು

* 97 ಪ್ರಕರಣಗಳ‌ನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿ

* ಸುಮಾರು 75 ಲಕ್ಷ ರೂ. ಮೌಲ್ಯದ ಸೊತ್ತು ಮಾಲೀಕರಿಗೆ ಹಸ್ತಾಂತರ 

* ಪೊಲೀಸರ ಸಹಾಯದಿಂದ ಸೊತ್ತು ಮತ್ತೆ ಮರಳಿ ಪಡೆದ ಜನರಿಗೆ ಖುಷಿ 

ಕಾರವಾರ(ಡಿ. 17) ಉತ್ತರ ಕನ್ನಡ (Uttara Kannada)  ಜಿಲ್ಲೆಯಲ್ಲಿ 2020-21ರ ಸಾಲಿನಲ್ಲಿ ನಡೆದ ಹಲವು ಪ್ರಕರಣಗಳ ಪೈಕಿ ಶೇ. 50ರಷ್ಟು ಪ್ರಕರಣ ಬೇಧಿಸಿರುವ ಜಿಲ್ಲಾ ಪೊಲೀಸರು, ಕಳ್ಳತನವಾಗಿದ್ದ (Robbery) ಮೌಲ್ಯಯುತ ಸೊತ್ತುಗಳನ್ನು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ಸುಮಾರು 75 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ಹಸ್ತಾಂತರಿಸಿದ್ದು, ಕಳೆದುಕೊಂಡ ಸೊತ್ತುಗಳನ್ನು ಮರಳಿ ಪಡೆದವರು ಪೊಲೀಸರ ಕಾರ್ಯ ಶ್ಲಾಘಿಸಿದ್ದಾರೆ.

Drive Against Drug Menace: ಹೊಸ ವರ್ಷಕ್ಕೂ ಮುನ್ನ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸ್ ಸಮರ

ಉತ್ತರಕನ್ನಡ ಜಿಲ್ಲೆಯಲ್ಲಿ 2020-21ರ ಸಾಲಿನಲ್ಲಿ ನಡೆದ18 ಮರ್ಡರ್ ಪ್ರಕರಣಗಳು ಸೇರಿದಂತೆ ಬರೋಬ್ಬರಿ 204 ಪ್ರಕರಣಗಳ ಪೈಕಿ 97 ಪ್ರಕರಣಗಳ‌ನ್ನು ಭೇದಿಸುವಲ್ಲಿ ಜಿಲ್ಲಾ ಪೊಲೀಸರು ಸಫಲರಾಗಿದ್ದಾರೆ. ವಶಪಡಿಸಿಕೊಂಡ ಚಿನ್ನ, ಬೆಳ್ಳಿಯ ಆಭರಣ, ಇತರ ಸೊತ್ತುಗಳು, ನಗದು ಹಾಗೂ ದ್ವಿಚಕ್ರ ವಾಹನಗಳನ್ನು ಇದೀಗ ಅದರ ಮಾಲಕರಿಗೆ ಹಸ್ತಾಂತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ  ಕಾರವಾರದ ಡಿಎಆರ್ ಪರೇಡ್ ಗ್ರೌಂಡ್‌ನಲ್ಲಿ ಪ್ರಾಪರ್ಟಿ ರಿಟರ್ನ್ ಪರೇಡ್ ಆಯೋಜಿಸಿದ ಪೊಲೀಸ್ ಇಲಾಖೆ ಸಾಂಕೇತಿಕವಾಗಿ 10 ಜನರಿಗೆ ಅವರ ಸೊತ್ತುಗಳನ್ನು ಹಿಂತಿರುಗಿಸಿದೆ. ಸಿದ್ದಾಪುರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 55,000ರೂ., ಶಿರಸಿಯ ಸಿಪಿ ಬಜಾರ್‌ನಲ್ಲಿ ಗ್ರಾಹಕರ ಸೋಗಿನಲ್ಲಿ ಕಳ್ಳರು ಎಗರಿಸಿದ ಎರಡು ಚಿನ್ನದ ಸರ, ಮಾರಿಕಾಂಬಾ ದೇವಸ್ಥಾನದ ಬಳಿ ಉಷಾ ಪೈ ಅವರಿಂದ ಕಳ್ಳರು ಎಗರಿಸಿದ್ದ ಚಿನ್ನದ ಸರ ಹಿಂದಿರುಗಿಸಲಾಗಿದೆ.

ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಎಎಸ್‌ಐ ನಾರಾಯಣ ಜೋಗಿ ಮಡಿವಾಳ, ಸಿ.ಹೆಚ್.ಸಿ ರಾಮಾ ಎಮ್. ಕುದ್ರಗಿ, ಸಿ.ಹೆಚ್.ಸಿ ಕರಬಸಪ್ಪ ಇಂಗಳಸೂರ, ಸಿ.ಹೆಚ್.ಸಿ ರಮೇಶ ಕೂಡಲ, ಸಿ.ಪಿ.ಸಿ ಯಶ್ವಂತ ಬಿಳಗಿ, ಸಿ.ಪಿ.ಸಿ ಮೋಹನ ಗಾವಡಿ ಅವರಿಗೆ ನಗದು ಬಹುಮಾನ ಹಾಗೂ ಪ್ರಸಂಶನಾ ಪತ್ರ ನೀಡಿ ಗೌರವಿಸಲಾಯಿತು. 

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more