Police with People : ಮಾಲೀಕರ ಮುಖದಲ್ಲಿ ಸಂತಸ ಉತ್ತರ ಕನ್ನಡ ಪೊಲೀಸರ ಮಹತ್ಕಾರ್ಯ

Police with People : ಮಾಲೀಕರ ಮುಖದಲ್ಲಿ ಸಂತಸ ಉತ್ತರ ಕನ್ನಡ ಪೊಲೀಸರ ಮಹತ್ಕಾರ್ಯ

Published : Dec 17, 2021, 09:08 PM IST

* 2020-21ರ ಸಾಲಿನಲ್ಲಿ 18 ಮರ್ಡರ್  ಸೇರಿದಂತೆ ಬರೋಬ್ಬರಿ 204 ಪ್ರಕರಣ ದಾಖಲು

* 97 ಪ್ರಕರಣಗಳ‌ನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿ

* ಸುಮಾರು 75 ಲಕ್ಷ ರೂ. ಮೌಲ್ಯದ ಸೊತ್ತು ಮಾಲೀಕರಿಗೆ ಹಸ್ತಾಂತರ 

* ಪೊಲೀಸರ ಸಹಾಯದಿಂದ ಸೊತ್ತು ಮತ್ತೆ ಮರಳಿ ಪಡೆದ ಜನರಿಗೆ ಖುಷಿ 

ಕಾರವಾರ(ಡಿ. 17) ಉತ್ತರ ಕನ್ನಡ (Uttara Kannada)  ಜಿಲ್ಲೆಯಲ್ಲಿ 2020-21ರ ಸಾಲಿನಲ್ಲಿ ನಡೆದ ಹಲವು ಪ್ರಕರಣಗಳ ಪೈಕಿ ಶೇ. 50ರಷ್ಟು ಪ್ರಕರಣ ಬೇಧಿಸಿರುವ ಜಿಲ್ಲಾ ಪೊಲೀಸರು, ಕಳ್ಳತನವಾಗಿದ್ದ (Robbery) ಮೌಲ್ಯಯುತ ಸೊತ್ತುಗಳನ್ನು ಮಾಲೀಕರಿಗೆ ಹಸ್ತಾಂತರಿಸಿದ್ದಾರೆ. ಸುಮಾರು 75 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಪೊಲೀಸರು ಹಸ್ತಾಂತರಿಸಿದ್ದು, ಕಳೆದುಕೊಂಡ ಸೊತ್ತುಗಳನ್ನು ಮರಳಿ ಪಡೆದವರು ಪೊಲೀಸರ ಕಾರ್ಯ ಶ್ಲಾಘಿಸಿದ್ದಾರೆ.

Drive Against Drug Menace: ಹೊಸ ವರ್ಷಕ್ಕೂ ಮುನ್ನ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸ್ ಸಮರ

ಉತ್ತರಕನ್ನಡ ಜಿಲ್ಲೆಯಲ್ಲಿ 2020-21ರ ಸಾಲಿನಲ್ಲಿ ನಡೆದ18 ಮರ್ಡರ್ ಪ್ರಕರಣಗಳು ಸೇರಿದಂತೆ ಬರೋಬ್ಬರಿ 204 ಪ್ರಕರಣಗಳ ಪೈಕಿ 97 ಪ್ರಕರಣಗಳ‌ನ್ನು ಭೇದಿಸುವಲ್ಲಿ ಜಿಲ್ಲಾ ಪೊಲೀಸರು ಸಫಲರಾಗಿದ್ದಾರೆ. ವಶಪಡಿಸಿಕೊಂಡ ಚಿನ್ನ, ಬೆಳ್ಳಿಯ ಆಭರಣ, ಇತರ ಸೊತ್ತುಗಳು, ನಗದು ಹಾಗೂ ದ್ವಿಚಕ್ರ ವಾಹನಗಳನ್ನು ಇದೀಗ ಅದರ ಮಾಲಕರಿಗೆ ಹಸ್ತಾಂತರಿಸಿದ್ದಾರೆ. ಈ ಹಿನ್ನೆಲೆಯಲ್ಲಿ  ಕಾರವಾರದ ಡಿಎಆರ್ ಪರೇಡ್ ಗ್ರೌಂಡ್‌ನಲ್ಲಿ ಪ್ರಾಪರ್ಟಿ ರಿಟರ್ನ್ ಪರೇಡ್ ಆಯೋಜಿಸಿದ ಪೊಲೀಸ್ ಇಲಾಖೆ ಸಾಂಕೇತಿಕವಾಗಿ 10 ಜನರಿಗೆ ಅವರ ಸೊತ್ತುಗಳನ್ನು ಹಿಂತಿರುಗಿಸಿದೆ. ಸಿದ್ದಾಪುರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 55,000ರೂ., ಶಿರಸಿಯ ಸಿಪಿ ಬಜಾರ್‌ನಲ್ಲಿ ಗ್ರಾಹಕರ ಸೋಗಿನಲ್ಲಿ ಕಳ್ಳರು ಎಗರಿಸಿದ ಎರಡು ಚಿನ್ನದ ಸರ, ಮಾರಿಕಾಂಬಾ ದೇವಸ್ಥಾನದ ಬಳಿ ಉಷಾ ಪೈ ಅವರಿಂದ ಕಳ್ಳರು ಎಗರಿಸಿದ್ದ ಚಿನ್ನದ ಸರ ಹಿಂದಿರುಗಿಸಲಾಗಿದೆ.

ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿದ ಎಎಸ್‌ಐ ನಾರಾಯಣ ಜೋಗಿ ಮಡಿವಾಳ, ಸಿ.ಹೆಚ್.ಸಿ ರಾಮಾ ಎಮ್. ಕುದ್ರಗಿ, ಸಿ.ಹೆಚ್.ಸಿ ಕರಬಸಪ್ಪ ಇಂಗಳಸೂರ, ಸಿ.ಹೆಚ್.ಸಿ ರಮೇಶ ಕೂಡಲ, ಸಿ.ಪಿ.ಸಿ ಯಶ್ವಂತ ಬಿಳಗಿ, ಸಿ.ಪಿ.ಸಿ ಮೋಹನ ಗಾವಡಿ ಅವರಿಗೆ ನಗದು ಬಹುಮಾನ ಹಾಗೂ ಪ್ರಸಂಶನಾ ಪತ್ರ ನೀಡಿ ಗೌರವಿಸಲಾಯಿತು. 

25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
24:37ಚಿಕ್ಕೇಜಮಾನನ ಸಾವಿನ ಸುತ್ತ ಅನುಮಾನದ ಹುತ್ತ: ಲವರ್‌ಗಾಗಿ ಗಂಡನ ಕತೆ ಮುಗಿಸಿದ 2 ಮಕ್ಕಳ ತಾಯಿ
Read more