ಬೆಂಗಳೂರು: ಜ್ಯುವೆಲರಿ ಅಂಗಡಿ ಶೂಟೌಟ್​​ ಕೇಸ್​​​ಗೆ ಟ್ವಿಸ್ಟ್​, ಕಿರಾತಕರನ್ನ ಪೊಲೀಸರು ಪತ್ತೆ ಹಚ್ಚಿದ್ದೇ ರೋಚಕ!

ಬೆಂಗಳೂರು: ಜ್ಯುವೆಲರಿ ಅಂಗಡಿ ಶೂಟೌಟ್​​ ಕೇಸ್​​​ಗೆ ಟ್ವಿಸ್ಟ್​, ಕಿರಾತಕರನ್ನ ಪೊಲೀಸರು ಪತ್ತೆ ಹಚ್ಚಿದ್ದೇ ರೋಚಕ!

Published : Mar 20, 2024, 11:46 AM IST

ಕಿರಾತಕರನ್ನ ಪೊಲೀಸರು ಪತ್ತೆ ಹಚ್ಚಿದ್ದೇ ರೋಚಕ. ಒಂದೇ ಒಂದು ಸುಳಿವು ಬಿಡದೇ ಹೋಗಿದ್ದ ಆಗುಂತಕರನ್ನ ನಮ್ಮ ಪೊಲೀಸರು ದೂರದ ಮಧ್ಯ ಪ್ರದೇಶಕ್ಕೆ ಹೋಗಿ ಎತ್ತಾಕೊಂಡು ಬಂದಿದ್ದಾರೆ. 

ಬೆಂಗಳೂರು(ಮಾ.20):  ಸರಿಯಾಗಿ 5 ದಿನಗಳ ಹಿಂದೆ ಬೆಂಗಳೂರಿನ ಜ್ಯುವೆಲರಿ ಅಂಗಡಿಯೊಳಗೆ ಶೂಟ್​ ಔಟ್​ ನಡೆದಿತ್ತು. ಬೈಕ್​ಗಳಲ್ಲಿ ಬಂದ ನಾಲ್ವರು ಅಂಗಡಿಯಲ್ಲಿದ್ದ ಇಬ್ಬರಿಗೆ ಗುಂಡು ಹಾರಿಸಿ ಎಸ್ಕೇಪ್​ ಆಗಿದ್ರು..ಇನ್ನೂ ಇದೇ ಕೇಸ್​​​ನ ತನಿಖೆ ನಡೆಸಿದ ಪೊಲೀಸರು ಇವತ್ತು ಆ ಖದೀಮರ ಹೆಡೆಮುರಿ ಕಟ್ಟಿದ್ದಾರೆ.

ಆದ್ರೆ ಈ ಕಿರಾತಕರನ್ನ ಪೊಲೀಸರು ಪತ್ತೆ ಹಚ್ಚಿದ್ದೇ ರೋಚಕ. ಒಂದೇ ಒಂದು ಸುಳಿವು ಬಿಡದೇ ಹೋಗಿದ್ದ ಆಗುಂತಕರನ್ನ ನಮ್ಮ ಪೊಲೀಸರು ದೂರದ ಮಧ್ಯ ಪ್ರದೇಶಕ್ಕೆ ಹೋಗಿ ಎತ್ತಾಕೊಂಡು ಬಂದಿದ್ದಾರೆ. 
ಚಿನ್ನದ ಅಂಗಡಿಗೆ ಕನ್ನ ಹಾಕಲು ಬಂದವರು ಗುಂಡು ಹಾರಿಸಿ ಎಸ್ಕೇಪ್​ ಆಗಿದ್ರು.. ಆದ್ರೆ ಅವರ ಬೆನ್ನು ಬಿದ್ದ ಪೊಲೀಸರು ಜಸ್ಟ್​​ ಮೂರೇ ದಿನದಲ್ಲಿ ಅವರನ್ನ ಬಂಧಿಸಿ ವಾಪಸ್​ ಬೆಂಗಳೂರಿಗೆ ಕರೆತಂದಿದ್ದಾರೆ. ಆದ್ರೆ ಮೂರು ಜನರನ್ನ ಅರೆಸ್ಟ್​​ ಮಾಡಿದ್ರೆ ಮತ್ತೊಬ್ಬ ಈಗಾಗಲೇ ಶಿವನ ಪಾದ ಸೇರಿದ್ದಾನೆ.

Bengaluru FIR: ಒಂಟಿ ಮಹಿಳೆಯ ಕತ್ತು ಹಿಸುಕಿ ಪರಾರಿ, 800 ಸಿಸಿ ಟಿವಿಗಳಲ್ಲಿ ಕಂಡಿದ್ದು ಕಾಲಷ್ಟೇ!

ಅದು ಪಕ್ಕಾ ರಾಬರಿ ಗ್ಯಾಂಗ್​ ಹೊಂಚು ಹಾಕಿ ಬೇಟೆ ಆಡೋದೇ ಅವರ ಸ್ಪೆಶಾಲಿಟಿ.. ಒಂದು ಅಂಗಡಿಯನ್ನ ಫಿಕ್ಸ್​​ ಮಾಡಕೊಂಡ್ರೆ ಮುಗೀತು ಆ ಅಂಗಡಿ ದೋಚೋವರೆಗೂ ಬಿಡೋದೇ ಇಲ್ಲ.. ಆದ್ರೆ ಆವತ್ತು ಅವರ ನಸೀಬು ಖರಾಬಾಗಿತ್ತು.. ಕಳ್ಳತನಕ್ಕೆ ಬಂದವರು ಒಂದು ಗ್ರಾಂ ಚಿನ್ನವನ್ನೂ ಕದಿಯಲಿಲ್ಲ. ಗುಂಡೇಟು ಕೊಟ್ಟು ಹೋಗಿಬಿಟ್ಟಿದ್ರು.. ಇನ್ನೂ ಇವರ ಬೇಟೆಗೆ ನಿಂತ ಪೊಲೀಸರಿಗೆ ಮೊದಲ ಸುಳಿವು ಕೊಟ್ಟಿದ್ದು ಅಂಗಡಿಯಲ್ಲಿ ಸಿಕ್ಕ ಫಿಂಗರ್​​ ಪ್ರಿಂಟ್​​... ಕದಿಯಲು ಬಂದಿದ್ದ ಒಬ್ಬನ ಫಿಂಗರ್​ ಪ್ರಿಂಟ್​​ 15 ಕೇಸ್​ಗಳಲ್ಲಿ ಬೇಕಾಗಿದ್ದ ಖದೀಮನದ್ದಾಗಿತ್ತು.. ನಂತರ ಅದೇ ಕ್ಲೂ ಇಟ್ಟುಕೊಂಡು ಹೋದ ಪೊಲೀಸರು ಗ್ವಾಲಿಯರ್​ನಲ್ಲಿ ಮೂವರನ್ನ ಅರೆಸ್ಟ್​​ ಮಾಡಿದ್ರೆ ಮತ್ತೊಬ್ಬ ಗುಂಡೇಟಿನಿಂದ ಸತ್ತು ಹೋಗಿದ್ದ.. ಅಂಗಡಿಯಲ್ಲಾದ ಶೂಟೌಟ್​​ ವೇಳೆ ಕಳ್ಳರು ತಮ್ಮದೇ ತಂಡದೊಬ್ಬನಿಗೆ ಗುಂಡು ಹಾರಿಸಿಬಿಟ್ಟಿದ್ದರು.

ಕೋಟಿ ಆಸೆಯಲ್ಲಿ ಬಂದ ಗ್ಯಾಂಗ್​ ಈಗ ಅಂದರ್​ ಆಗಿದೆ. ಅಷ್ಟೇ ಅಲ್ಲ ತಮ್ಮದೇ ಗ್ಯಾಂಗ್​ನಲ್ಲಿದ್ದವನೊಬ್ಬನನ್ನ ಕಳೆದುಕೊಂಡಿದೆ. 

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
Read more