ಮನೆಯೊಂದರಲ್ಲಿ ಪತ್ತೆಯಾಗಿತ್ತು ವೃದ್ಧನ ರಕ್ತಸಿಕ್ತ ದೇಹ! ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿತ್ತು ಹಂತಕನ ಸುಳಿವು!

ಮನೆಯೊಂದರಲ್ಲಿ ಪತ್ತೆಯಾಗಿತ್ತು ವೃದ್ಧನ ರಕ್ತಸಿಕ್ತ ದೇಹ! ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿತ್ತು ಹಂತಕನ ಸುಳಿವು!

Published : Dec 27, 2024, 09:51 AM IST

ಅದು ಆ ಊರಿನ ಒಂಟಿ ಮನೆ.. ಒಂಟಿ ಮನೆ, ಒಂಟಿ ವೃದ್ದರನ್ನೆ ಟಾರ್ಗೆಟ್ ಮಾಡ್ಕೊಂಡು ಹೊಂಚು ಹಾಕ್ತಿದ್ದ ವ್ಯಕ್ತಿಯೊಬ್ಬ ಅಲ್ಲಿ ಸೃಷ್ಟಿಸಿದ್ದು ಭೀಕರತೆಯನ್ನ.. ಯೆಸ್ ಇಡೀ ಊರಿಗೆ ಊರೇ ನಡುಗುವಂತೆ ಆ ಹಂತಕ ಮಾಡಿಬಿಟ್ಟಿದ್ದಾನೆ. 

ಅದು ಆ ಊರಿನ ಒಂಟಿ ಮನೆ.. ಒಂಟಿ ಮನೆ, ಒಂಟಿ ವೃದ್ದರನ್ನೆ ಟಾರ್ಗೆಟ್ ಮಾಡ್ಕೊಂಡು ಹೊಂಚು ಹಾಕ್ತಿದ್ದ ವ್ಯಕ್ತಿಯೊಬ್ಬ ಅಲ್ಲಿ ಸೃಷ್ಟಿಸಿದ್ದು ಭೀಕರತೆಯನ್ನ.. ಯೆಸ್ ಇಡೀ ಊರಿಗೆ ಊರೇ ನಡುಗುವಂತೆ ಆ ಹಂತಕ ಮಾಡಿಬಿಟ್ಟಿದ್ದಾನೆ. ಯಾಕಂದ್ರೆ ಅವ್ನು ಮಾಡಿದ ಹತ್ಯೆ ಯಾವುದೇ ಕ್ರೈಂ ಥ್ರಿಲ್ಲರ್ ಸಿನಿಮಾಗೂ ಕಡಿಮೆ ಇರ್ಲಿಲ್ಲ.. ಬಳಸಿದ ಆಯುಧ ಕಂಡು ಪೊಲೀಸರೇ ಒಂದು ಕ್ಷಣ ಶಾಕ್ ಆಗಿದ್ದರು. ಇದೇ ಇವತ್ತಿನ ಎಫ್‌ಐಆರ್.ಕಾವೇರಿ ಗಲಾಟೆಗೆ, ಸಕ್ಕರೆ ವಿಚಾರಕ್ಕೆ, ರಾಜಕೀಯ ವಿಚಾರಕ್ಕೆ ಸದಾ ಸುದ್ದಿಯಲ್ಲಿದ್ದ ಸಕ್ಕರೆನಾಡು ಮಂಡ್ಯ ಇದೀಗ ಭೀಕರವಾದ ಹತ್ಯೆಯೊಂದಕ್ಕೆ ಸಾಕ್ಷಿಯಾಗಿದೆ. ಒಂಟಿ ಮಹಿಳೆ, ಒಂಟಿ ಮನೆಗಳನ್ನೆ ಟಾರ್ಗೆಟ್ ಮಾಡಿಕೊಂಡಿದ್ದ ದರೋಡೆಕೋರ ಅಲ್ಲಿ ಭೀಕರತೆಯನ್ನೆ ಸೃಷ್ಟಿಸಿದ್ದಾನೆ. ಮರಕತ್ತರಿಸುವ ಗರಗಸ ಮಾದರಿಯ ಯಂತ್ರದಿಂದ ವೃದ್ಧನೊಬ್ಬನನ್ನು ಕೊಂದು ಭಯದ ವಾತಾವರಣವನ್ನು ಸೃಷ್ಟಿಸಿದ್ದಾನೆ. 

ಏನಿದು ಸಿನಿಮೀಯಾ ಮಾದರಿಯ ಸ್ಟೋರಿ ಅನ್ನೋದನ್ನ ನೋಡ್ಕೊಂಡು ಬನ್ನಿ. ಅಸಲಿಗೆ ಈ ರೀತಿ ಭೀಕರವಾಗಿ ಹತ್ಯೆ ಮಾಡಿದ್ದಾದ್ರೂ ಯಾಕೆ..? ಹತ್ಯೆ ನಡೆಸಿ ದರೋಡೆಗೆ ಪಕ್ಕಾ ಪ್ಲಾನ್ ಅನ್ನೂ ಮಾಡಿಕೊಂಡು ಬಂದಿದ ಈ ಮೊಹಮ್ಮದ್ ಇಬ್ರಾಹಿಂ ಆದ್ರೂ ಯಾರು..? ಎಷ್ಟು ಅಚ್ಚುಕಟ್ಟಾದ ಪ್ಲಾನ್ ಮಾಡಿದ್ದ ಇಬ್ರಾಹಿ ಕೊಂಚ ಯಾಮಾರಿದ್ರೂ ಎಸ್ಕೇಪ್ ಆಗಿಬಿಡ್ತಿದ್ದ.. ಈ ರೀತಿ ದರೋಡೆ ಮಾಡುವಂತಹ ಅನಿವಾರ್ಯತೆ ಆದ್ರೂ ಏನಿತ್ತು. ಈ ಮೊಹಮ್ಮದ್ ಇಬ್ರಾಹಿಂ ಎಂತ ಒಳ್ಳೆ ಪ್ಲಾನ್ ಮಾಡ್ಕೊಂಡಿದ್ದ ಅಂದ್ರೆ.. ಎಲ್ಲೂ ಕೂಡ ಪ್ಲಾನ್ ಫೇಲ್ ಆಗ್ಬಾರ್ದು ಅನ್ನೋ ನಿಟ್ಟಿನಲ್ಲಿ ಅಚ್ಚುಕಟ್ಟಾಗಿ ಪ್ಲಾನ್ ಮಾಡಿಕೊಂಡಿದ್ದ. ಮೈಸೂರಿನ ಯಾವುದೇ ಟೂ ವಿಲರ್ ನ ಬಾಡಿಗೆಗೆ ಪಡೆದು ಬಂದಿದ್ದ.

ಸಿಸಿಟಿವಿ ಎಲ್ಲಿ ಇಲ್ಲಾ ಅನ್ನೋದನ್ನ ನೋಡಿ ಪ್ಲಾನ್ ಮಾಡಿಕೊಂಡು ಹಂತಕ ಇಬ್ರಾಹಿಂ ಬಂದಿದ್ದ.. ಆದ್ರೆ ಈ ಇಬ್ರಾಹಿಂ ಇಷ್ಟು ಕ್ರೂರವಾಗಿ ಕೊಲ್ಲೋಕೆ ಅದೊಂದು ಕಾರಣ ಇತ್ತು.. ಅದೇ ಆನ್ ಲೈನ್ ಗೇಮ್.. ಯೆಸ್ ಆನ್ ಲೈನ್ ಗೇಮ್ ನಲ್ಲಿ ಸಿಕ್ಕಾಪಟ್ಟೆ ಸಾಲ ಮಾಡಿಕೊಂಡಿದ್ದ ಇಬ್ರಾಹಿಂ ಈ ರೀತಿ ಕೃತ್ಯ ಎಸಗೋಕೆ ಮುಂದಾಗಿದ್ದಾನೆ ಅನ್ನೋದು ತನಿಖೆಯಿಂದ ಬಟಬಯಲಾಗಿದೆ. ನೋಡುದ್ರಲ್ಲಾ ಇಡೀ ಮಂಡ್ಯ ಜಿಲ್ಲೆಯನ್ನ ಈ ಹಂತಕ ಇಬ್ರಾಹಿಂ ಯಾವ ರೀತಿ ಆತಂಕಕ್ಕೆ ದೂಡಿದ್ದಾನೆ ಅನ್ನೋದನ್ನ.. ಇನ್ನೂ ಬದುಕಿನ ಮುಸ್ಸಂಜೆಯಲ್ಲಿದ್ದ ಅದರಲ್ಲೂ ಹಾಸಿಗೆ ಹಿಡಿದಿದ್ದ ರಮೇಶ್ ರನ್ನು ಈ ರೀತಿ ಭೀಭತ್ಸವಾಗಿ ಕೊಲೆ ಮಾಡಿರೋದು ಮಾತ್ರ ದುರಂತವೇ ಸರಿ..  ಇನ್ನಾದ್ರೂ ಜನ ಇಂತಹ ಕೃತ್ಯಗಳಿಂದ ಪಾಠ ಕಲಿತು ಎಚ್ಚೆತ್ತುಕೊಳ್ಳಬೇಕು.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
24:37ಚಿಕ್ಕೇಜಮಾನನ ಸಾವಿನ ಸುತ್ತ ಅನುಮಾನದ ಹುತ್ತ: ಲವರ್‌ಗಾಗಿ ಗಂಡನ ಕತೆ ಮುಗಿಸಿದ 2 ಮಕ್ಕಳ ತಾಯಿ
06:05ಟೆರೆರಿಸ್ಟ್, ರೇಪಿಸ್ಟ್, ರೌಡಿಗಳಿಗೆ ಜೈಲಲ್ಲಿ ರಾಜಾತಿಥ್ಯ, ದರ್ಶನ್‌ಗೆ ಮಾತ್ರ ಸಿಕ್ತಿಲ್ಲ ದಿಂಬು, ಹಾಸಿಗೆಯ ಭಾಗ್ಯ!
Read more