ಹುಡುಗಿ ಕೈಕೊಟ್ಟಿದ್ದಕ್ಕೆ ಮೇಷ್ಟ್ರುಗೆ ಶಿಕ್ಷೆ! ನ್ಯೂ ಇಯರ್​​ ಲಡ್ಡು​​ನಲ್ಲಿ ವಿಷ.. ಮೂಲದಲ್ಲಿ ಲವ್‌ ಸ್ಟೋರಿ!

ಹುಡುಗಿ ಕೈಕೊಟ್ಟಿದ್ದಕ್ಕೆ ಮೇಷ್ಟ್ರುಗೆ ಶಿಕ್ಷೆ! ನ್ಯೂ ಇಯರ್​​ ಲಡ್ಡು​​ನಲ್ಲಿ ವಿಷ.. ಮೂಲದಲ್ಲಿ ಲವ್‌ ಸ್ಟೋರಿ!

Published : Jan 09, 2025, 04:16 PM ISTUpdated : Jan 09, 2025, 04:19 PM IST

ಅವರು ಪ್ರತಿಷ್ಟಿತ ವಿದ್ಯಾ ಸಂಸ್ಥೆಯ ಸೆಕ್ರೆಟರಿ.. ಮಕ್ಕಳ ಭವಿಷ್ಯ ರೂಪಿಸೋದ್ರಲ್ಲಿ ಪ್ರಮುಖ ಪಾತ್ರವಹಿಸಿದ್ರು.. ಆ ಭಾಗದಲ್ಲಿ ಒಳ್ಳೆ ಹೆಸರು ಮಾಡಿದ್ರು.. ಆದ್ರೆ ಆವತ್ತೊಂದು ದಿನ ಅದೇ ಭಾಗದ ಶಾಸಕರಿಂದ ನ್ಯೂ ಇಯರ್​​ ಗಿಫ್ಟ್​ ಬಂದಿತ್ತು. 

ಅವರು ಪ್ರತಿಷ್ಟಿತ ವಿದ್ಯಾ ಸಂಸ್ಥೆಯ ಸೆಕ್ರೆಟರಿ.. ಮಕ್ಕಳ ಭವಿಷ್ಯ ರೂಪಿಸೋದ್ರಲ್ಲಿ ಪ್ರಮುಖ ಪಾತ್ರವಹಿಸಿದ್ರು.. ಆ ಭಾಗದಲ್ಲಿ ಒಳ್ಳೆ ಹೆಸರು ಮಾಡಿದ್ರು.. ಆದ್ರೆ ಆವತ್ತೊಂದು ದಿನ ಅದೇ ಭಾಗದ ಶಾಸಕರಿಂದ ನ್ಯೂ ಇಯರ್​​ ಗಿಫ್ಟ್​ ಬಂದಿತ್ತು. ಬಾಕ್ಸ್​​ನಲ್ಲಿ ಲಡ್ಡು ಇತ್ತು. ಮನೆಗೆ ಹೋಗಿ ಊಟ ಮಾಡಿ ಆ ಸ್ವೀಟ್​ ತಿನ್ನೋಣ ಅಂತ ಒಂದು ಲಡ್ಡುನ ತೆಗೆದು ಬಾಯಿಗೆ ಹಾಕಿಕೊಂಡ್ರು ಅಷ್ಟೇ.. ಫುಲ್​ ಕಹಿ ಕಹಿ.. ಶಾಸಕರಿಗೇ ಫೋನ್​ ಮಾಡಿ ಕೇಳೋಣ ಅಂತ ಕಾಲ್​ ಮಅಡಿದ್ರೆ ಶಾಸಕರು ನಾನು ಸ್ವೀಟ್​​ ಕಳಿಸೇ ಇಲ್ಲ ಅಂದುಬಿಟ್ರು.. ಇನ್ನೇನು ಮಾಡೋದು ಅಂತ ಲಡ್ಡುಗಳನ್ನ ಪರೀಕ್ಷೆಗೆ ಕಳಿಸಿದ್ರೆ ಅದರಲ್ಲಿ ವಿಷ ಇರೋದು ಪತ್ತೆಯಾಗಿತ್ತು. ಹಾಗಾದ್ರೆ ಆ ವಿಷದ ಲಡ್ಡುವನ್ನ ಸೆಕ್ರೆಟರಿಗೆ ಕಳಿಸಿದ್ಯಾರು..? ಅದರಲ್ಲಿ ವಿಷ ಬೆರಸಿದ್ದೇಕೆ..? ಒಂದು ವಿಷ ಲಡ್ಡುವಿನ ಹಿಂದಿನ ರೋಚಕ ಕಥೆಯೇ ಇವತ್ತಿನ ಎಫ್​.ಐ.ಆರ್​​​. 

ಕೊನೆಗೂ ಲಡ್ಡು ಪಾರ್ಸೆಲ್​ ಕಳಿಸಿದ್ದವನು ಯಾರು ಅನ್ನೋದನ್ನ ಪೊಲೀಸರು ಪತ್ತೆ ಮಾಡಿದ್ರು.. ನಂತರ ಅವರ ಬೇಟೆಗೆ ನಿಂತ್ರು.. ಆದ್ರೆ ಇದೇ ಟೈಂನಲ್ಲಿ ಪೊಲೀಸರಿಗೆ ಮತ್ತೊಂದು ಶಾಕಿಂಗ್​ ನ್ಯೂಸ್​​ ಸಿಕ್ಕಿತ್ತು.. ಅದೇನಂದ್ರೆ ಆ ಕಿರಾತಕ ಇನ್ನೂ ಇಬ್ಬರಿಗೆ ಇದೇ ರೀತಿ ಪಾರ್ಸೆಲ್​ ಕಳಿಸಿದ್ದ ಅಂತ.. ಅಷ್ಟಕ್ಕೂ ಆತ ಹೀಗ್ಯಾಕೆ ಮಾಡಿದ..? ಆತ ಇನ್ಯಾರಿಗೆಲ್ಲಾ ಸ್ವೀಟ್​​ ಬಾಕ್ಸ್​​ ಕಳಿಸಿದ ಅಂತ ವಿಚಾರಿಸಿದಾಗಲೇ ನೋಡಿ ಅಲ್ಲೊಂದು ಲವ್​ ಸ್ಟೋರಿ ಓಪನ್​ ಆಗೋದು. ಅವನೊಬ್ಬ ಲವ್ವರ್​​ ಬಾಯ್​​​.. ಇದೇ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯಲ್ಲಿ LLB ಮಾಡುವಾಗ್ಲೇ ಅದೇ ಸಂಸ್ಥೆಯಲ್ಲಿ ಮೆಡಿಸೀನ್​​​ ಓದುತ್ತಿದ್ದ ಹುಡುಗಿಯನ್ನ ಪ್ರೀತಿಸುತ್ತಿದ್ದ.. ಇಬ್ಬರೂ ಲವ್​​ನಲ್ಲಿ ಬಿದ್ದಿದ್ರು.. ಆದ್ರೆ ಒಂದು ದಿನ  ನಾಗರಾಜು ರವರು ಇಬ್ಬರನ್ನೂ ಕರೆದು ವಾರ್ನ್​ ಮಾಡಿದ್ರು.. ಆಗ ಹುಡುಗಿ ಇವನ ಜೊತೆ ಬ್ರೇಕ್​ ಅಪ್​ ಮಾಡಿಕೊಂಡು ಬಿಟ್ಟಳು.. 

ಲವ್​ ಬ್ರೇಕ್​ ಅಪ್​ ಆದ ನಂತರ ಈತ ಖಿನ್ನತೆಗೆ ಒಳಗಾದ ಇಬ್ಬರು ಡಾಕ್ಟರ್​​ ಬಳಿಯೂ ಚಿಕಿತ್ಸೆ ಪಡೆಯುತ್ತಿದ್ದ.. ಆದ್ರೆ ಇವನ ಆರೋಗ್ಯ ಚೇತರಿಸಲಿಲ್ಲ.. ಇನ್ನೂ ಇವನ ಸ್ಥಿತಿ ನೋಡಿ ಈತನ ಹೆತ್ತವರೂ ದೂರವಾಗಿಬಿಟ್ರು.. ಯಾವಾಗ ಅಪ್ಪ-ಅಮ್ಮ ದೂರವಾದ್ರೋ ಅವನ ಈ ಸ್ಥಿತಿಗೆ ನಾಗರಾಜು ಮತ್ತು ತನಗೆ ಚಿಕಿತ್ಸೆ ನೀಡಿದ ವೈದ್ಯರೇ ಕಾರಣ ಅಂತ ತಿಳಿದು.. ತನಗೆ ಕೊಟ್ಟಿದ್ದ ಟ್ಯಾಬ್ಲೆಟ್​ಗಳನ್ನೇ ಪುಡಿ ಮಾಡಿ ಅದನ್ನ ಲಡ್ಡುಗೆ ಬೆರಸಿ ಶಾಸಕರ ಹೆಸರಲ್ಲಿ ಮೂವರಿಗೂ ಕಳಿಸಿಬಿಟ್ಟ. ಲಾಯರ್​ ಒಬ್ಬ ಪ್ರೇಮ ವೈಫಲ್ಯದಿಂದ ಮಾನಸಿಕ ರೋಗಿಯಾಗಿ ಮೂವರ ಕೊಲೆಗೂ ಸಂಚು ರೂಪಿಸಿದ್ದು ನಿಜಕ್ಕೂ ವಿಪರ್ಯಾಸ.  ಪ್ರೀತಿಸಿದವಳು ಹೋದಳು.. ಹೆತ್ತವರನ್ನಾದ್ರೂ ಖುಷಿಯಿಂದ ನೋಡಿಕೊಳ್ಳೋಣ ಅಂತ ಇದ್ದಿದ್ರೆ ಇವತ್ತು ಚೆನ್ನಾಗಿರ್ತಿದ್ದ.. ಆದ್ರೆ ಸೇಡು ತೀರಿಸಿಕೊಳ್ಳಲು ಹೋಗಿ ಜೈಲು ಸೇರಿದ್ದಾನೆ.

24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!