ಮುತ್ತಪ್ಪ ರೈ ಸ್ಕೆಚ್.. ಜೈರಾಜ್‌ಗೆ ಮಚ್ಚು ಬೀಸಿದ ಚಕ್ರೆ!

ಮುತ್ತಪ್ಪ ರೈ ಸ್ಕೆಚ್.. ಜೈರಾಜ್‌ಗೆ ಮಚ್ಚು ಬೀಸಿದ ಚಕ್ರೆ!

Published : Sep 29, 2022, 06:52 PM IST

ಡಾನ್ ಜೈರಾಜನ ತಾಕತ್ತೇನು ಅನ್ನೋದನ್ನ ಸರಿಯಾಗಿ ತಿಳಿದುಕೊಳ್ಳದೇ ಆತನನ್ನ ಕೊಲ್ಲೋ ಮಾತನ್ನಾಡಿಬಿಟ್ಟಿದ್ರು ಮುತ್ತಪ್ಪ ರೈ. ಮುತ್ತಪ್ಪ ರೈ ಸ್ಕೆಚ್‌ನಂತೆ ನಟೋರಿಯಸ್‌ ಡಾನ್‌, ಜೈರಾಜ್‌ಗೆ ಕ್ರಿಸ್ಟೋಫರ್‌ ಚಕ್ರವರ್ತಿ ಅಲಿಯಾಸ್‌ ಚಕ್ರೆ ಮಚ್ಚು ಬೀಸಿದ್ದ
 

ಬೆಂಗಳೂರು (ಸೆ.29): 80ರ ದಶಕದ ಕೊನೆಯ ಎರಡ್ಮೂರು ವರ್ಷ ಬೆಂಗಳೂರು ಭೂಗತ ಲೋಕದ ಗಲ್ಲಿಗಳಲ್ಲಿ ಅತೀ ದೊಡ್ಡ ರಕ್ತಪಾತಕ್ಕೆ ಸಾಕ್ಷಿಯಾದ ವರ್ಷ. ಅತೀ ಹೆಚ್ಚು ಗ್ಯಾಂಗ್ ವಾರ್‌ಗಳು ಶುರುವಾಗಿದ್ದು ಆವಾಗಲೇ. ಆದರೆ ಅದು ಶುರುವಾಗಿದ್ದು, ಕಾಟನ್‌ಪೇಟೆ ಪುಷ್ಪಾ ಮತ್ತು ರಾಜೇಂದ್ರ ಜೈರಾಜನ ವಿರುದ್ಧ ತೊಡೆ ತಟ್ಟಿದ ದಿನದಿಂದ. ಇತ್ತ ಪುಷ್ಪನ ಟೀಂನಲ್ಲಿ ರಾಜೇಂದ್ರ, ಕಿಟ್ಟಿ, ಚಕ್ರೆ ಬಿಟ್ರೆ ಬೆಳರಳೆಣಿಕೆಯಷ್ಟು ಮಂದಿ ಮಾತ್ರ ಇದ್ದರೆ, ಜೈರಾಜ್ ಹಿಂದೆ ಟಫ್ ಫೈಟರ್‌ಗಳ ದಂಡೇ ಇತ್ತು. 

ಇನ್ನೂ ಯಾವಾಗ ಜೈರಾಜ್ ಶಿಷ್ಯ ಬಲರಾಮನ ಮೇಲೆ ಚಕ್ರೆ ಮತ್ತು ಆತನ ಸ್ನೇಹಿತರು ಅಟ್ಯಾಕ್ ಮಾಡಿದ್ರೋ, ಜೈರಾಜ್ ಅದರ ರಿವೇಂಜ್‌ಗೆ ನಿಂತುಬಿಟ್ಟ. ಜೇಡರಹಳ್ಳಿ ಕೃಷ್ಣಪ್ಪ ಸೀನ್‌ಗೆ ಎಂಟ್ರಿಯಾಗ್ತಾನೆ. ಇತ್ತ ಜೈರಾಜ್ ಸ್ಕೆಚ್ ಕೇಳಿ ದಂಗಾದ ಪುಷ್ಪಾ ಆ್ಯಂಡ್ ಗ್ಯಾಂಗ್ ಹೋಗಿದ್ದು ಭವಿಷ್ಯದ ಡಾನ್ ಮುತ್ತಪ್ಪ ರೈ ಬಳಿಗೆ. 

ಡಾನ್‌ ಆಗಿ ಮೆರೆದ್ರೂ, ವಿಧಿಯಾಟಕ್ಕೆ ಶರಣಾದ ಬೆಂಗಳೂರು ಭೂಗತ ಲೋಕದ ಚಕ್ರೆ!

ಪುತ್ತೂರಿನ ತೋಟದ ಮನೆಯಲ್ಲಿ ಕೂತು ಮುತ್ತಪ್ಪ ರೈ, ರಾಜೆಂದ್ರ ಮತ್ತು ಪಷ್ಪನಿಗೆ ಇದೊಂದು ಪ್ರಶ್ನೆ ಹಾಕಿದ್ರು. ತಿಗಳರ ಪೇಟೆ ಗಲ್ಲಿಗಳಲ್ಲಿ ಗೋಪಿ ಜೈರಾಜ್ನನ್ನ ತಡವಿಕೊಂಡಿದ್ದೇ ಕೊನೆ ಆನಂತರ ಆತನನ್ನ ಮುಟ್ಟೋ ಧೈರ್ಯ ಯಾರಂದ್ರೆ ಯಾರೂ ಮಾಡಿರಲಿಲ್ಲ. ಈಗ ಒಬ್ಬ ಮುತ್ತಪ್ಪ ರೈ ಬೆಂಬಲಕ್ಕಿದ್ದಾರೆ ಅನ್ನೋ ಒಂದೇ ಒಂದು ಕಾರಣಕ್ಕೆ ಪುಷ್ಪಾ ಟೀಮ್‌ ಎದ್ದು ನಿಂತಿತ್ತು.  ಮಚ್ಚುಗಳು, ಲಾಂಗ್‌ಗಳು, ಬಾಂಬ್,‌ ಪಿಸ್ತೂಲ್‌ಗಳು, ಒಬ್ಬ ನಿರಾಯುಧನನ್ನ ಕೊಲ್ಲೋದಕ್ಕೆ 20 ಜನ ಶಸ್ತ್ರ ಸಜ್ಜಿತ ಹುಡುಗರು, ಅಷ್ಟೆಲ್ಲಾ ಇದ್ದವರು ಡಾನ್ ಜೈರಾಜ್‌ನನ್ನು ಹೊಡೆದು ಮುಗಿಸಲು ಸಾಧ್ಯವಾಗಲಿಲ್ಲ.

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!