ಅಪ್ಪನ ₹30 ಲಕ್ಷ ಇನ್ಸೂರೆನ್ಸ್​​​​ ಹಣಕ್ಕಾಗಿ ಮಗ ಮಾಡಿದ್ದು ಆಕ್ಸಿಡೆಂಟ್ ಪ್ಲಾನ್!

ಅಪ್ಪನ ₹30 ಲಕ್ಷ ಇನ್ಸೂರೆನ್ಸ್​​​​ ಹಣಕ್ಕಾಗಿ ಮಗ ಮಾಡಿದ್ದು ಆಕ್ಸಿಡೆಂಟ್ ಪ್ಲಾನ್!

Published : Dec 31, 2024, 11:17 PM IST

ಟ್ಯಾಂಕ್​ ರಿಪೇರಿಗೆಂದು ಹೋದ ವೃದ್ಧ ಆ್ಯಕ್ಸಿಡೆಂಟ್​​ನಲ್ಲಿ ಸಾವನ್ನಪ್ಪಿದ್ದ. ಆದರೆ, ತನಿಖೆ ನಡೆಸಿದಾಗ ಅದು ಆ್ಯಕ್ಸಿಡೆಂಟ್​​ ಅಲ್ಲ, ಮರ್ಡರ್​​ ಅನ್ನೋದು ಬೆಳಕಿಗೆ ಬಂದಿತ್ತು. ಹಣಕ್ಕಾಗಿ ತಂದೆಯನ್ನೇ ಕೊಂದ ಮಗನ ಪಾಪದ ಕಥೆ ಇದು.

ಅವನು ಸ್ಟವ್​​ ರಿಪೇರಿ ಹಾಗೂ ಪ್ಲಾಸ್ಟಿಕ್​ ರಿಪೇರಿ ಮಾಡುವವನು. ಮೊದಲ ಹೆಂಡತಿ ಸತ್ತ ಮೇಲೆ 2ನೇ ಮದುವೆಯಾಗಿದ್ದ. ಎರಡನೇ ಹೆಂಡತಿ ಮಕ್ಕಳೊಂದಿಗೆ ದೂರದ ಊರಿನಲ್ಲಿದ್ದರೆ ಈತ ಮಾತ್ರ ಮೊದಲ ಹೆಂಡತಿಯ ಮಕ್ಕಳೊಂದಿಗೆ ವಾಸ ಮಾಡುತ್ತಿದ್ದನು. ಅದರೆ, ಆವತ್ತೊಂದು ದಿನ ಟ್ಯಾಂಕ್​​ ರಿಪೇರಿ ಇದೆ ಅಂತ ಹೋದವನು ಮಾರ್ಗ ಮಧ್ಯೆಯೇ ಆ್ಯಕ್ಸಿಡೆಂಟ್​​ ಆಗಿ ಮೃತಪಟ್ಟಿದ್ದನು.

ಪೊಲೀಸರೂ ಕೂಡ ಮೊದಲಿಗೆ ಆ್ಯಕ್ಸಿಡೆಂಟ್​​ ಕೇಸ್​ ದಾಕಲಿಸಿಕೊಂಡಿದ್ದರು. ಆದರೆ, ಕೊಂಚ ಯೋಚಿಸಿದಾಗ ಅದು ಅಪಘಾತವಲ್ಲ ಬದಲಿಗೆ ಮರ್ಡರ್​​ ಅನ್ನೋದು ಗೊತ್ತಾಗಿತ್ತು. ಹಾಗಾದರೆ ಆ ವೃದ್ಧನನ್ನ ಕೊಂದಿದ್ಯಾರು..? ಅವನನ್ನ ಕೊಂದು ಆ್ಯಕ್ಸಿಡೆಂಟ್​​​ನಂತೆ ಬಿಂಬಿಸೋದಕ್ಕೆ ಕಾರಣವೇನು..? ಒಬ್ಬ ಅಮಾಯಕನ ಬರ್ಬರ ಕೊಲೆ ಮತ್ತು ಪೊಲೀಸರ ರೋಚಕ ಇನ್ವೆಸ್ಟಿಗೇಷನ್​​ ಕಥೆಯೇ ಇವತ್ತಿನ ಎಫ್​​.ಐ.ಆರ್​​​​​..

ಮನೆಯಲ್ಲಿ ಟ್ಯಾಂಕ್​ ರಿಪೇರಿ ಕೆಲಸ ಇದೆ ಅಂತ ಕಳಿಸಿದ್ದ ಮಗನೇ ಅಪ್ಪನ ಹೆಣ ಹಾಕಿದ್ದ. ಅಷ್ಟೇ ಅಲ್ಲ ತಂದೆಯ ಹೆಣದ ಮುಂದೆ ನಿಂತು ಕಣ್ಣೀರು ಹಾಕಿದ್ದನು. ಎಲ್ಲ ಮಕ್ಕಳಂತೆ ಆತ ಕೂಡ ತಂದೆಯನ್ನ ಪ್ರೀತಿಯಿಂದ ನೋಡಿಕೊಳ್ತಿದ್ದ. ಅದೇ ಪ್ರೀತಿಯಲ್ಲಿ ತಂದೆಗೆ ಒಂದು ಇನ್ಶುರೆನ್ಸ್​​​ ಮಾಡಿಸಿದ್ದನು. ಆದ್ರೆ ಇತ್ತಿಚೆಗೆ ಆತ ತುಂಬಾನೇ ಸಾಲ ಮಾಡಿಕೊಂಡುಬಿಟ್ಟಿದ್ದ. ಸಾಲಗಾರರ ಕಾಟ ಹೆಚ್ಚಾಯ್ತು. ಏನಪ್ಪ ಮಾಡೋದು ಅಂತ ಯೋಚಿಸುತ್ತಿರುವಾಗ್ಲೇ ಅವನ ನೆನಪಿಗೆ ಬಂದಿದ್ದು ತಾನೇ ಮಾಡಿಸಿದ್ದ ಇನ್ಶುರೆನ್ಸ್​​​.

ತಂದೆ ಸತ್ತರೆ ಅವರ ಹೆಸರಿಗೆ ಮಾಡಿಸಿದ್ದ 12 ಲಕ್ಷ ರೂ. ಬರುತ್ತದೆ. ಒಂದು ವೇಳೆ ಅಪಘಾತದಲ್ಲಿ ಸತ್ತರೆ 30 ಲಕ್ಷ ರೂ. ಬರುತ್ತದೆ ಎಂಬುದನ್ನು ತಿಳಿದ ಮಗ ತಂದೆಯನ್ನೇ ಮುಗಿಸಲು ತೀರ್ಮಾನಿಸಿದ್ದಾನೆ. ಅದರಂತೆ ಪಕ್ಕ ಪ್ಲಾನ್​ ಮಾಡಿ ಆ್ಯಕ್ಸಿಡೆಂಟ್​​ ಆಗಿರುವಂತೆ ಬಿಂಬಿಸಿದ್ದಾನೆ. ಆದರೆ, ಅವನ ಬ್ಯಾಡ್​​ ಟೈಂ ತಂದೆಯ ಚಿತೆಗೆ ಬೆಂಕಿ ಇಡುವ ಮುನ್ನವೇ ಅವನು ಲಾಕ್​​ ಆಗಿದ್ದನು. ಕೇವಲ ಹಣಕ್ಕಾಗಿ ತನ್ನ ತಂದೆಯನ್ನೇ ಕೊಂದ ಮಗ ಇವತ್ತು ಜೈಲು ಸೇರಿದ್ದಾನೆ. ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿಯೇ ತೀರುತ್ತಾನೆ.. ಆದರೆ ಇಂಥ ಕೆಟ್ಟ ಮಕ್ಕಳಿಂದ ಸಮಾಜಕ್ಕೆ ಕೆಟ್ಟ ಸಂದೇಶಗಳು ಹೋಗುತ್ತವೆ.

04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ