ಅಪ್ಪನ ₹30 ಲಕ್ಷ ಇನ್ಸೂರೆನ್ಸ್​​​​ ಹಣಕ್ಕಾಗಿ ಮಗ ಮಾಡಿದ್ದು ಆಕ್ಸಿಡೆಂಟ್ ಪ್ಲಾನ್!

ಅಪ್ಪನ ₹30 ಲಕ್ಷ ಇನ್ಸೂರೆನ್ಸ್​​​​ ಹಣಕ್ಕಾಗಿ ಮಗ ಮಾಡಿದ್ದು ಆಕ್ಸಿಡೆಂಟ್ ಪ್ಲಾನ್!

Published : Dec 31, 2024, 11:17 PM IST

ಟ್ಯಾಂಕ್​ ರಿಪೇರಿಗೆಂದು ಹೋದ ವೃದ್ಧ ಆ್ಯಕ್ಸಿಡೆಂಟ್​​ನಲ್ಲಿ ಸಾವನ್ನಪ್ಪಿದ್ದ. ಆದರೆ, ತನಿಖೆ ನಡೆಸಿದಾಗ ಅದು ಆ್ಯಕ್ಸಿಡೆಂಟ್​​ ಅಲ್ಲ, ಮರ್ಡರ್​​ ಅನ್ನೋದು ಬೆಳಕಿಗೆ ಬಂದಿತ್ತು. ಹಣಕ್ಕಾಗಿ ತಂದೆಯನ್ನೇ ಕೊಂದ ಮಗನ ಪಾಪದ ಕಥೆ ಇದು.

ಅವನು ಸ್ಟವ್​​ ರಿಪೇರಿ ಹಾಗೂ ಪ್ಲಾಸ್ಟಿಕ್​ ರಿಪೇರಿ ಮಾಡುವವನು. ಮೊದಲ ಹೆಂಡತಿ ಸತ್ತ ಮೇಲೆ 2ನೇ ಮದುವೆಯಾಗಿದ್ದ. ಎರಡನೇ ಹೆಂಡತಿ ಮಕ್ಕಳೊಂದಿಗೆ ದೂರದ ಊರಿನಲ್ಲಿದ್ದರೆ ಈತ ಮಾತ್ರ ಮೊದಲ ಹೆಂಡತಿಯ ಮಕ್ಕಳೊಂದಿಗೆ ವಾಸ ಮಾಡುತ್ತಿದ್ದನು. ಅದರೆ, ಆವತ್ತೊಂದು ದಿನ ಟ್ಯಾಂಕ್​​ ರಿಪೇರಿ ಇದೆ ಅಂತ ಹೋದವನು ಮಾರ್ಗ ಮಧ್ಯೆಯೇ ಆ್ಯಕ್ಸಿಡೆಂಟ್​​ ಆಗಿ ಮೃತಪಟ್ಟಿದ್ದನು.

ಪೊಲೀಸರೂ ಕೂಡ ಮೊದಲಿಗೆ ಆ್ಯಕ್ಸಿಡೆಂಟ್​​ ಕೇಸ್​ ದಾಕಲಿಸಿಕೊಂಡಿದ್ದರು. ಆದರೆ, ಕೊಂಚ ಯೋಚಿಸಿದಾಗ ಅದು ಅಪಘಾತವಲ್ಲ ಬದಲಿಗೆ ಮರ್ಡರ್​​ ಅನ್ನೋದು ಗೊತ್ತಾಗಿತ್ತು. ಹಾಗಾದರೆ ಆ ವೃದ್ಧನನ್ನ ಕೊಂದಿದ್ಯಾರು..? ಅವನನ್ನ ಕೊಂದು ಆ್ಯಕ್ಸಿಡೆಂಟ್​​​ನಂತೆ ಬಿಂಬಿಸೋದಕ್ಕೆ ಕಾರಣವೇನು..? ಒಬ್ಬ ಅಮಾಯಕನ ಬರ್ಬರ ಕೊಲೆ ಮತ್ತು ಪೊಲೀಸರ ರೋಚಕ ಇನ್ವೆಸ್ಟಿಗೇಷನ್​​ ಕಥೆಯೇ ಇವತ್ತಿನ ಎಫ್​​.ಐ.ಆರ್​​​​​..

ಮನೆಯಲ್ಲಿ ಟ್ಯಾಂಕ್​ ರಿಪೇರಿ ಕೆಲಸ ಇದೆ ಅಂತ ಕಳಿಸಿದ್ದ ಮಗನೇ ಅಪ್ಪನ ಹೆಣ ಹಾಕಿದ್ದ. ಅಷ್ಟೇ ಅಲ್ಲ ತಂದೆಯ ಹೆಣದ ಮುಂದೆ ನಿಂತು ಕಣ್ಣೀರು ಹಾಕಿದ್ದನು. ಎಲ್ಲ ಮಕ್ಕಳಂತೆ ಆತ ಕೂಡ ತಂದೆಯನ್ನ ಪ್ರೀತಿಯಿಂದ ನೋಡಿಕೊಳ್ತಿದ್ದ. ಅದೇ ಪ್ರೀತಿಯಲ್ಲಿ ತಂದೆಗೆ ಒಂದು ಇನ್ಶುರೆನ್ಸ್​​​ ಮಾಡಿಸಿದ್ದನು. ಆದ್ರೆ ಇತ್ತಿಚೆಗೆ ಆತ ತುಂಬಾನೇ ಸಾಲ ಮಾಡಿಕೊಂಡುಬಿಟ್ಟಿದ್ದ. ಸಾಲಗಾರರ ಕಾಟ ಹೆಚ್ಚಾಯ್ತು. ಏನಪ್ಪ ಮಾಡೋದು ಅಂತ ಯೋಚಿಸುತ್ತಿರುವಾಗ್ಲೇ ಅವನ ನೆನಪಿಗೆ ಬಂದಿದ್ದು ತಾನೇ ಮಾಡಿಸಿದ್ದ ಇನ್ಶುರೆನ್ಸ್​​​.

ತಂದೆ ಸತ್ತರೆ ಅವರ ಹೆಸರಿಗೆ ಮಾಡಿಸಿದ್ದ 12 ಲಕ್ಷ ರೂ. ಬರುತ್ತದೆ. ಒಂದು ವೇಳೆ ಅಪಘಾತದಲ್ಲಿ ಸತ್ತರೆ 30 ಲಕ್ಷ ರೂ. ಬರುತ್ತದೆ ಎಂಬುದನ್ನು ತಿಳಿದ ಮಗ ತಂದೆಯನ್ನೇ ಮುಗಿಸಲು ತೀರ್ಮಾನಿಸಿದ್ದಾನೆ. ಅದರಂತೆ ಪಕ್ಕ ಪ್ಲಾನ್​ ಮಾಡಿ ಆ್ಯಕ್ಸಿಡೆಂಟ್​​ ಆಗಿರುವಂತೆ ಬಿಂಬಿಸಿದ್ದಾನೆ. ಆದರೆ, ಅವನ ಬ್ಯಾಡ್​​ ಟೈಂ ತಂದೆಯ ಚಿತೆಗೆ ಬೆಂಕಿ ಇಡುವ ಮುನ್ನವೇ ಅವನು ಲಾಕ್​​ ಆಗಿದ್ದನು. ಕೇವಲ ಹಣಕ್ಕಾಗಿ ತನ್ನ ತಂದೆಯನ್ನೇ ಕೊಂದ ಮಗ ಇವತ್ತು ಜೈಲು ಸೇರಿದ್ದಾನೆ. ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿಯೇ ತೀರುತ್ತಾನೆ.. ಆದರೆ ಇಂಥ ಕೆಟ್ಟ ಮಕ್ಕಳಿಂದ ಸಮಾಜಕ್ಕೆ ಕೆಟ್ಟ ಸಂದೇಶಗಳು ಹೋಗುತ್ತವೆ.

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!