ಅಪ್ಪನ ₹30 ಲಕ್ಷ ಇನ್ಸೂರೆನ್ಸ್​​​​ ಹಣಕ್ಕಾಗಿ ಮಗ ಮಾಡಿದ್ದು ಆಕ್ಸಿಡೆಂಟ್ ಪ್ಲಾನ್!

ಅಪ್ಪನ ₹30 ಲಕ್ಷ ಇನ್ಸೂರೆನ್ಸ್​​​​ ಹಣಕ್ಕಾಗಿ ಮಗ ಮಾಡಿದ್ದು ಆಕ್ಸಿಡೆಂಟ್ ಪ್ಲಾನ್!

Published : Dec 31, 2024, 11:17 PM IST

ಟ್ಯಾಂಕ್​ ರಿಪೇರಿಗೆಂದು ಹೋದ ವೃದ್ಧ ಆ್ಯಕ್ಸಿಡೆಂಟ್​​ನಲ್ಲಿ ಸಾವನ್ನಪ್ಪಿದ್ದ. ಆದರೆ, ತನಿಖೆ ನಡೆಸಿದಾಗ ಅದು ಆ್ಯಕ್ಸಿಡೆಂಟ್​​ ಅಲ್ಲ, ಮರ್ಡರ್​​ ಅನ್ನೋದು ಬೆಳಕಿಗೆ ಬಂದಿತ್ತು. ಹಣಕ್ಕಾಗಿ ತಂದೆಯನ್ನೇ ಕೊಂದ ಮಗನ ಪಾಪದ ಕಥೆ ಇದು.

ಅವನು ಸ್ಟವ್​​ ರಿಪೇರಿ ಹಾಗೂ ಪ್ಲಾಸ್ಟಿಕ್​ ರಿಪೇರಿ ಮಾಡುವವನು. ಮೊದಲ ಹೆಂಡತಿ ಸತ್ತ ಮೇಲೆ 2ನೇ ಮದುವೆಯಾಗಿದ್ದ. ಎರಡನೇ ಹೆಂಡತಿ ಮಕ್ಕಳೊಂದಿಗೆ ದೂರದ ಊರಿನಲ್ಲಿದ್ದರೆ ಈತ ಮಾತ್ರ ಮೊದಲ ಹೆಂಡತಿಯ ಮಕ್ಕಳೊಂದಿಗೆ ವಾಸ ಮಾಡುತ್ತಿದ್ದನು. ಅದರೆ, ಆವತ್ತೊಂದು ದಿನ ಟ್ಯಾಂಕ್​​ ರಿಪೇರಿ ಇದೆ ಅಂತ ಹೋದವನು ಮಾರ್ಗ ಮಧ್ಯೆಯೇ ಆ್ಯಕ್ಸಿಡೆಂಟ್​​ ಆಗಿ ಮೃತಪಟ್ಟಿದ್ದನು.

ಪೊಲೀಸರೂ ಕೂಡ ಮೊದಲಿಗೆ ಆ್ಯಕ್ಸಿಡೆಂಟ್​​ ಕೇಸ್​ ದಾಕಲಿಸಿಕೊಂಡಿದ್ದರು. ಆದರೆ, ಕೊಂಚ ಯೋಚಿಸಿದಾಗ ಅದು ಅಪಘಾತವಲ್ಲ ಬದಲಿಗೆ ಮರ್ಡರ್​​ ಅನ್ನೋದು ಗೊತ್ತಾಗಿತ್ತು. ಹಾಗಾದರೆ ಆ ವೃದ್ಧನನ್ನ ಕೊಂದಿದ್ಯಾರು..? ಅವನನ್ನ ಕೊಂದು ಆ್ಯಕ್ಸಿಡೆಂಟ್​​​ನಂತೆ ಬಿಂಬಿಸೋದಕ್ಕೆ ಕಾರಣವೇನು..? ಒಬ್ಬ ಅಮಾಯಕನ ಬರ್ಬರ ಕೊಲೆ ಮತ್ತು ಪೊಲೀಸರ ರೋಚಕ ಇನ್ವೆಸ್ಟಿಗೇಷನ್​​ ಕಥೆಯೇ ಇವತ್ತಿನ ಎಫ್​​.ಐ.ಆರ್​​​​​..

ಮನೆಯಲ್ಲಿ ಟ್ಯಾಂಕ್​ ರಿಪೇರಿ ಕೆಲಸ ಇದೆ ಅಂತ ಕಳಿಸಿದ್ದ ಮಗನೇ ಅಪ್ಪನ ಹೆಣ ಹಾಕಿದ್ದ. ಅಷ್ಟೇ ಅಲ್ಲ ತಂದೆಯ ಹೆಣದ ಮುಂದೆ ನಿಂತು ಕಣ್ಣೀರು ಹಾಕಿದ್ದನು. ಎಲ್ಲ ಮಕ್ಕಳಂತೆ ಆತ ಕೂಡ ತಂದೆಯನ್ನ ಪ್ರೀತಿಯಿಂದ ನೋಡಿಕೊಳ್ತಿದ್ದ. ಅದೇ ಪ್ರೀತಿಯಲ್ಲಿ ತಂದೆಗೆ ಒಂದು ಇನ್ಶುರೆನ್ಸ್​​​ ಮಾಡಿಸಿದ್ದನು. ಆದ್ರೆ ಇತ್ತಿಚೆಗೆ ಆತ ತುಂಬಾನೇ ಸಾಲ ಮಾಡಿಕೊಂಡುಬಿಟ್ಟಿದ್ದ. ಸಾಲಗಾರರ ಕಾಟ ಹೆಚ್ಚಾಯ್ತು. ಏನಪ್ಪ ಮಾಡೋದು ಅಂತ ಯೋಚಿಸುತ್ತಿರುವಾಗ್ಲೇ ಅವನ ನೆನಪಿಗೆ ಬಂದಿದ್ದು ತಾನೇ ಮಾಡಿಸಿದ್ದ ಇನ್ಶುರೆನ್ಸ್​​​.

ತಂದೆ ಸತ್ತರೆ ಅವರ ಹೆಸರಿಗೆ ಮಾಡಿಸಿದ್ದ 12 ಲಕ್ಷ ರೂ. ಬರುತ್ತದೆ. ಒಂದು ವೇಳೆ ಅಪಘಾತದಲ್ಲಿ ಸತ್ತರೆ 30 ಲಕ್ಷ ರೂ. ಬರುತ್ತದೆ ಎಂಬುದನ್ನು ತಿಳಿದ ಮಗ ತಂದೆಯನ್ನೇ ಮುಗಿಸಲು ತೀರ್ಮಾನಿಸಿದ್ದಾನೆ. ಅದರಂತೆ ಪಕ್ಕ ಪ್ಲಾನ್​ ಮಾಡಿ ಆ್ಯಕ್ಸಿಡೆಂಟ್​​ ಆಗಿರುವಂತೆ ಬಿಂಬಿಸಿದ್ದಾನೆ. ಆದರೆ, ಅವನ ಬ್ಯಾಡ್​​ ಟೈಂ ತಂದೆಯ ಚಿತೆಗೆ ಬೆಂಕಿ ಇಡುವ ಮುನ್ನವೇ ಅವನು ಲಾಕ್​​ ಆಗಿದ್ದನು. ಕೇವಲ ಹಣಕ್ಕಾಗಿ ತನ್ನ ತಂದೆಯನ್ನೇ ಕೊಂದ ಮಗ ಇವತ್ತು ಜೈಲು ಸೇರಿದ್ದಾನೆ. ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಿಯೇ ತೀರುತ್ತಾನೆ.. ಆದರೆ ಇಂಥ ಕೆಟ್ಟ ಮಕ್ಕಳಿಂದ ಸಮಾಜಕ್ಕೆ ಕೆಟ್ಟ ಸಂದೇಶಗಳು ಹೋಗುತ್ತವೆ.

24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?