Aug 26, 2020, 12:11 PM IST
ಬೆಂಗಳೂರು (ಆ. 26): ವೈಯಕ್ತಿಕ ದ್ವೇಷಕ್ಕಾಗಿ ಹುಬ್ಬಳ್ಳಿಯಲ್ಲಿ ತಾಯಿ- ಮಗನ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಕೇಶ್ವಾಪುರದ ಪ್ರಿಯಾ ಡಾಬಾಕ್ಕೆ ನುಗ್ಗಿ ಪುಂಡರು ದಾಂಧಲೆ ನಡೆಸಿದ್ದಾರೆ. ತಾಯಿ ಇಂದಿರಮ್ಮ, ಮಗ ರವಿಯ ಮೇಲೆ ಪಾನ್ ಶಾಪ್ ನಡೆಸುತ್ತಿದ್ದ ಹುಡುಗರು ಹಲ್ಲೆ ನಡೆಸಿದ್ದಾರೆ. ತೀವ್ರ ರಕ್ತಸ್ರಾವವಾಗುತ್ತಿದ್ದ ರವಿಯನ್ನು ಕಿಮ್ಸ್ಗೆ ದಾಖಲಿಸಲಾಗಿದೆ. ಪುಂಟರ ಅಟ್ಟಹಾಸದ ವಿಡಿಯೋವನ್ನು ಸ್ಥಳೀಯರು ಸೆರೆ ಹಿಡಿದ್ದಾರೆ. ಕೇಶ್ವಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.