ಎಲ್ರೋ ಆ ಮಚ್ಚು..? ರಜತ್​-ವಿನಯ್​ಗೆ ಖಾಕಿ ಡ್ರಿಲ್! ಮಚ್ಚೇಶ್ವರ ಏನಾದ..? ಪ್ರಶ್ನೆಗೆ ಬ್ಯಾಡ್​ ಬಾಯ್ಸ್ ತಬ್ಬಿಬ್ಬು!

ಎಲ್ರೋ ಆ ಮಚ್ಚು..? ರಜತ್​-ವಿನಯ್​ಗೆ ಖಾಕಿ ಡ್ರಿಲ್! ಮಚ್ಚೇಶ್ವರ ಏನಾದ..? ಪ್ರಶ್ನೆಗೆ ಬ್ಯಾಡ್​ ಬಾಯ್ಸ್ ತಬ್ಬಿಬ್ಬು!

Published : Mar 28, 2025, 10:31 AM ISTUpdated : Mar 28, 2025, 10:41 AM IST

ತಮ್ಮದು ಸಣ್ಣ ಅಪರಾಧ.. ಕೋರ್ಟ್​ ತಮಗೆ ಬೇಲ್ ಕೊಡುತ್ತೆ ಅಂದುಕೊಂಡಿದ್ದ ವಿನಯ್ ಅಂಡ್ ರಜತ್​ಗೆ ಶಾಕ್ ಕೊಟ್ಟಿರೋ ಕೋರ್ಟ್  ಇಬ್ಬರನ್ನೂ ಮತ್ತೆ ಮೂರು ದಿನಗಳ ಕಾಲ ಖಾಕಿ ವಶಕ್ಕೆ ನೀಡಿದೆ.

ಮಚ್ಚು ಝಳಪಿಸಿ ಹುಚ್ಚು ಹುಚ್ಚಾಗಿ ರೀಲ್ಸ್ ಮಾಡಿದ್ದ ಬಿಗ್ ಬಾಸ್ ಮನೆಯ ಬ್ಯಾಡ್ ಬಾಯ್ಸ್​​ನ ಮತ್ತೆ ಮೂರು ದಿನ ಖಾಕಿ ವಶಕ್ಕೆ ನೀಡಲಾಗಿದೆ. ಅಷ್ಟಕ್ಕೂ ರಜತ್ ಅಂಡ್ ವಿನಯ್​ ನ ಮೂರು ಮೂರು ದಿನ ಪೊಲೀಸರು ನೂರಾರು ಪ್ರಶ್ನೆ ಕೇಳ್ತಾ ಇಲ್ಲ. ಇವ್ರನ್ನ ಕೇಳ್ತಿರೋದು ಒಂದೇ ಪ್ರಶ್ನೆ ‘ಎಲ್ರೋ ಆ ಮಚ್ಚು ಅಂತ..’ ಹಾಗಾದ್ರೆ ಆ ಮಚ್ಚೇಶ್ವರ ಏನಾದ..? ಆ ಕುರಿತ ರೋಚಕ ಸ್ಟೋರಿ ಇಲ್ಲಿದೆ ನೋಡಿ. ಬಿಗ್ ಬಾಸ್ ಮನೆಯ ಬ್ಯಾಡ್​ ಬಾಯ್ಸ್​​ ಪರದಾಟದ ಕಥೆ ಮುಗಿಯೋ ಹಾಗೆ ಕಾಣ್ತಾ ಇಲ್ಲ. ಮಂಗಳವಾರ ಇವರನ್ನ ಎರಡನೇ ಬಾರಿ ಅರೆಸ್ಟ್ ಮಾಡಿದ್ದ ಪೊಲೀಸರು ಪರಪ್ಪನ ಅಗ್ರಹಾರಕ್ಕೆ ಬಿಟ್ಟು ಬಂದಿದ್ರು. ಬುಧವಾರ ಕೋರ್ಟ್ ಎದುರು ಹಾಜರು ಪಡಿಸಿದ್ರು. 

ತಮ್ಮದು ಸಣ್ಣ ಅಪರಾಧ.. ಕೋರ್ಟ್​ ತಮಗೆ ಬೇಲ್ ಕೊಡುತ್ತೆ ಅಂದುಕೊಂಡಿದ್ದ ವಿನಯ್ ಅಂಡ್ ರಜತ್​ಗೆ ಶಾಕ್ ಕೊಟ್ಟಿರೋ ಕೋರ್ಟ್  ಇಬ್ಬರನ್ನೂ ಮತ್ತೆ ಮೂರು ದಿನಗಳ ಕಾಲ ಖಾಕಿ ವಶಕ್ಕೆ ನೀಡಿದೆ. ಅಷ್ಟಕ್ಕೂ ಹೀಗೆ ಕೋರ್ಟ್ ಇವರನ್ನ ಮತ್ತೆ ಮೂರು ದಿನ ಪೊಲೀಸರ ವಶಕ್ಕೆ ನೀಡಲಿಕ್ಕೆ ಕಾರಣ , ರೀಲ್ಸ್​ನಲ್ಲಿ ಇವರು ಬಳಸಿರೋ ಅಸಲಿ ಮಚ್ಚು ಸಿಕ್ಕಿಲ್ಲ. ಅಕ್ಷಯ್ ಸ್ಟುಡಿಯೋದಲ್ಲಿ ಅಸಲಿ ಮಚ್ಚು ಹಿಡಿದು ಸ್ಟೈಲಿಶ್ ಆಗಿ ಪೋಸ್ ಕೊಟ್ಟಿದ್ದ ಇವರನ್ನ ಪೊಲೀಸರು ಎತ್ತಾಕಿಕೊಂಡು ಬಂದಿದ್ರು. ಆಗ ನಿಜವಾದ ಮಚ್ಚನ್ನ ತಂದುಕೊಡೋ ಬದಲು ಫೈಬರ್ ಮಚ್ಚನ್ನ ತಂದು ತಾವು ಇದನ್ನೇ ಬಳಿಸಿದ್ದು ಅಂತ ಸುಳ್ಳು ಹೇಳಿದ್ರು ಈ ಸೋಷಿಯಲ್ ಮಿಡಿಯಾ ವೀರರು. ಇವರ ಕಳ್ಳಾಟ, ಸುಳ್ಳಾಟ ಬಯಲಾದ ಮೇಲೆ ಮತ್ತೆ ಇವರಿಗೆ ಪೊಲೀಸರು ಬುಲಾವ್ ಕೊಟ್ಟಿದ್ರು. 

ಆದ್ರೆ ಆಗ ಎಸಿಪಿ ಚಂದನ್​ ಅವರ ಮೇಲೆ ಪ್ರಭಾವಿಗಳಿಂದ ಒತ್ತಡ ತರೋ ಪ್ಯಯತ್ನವನ್ನ ಇವರಿಬ್ರೂ ಮಾಡಿದ್ದಾರೆ. ಸಾಲದ್ದಕ್ಕೆ ಗುಂಡಿ ಬಿಚ್ಚಿಕೊಂಡು, ಲೈಟರ್ ಹಿಡಕೊಂಡು ರೌಡಿಗಳ ತರಹ ಥಾಣೆಗೆ ವಿಸಿಟ್ ಕೊಟ್ಟಿದ್ದಾರೆ. ಈ ಮದಗಜಗಳ ಮದ ಇಳಿಸಬೇಕು ಅಂತ ತೀರ್ಮಾನಿಸಿದ ಪೊಲೀಸರು ಸರಿಯಾಗಿ ಬೆಂಡೆತ್ತಿದ್ದಾರೆ. ರೀಲ್ಸ್ ಮಾಡಿದ ಜಾಗಕ್ಕೆ ಕರೆದುಕೊಂಡು ಹೋಗಿ ಮಹಜರು ಮಾಡಿದ್ದಾರೆ. ಒಂದು ರಾತ್ರಿ ಪರಪ್ಪನ ಅಗ್ರಹಾರಕ್ಕೆ ಕಳಸಿ ಮಾರನೇ ದಿನ ಕೋರ್ಟ್ ಎದುರು ಹಾಜರು ಪಡಿಸಿದ್ದಾರೆ. ಜೊತೆಗೆ ಇವರು ಅಸಲಿ ಮಚ್ಚನ್ನ ಮುಚ್ಚಿಟ್ಟಿರೋ ವಿಚಾರವನ್ನ ಕೋರ್ಟ್​ಗೆ ಮನವರಿಕೆ ಪಡಿಸಿ ಮತ್ತೆ ಮೂರು ದಿನ ಕಸ್ಟಡಿಗೆ ಪಡೆದಿದ್ದಾರೆ. ಅಸಲಿಗೆ ಈ ಮೂರು ದಿನಗಳಲ್ಲಿ ಇವ್ರನ್ನ ಖಾಕಿ ಕೇಳೋದು ಒಂದೇ ಪ್ರಶ್ನೆ. ಎಲ್ರೋ ಮಚ್ಚು ಅಂತ. ಅಸಲಿ ಮಚ್ಚನ್ನ ಮುಚ್ಚಿಟ್ಟಿರೋ ರಜತ್ ಌಂಡ್ ವಿನಯ್ ಗೌಡ ಈಗ ಏನು ಮಾಡೋದು ಅಂತ ಗೊತ್ತಾಗದೇ ತಬ್ಬಿಬ್ಬಾಗಿದ್ದಾರೆ. 

ಅಸಲಿ ಮಚ್ಚು ಕೊಟ್ರೆ ಏನಾಗುತ್ತೋ,, ನಕಲಿ ಮಚ್ಚು ಕೊಟ್ರೆ ಏನಾಗುತ್ತೋ .. ಗೊತ್ತಾಗದೇ ಬೆವರಿ ಬೆಂಡಾಗಿ ಹೋಗಿದ್ದಾರೆ. ಹೌದು ಸೋಷಿಯಲ್ ಮಿಡಿಯಾದಲ್ಲಿ ಮಾರಕಾಸ್ತ್ರಗಳನ್ನ ಪ್ರದರ್ಶನ ಮಾಡೋದು ಗಂಭೀರ ಅಪರಾಧ. ಇದಕ್ಕೆ ಮೂರದಿಂದ 3 ರಿಂದ 7 ವರ್ಷ ಶಿಕ್ಷೆ ಕೊಡಬಹುದು. ಈ ಬಗ್ಗೆ ಬುಧವಾರ ಕೋರ್ಟ್​​ನಲ್ಲಿ ಪ್ರಾಸಿಕ್ಯೂಶನ್ ವಾದ ಮಾಡೋದನ್ನ ನೋಡಿ ರಜತ್- ವಿನಯ್ ಗೌಡ ಥರ ಥರ ನಡುಗಿ ಹೋಗಿದ್ದಾರೆ. ನಾನು ದಾಸನ ಶಿಷ್ಯ.. ನಮ್ಮ ಗುರು ಗಜ.. ನಾನು ಮದಗಜ ಅಂತ ಮದವೇರಿಸಿಕೊಂಡು ಮೆರೀತಾ ಇದ್ದ ರಜತ್ ಬುಜ್ಜಿ ಌಂಡ್ ವಿನಯ್ ಗೌಡ ಈಗ ಪೊಲೀಸ್ ಕಸ್ಟಡಿಯಲ್ಲಿ ಬೇಕಿತ್ತಾ ಬೇಕಿತ್ತಾ,, ನಮಗೆ ಈ ಪಾಡು ಬೇಕಿತ್ತಾ ಅಂತ ಹಾಡು ಹಾಡ್ತಾ ಇದ್ದಾರಂತೆ..!

24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more