ಹೋಗಿದ್ದು ಅಜ್ಜಿಯ ಸಾವಿಗೆ, ನಡೆದಿದ್ದು ಗ್ಯಾಂಗ್​ ವಾರ್​! ಇದು ದಶಕಗಳ ದ್ವೇಷದ ಭಯಾನಕ ಕಥೆ!

Sep 18, 2024, 1:29 PM IST

ರಾಯಚೂರು: ಅದು ಕರ್ನಾಟಕದ ಗಡಿ ಗ್ರಾಮ. ಅಲ್ಲಿ ಜಗಳ ಅನ್ನೋದು ನಡೆದರೆ ಒಂದೆರಡು ಹೆಣ ಬೀಳೋದು ಗ್ಯಾರೆಂಟಿ. ಯಾವಾಗ ಹೇಗೆ ಅಲ್ಲಿ ಜಗಳ ಶುರುವಾಗುತ್ತೆ ಹೇಳೋದಕ್ಕೆ ಆಗೋದಿಲ್ಲ. ಆದ್ರೆ ಇತ್ತಿಚೆಗೆ ಆ ಗ್ರಾಮ ಸೈಲೆಂಟ್​ ಆಗಿತ್ತು. ಆವತ್ತು ಅದೇ ಗ್ರಾಮದ ಒಬ್ಬ ವೃದ್ಧೆ ಕೊನೆಯುಸಿರು ಎಳೆದಿದ್ಲು. ಆಕೆಯನ್ನ ಮಣ್ಣು ಮಾಡೋಕೆ ಅಂತ ಸಂಬಂಧಿಕರೆಲ್ಲಾ ಸೇರಿದ್ರು. ಆದ್ರೆ ಆ ಅಜ್ಜಿಯ ಸಂಸ್ಕಾರ ಇಡೀ ಗ್ರಾಮವನ್ನೇ ಮಸಣ ಮಾಡಿಬಿಡ್ತು.

ಮಣ್ಣು ಮಾಡಲು ಬಂದಿದ್ದ ಸಂಬಂಧಿಕರ ನಡುವೆಯೇ ಗ್ಯಾಂಗ್​ ವಾರ್​​ ಶುರುವಾಗಿಬಿಟ್ಟಿತ್ತು. ನೋಡ ನೋಡ್ತಿದ್ದಂತೆ ರಕ್ತಪಾತ.. ಏನಾಯ್ತು ಅಂತ ಗೊತ್ತಾಗುವಷ್ಟರಲ್ಲೇ ಒಂದು ಹೆಣ ಬಿದ್ದೇಹೊಯ್ತು. ಅಷ್ಟಕ್ಕೂ ಏನಿದು ಗ್ಯಾಂಗ್​ ವಾರ್​​. ಅಂತ್ಯಸಂಸ್ಕಾರಕ್ಕೆ ಬಂದವರ ಮಧ್ಯೆಯೇ ಗಲಾಟೆ ನಡೆದಿದ್ದೇಕೆ? ಒಂದು ಗ್ರಾಮದ ದಶಕದ ದ್ವೇಷದ ಕಥೆಯೇ ವಿವರಿಸ್ತೇವೆ ನೋಡಿ