ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿದ್ದ ಪ್ರಭಾವಿ ಶಾಸಕನ ಬರ್ತಡೆ ಪಾರ್ಟಿಯಲ್ಲಿ ಡ್ರಗ್ಸ್ ಆಟ!

Sep 3, 2020, 9:21 PM IST

ಬೆಂಗಳೂರು(ಸೆ. 03) ಸುಶಾಂತ್ ಸಿಂಗ್ ಸಾವಿನ ಪ್ರಕರಣದಲ್ಲಿ ಹೆಸರು ಕೇಳಿ ಬಂದಿರುವ ಬಾಲಿವುಡ್ ನಿರ್ಮಾಪಕ ಇಮ್ತಿಯಾಜ್ ಖಾತ್ರಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಮುಖಂಡನ ಬರ್ತಡೆ ಪಾರ್ಟಿಯಲ್ಲಿ ಕಾಣಿಸಿಕೊಂಡಿದ್ದ ಎಂದು ಸಾಮಾಜಿಕ ಕಾರ್ಯಕರ್ತ ಪ್ರಶಾಂತ್ ಸಂಬರಗಿ ಬಾಂಬ್ ಸಿಡಿಸಿದ್ದಾರೆ.

'ಸಿದ್ದು ಪುತ್ರ ರಾಕೇಶ್ ಬಲಿಪಡೆದಿದ್ದು ಡ್ರಗ್ಸ್'

ಬಾಲಿವುಡ್ ಮತ್ತು ಸ್ಯಾಂಡಲ್ ವುಡ್ ನಲ್ಲಿ  ಕೇಳಿಬಂದಿದ್ದ ಡ್ರಗ್ಸ್ ಘಾಟು ನಿಧಾನಕ್ಕೆ ರಾಜಕೀಯ ವಲಯಕ್ಕೂ ವ್ಯಾಪಿಸುವ ಲಕ್ಷಣ ಕಾಣುತ್ತಿದೆ.