
ಇತ್ತೀಚೆಗಷ್ಟೇ ಠಾಣೆಗೆ ಬಂದಿದ್ದ ಪೊಲೀಸ್ ಇನ್ಸ್ಪೆಕ್ಟರ್ ಗೋವಿಂದರಾಜು, ಲಂಚ ಪಡೆಯುವಾಗ ಲೋಕಾಯುಕ್ತ ಪೊಲೀಸರ ಬಲೆಗೆ ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದಿದ್ದಾರೆ. ಕಾನೂನು ಪಾಲಿಸಬೇಕಾದ ಅಧಿಕಾರಿಯೇ ಹಣಕ್ಕಾಗಿ ಅಮಾಯಕರನ್ನು ಪೀಡಿಸುತ್ತಿದ್ದ ಈ ಪ್ರಕರಣ, ಪೊಲೀಸ್ ಇಲಾಖೆಯ ಭ್ರಷ್ಟಾಚಾರವನ್ನು ಬಯಲು ಮಾಡಿದೆ.
ಆತ ಪೊಲೀಸ್ ಇನ್ಸ್ಪೆಕ್ಟರ್. 6-7 ವರ್ಷ ವಿಐಪಿ ಸೆಕ್ಯುರಿಟಿ, ಪಿಎಸ್ಐ ಆಗಿ 6 ತಿಂಗಳ ಹಿಂದಷ್ಟೇ ಠಾಣೆಗೆ ಬಂದು ಸೆಟಲ್ ಆಗಿದ್ದ. ಕಾನೂನು ಕಾಪಾಡ್ತೀನಿ ಅಂತ ಬಂದವನು ಮಾಡಿದ್ದು ಮಾತ್ರ ಹಲ್ಕಾ ಕೆಲಸ. ಅದೆಷ್ಟು ಕೊಟ್ಟು ಆ ಹುದ್ದೆಗೆ ಬಂದಿದ್ದನೋ ಏನೋ. ಆ ಹಣವನ್ನ ರಿಕವರಿ ಮಾಡಲು ಹೋಗಿ ಅಮಾಯಕರ ಜೀವ ಹಿಂಡುತ್ತಿದ್ದ. ಆದ್ರೆ ಎಲ್ಲದಕ್ಕೂ ಕ್ಲೈಮ್ಯಾಕ್ಸ್ ಅಂತ ಇರುತ್ತಲ್ಲ. ಇವತ್ತು ಆತನ ಪಾಪದ ಕೊಡ ತುಂಬಿತ್ತು. ಲಂಚ ತಗೆದುಕೊಳ್ಳುವಾಗ್ಲೇ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಅಷ್ಟಕ್ಕೂ ಅಲ್ಲಿ ಸಿಕ್ಕಿಬಿದ್ದ ಅಧಿಕಾರಿ ಯಾರು? ಆತನನ್ನ ಲೋಕಾಯುಕ್ತ ಟ್ರ್ಯಾಪ್ ಮಾಡಿದ್ದಾದ್ರೂ ಹೇಗೆ? ಪೊಲೀಸಪ್ಪನೊಬ್ಬನ ಲಂಚಾವತಾರದ ಕಥೆ ನೋಡೋಣ ಬನ್ನಿ
ಪೊಲೀಸ್ ಆಗಲು ಬಂದವನು ಲಂಚಕೋರ ಆಗಿಬಿಟ್ಟ. ಲೋಕಾಯುಕ್ತ ಪೊಲೀಸರು ಗೋವಿಂದರಾಜುನನ್ನ ಸರಿಯಾಗೇ ಲಾಕ್ ಮಾಡಿಕೊಂಡರು. ಅಷ್ಟಕ್ಕೂ ಇನ್ಸ್ಪೆಕ್ಟರ್ ಗೋವಿಂದರಾಜು ದೂರುದಾರನ ಬಳಿ ಲಂಚ ಕೇಳಿದ್ದೇಕೆ? ಆ ದೂರುದಾರ ಯಾವ ಕೇಸ್ನಲ್ಲಿ ಲಾಕ್ ಆಗಿದ್ದ? ಆ ಪ್ರಕರಣ ಇನ್ನೂ ರೋಚಕವಾಗಿದೆ.
ಇಂಥವರಿಂದಲೆ ಡಿಪಾರ್ಟ್ಮೆಂಟ್ಗೆ ಕೆಟ್ಟ ಹೆಸರು ಬರುತ್ತಿರೋದು. ಆದ್ರೆ ಗೋವಿಂದರಾಜುರಂಥ ಕ್ರಿಮಿಗಳು ತುಂಬಾನೇ ಇವೆ.. ಅವರಿಗೂ ಒಂದು ದಾರಿ ತೋರಿಸಬೇಕು.