ಅಂಡರ್‌ವರ್ಲ್ಡ್‌ಗೆ ಗುಡ್ ಬೈ ಹೇಳಿ ರಾಜಕೀಯಕ್ಕೆ ಬಂದ ಚಕ್ರೆ, ಹೆಲಿಕಾಪ್ಟರ್‌ನಲ್ಲಿ ಬಂದು ಪಾಂಪ್ಲೆಟ್ ಹಂಚಿದ್ದ!

ಅಂಡರ್‌ವರ್ಲ್ಡ್‌ಗೆ ಗುಡ್ ಬೈ ಹೇಳಿ ರಾಜಕೀಯಕ್ಕೆ ಬಂದ ಚಕ್ರೆ, ಹೆಲಿಕಾಪ್ಟರ್‌ನಲ್ಲಿ ಬಂದು ಪಾಂಪ್ಲೆಟ್ ಹಂಚಿದ್ದ!

Published : Sep 30, 2022, 09:44 PM ISTUpdated : Sep 30, 2022, 09:45 PM IST

ಡಾನ್‌ ಮುಗಿಸೋಕೆ ಹೋಗಿ ಬರಿಗೈಲಿ ವಾಪಾಸ್‌ ಬಂದ ಚಕ್ರೆಗೆ ಏನ್‌ ಅನಿಸಿತೋ ಗೊತ್ತಿಲ್ಲ. ಅಂಡರ್‌ವರ್ಲ್ಡ್‌ನಿಂದ ದೂರ ಉಳಿಯೋಕೆ ತೀರ್ಮಾನಿಸಿದ್ದ. ಜನರ ಕೊಲ್ಲೋ ಬದಲು ಕಾಯೋ ಕೆಲಸ ಮಾಡೋಕೆ ಯೋಚನೆ ಮಾಡಿ 1996ರಲ್ಲಿ ಚುನಾವಣೆಗೆ ಗೆದ್ದು ಗೆಲುವು ಕೂಡ ಸಾಧಿಸಿದ. ಬಳಿಕ ತನ್ನ ಪತ್ನಿಯನ್ನೂ ಗೆಲ್ಲಿಸಿದ.

ಬೆಂಗಳೂರು (ಸೆ. 30): ಕ್ರಿಸ್ಟೋಫರ್ ಚಕ್ರವರ್ತಿ ಅಲಿಯಾಸ್ ಚಕ್ರೆಯ ಅಂಡರ್ವರ್ಲ್ಡ್ ಜರ್ನಿ ಬಗ್ಗೆ ನಾವು ಕಳೆದ 3 ದಿನಗಳಿಂದ ಹೇಳುತ್ತಲೇ ಬಂದಿದ್ದೇವೆ. ನಿನ್ನೆ ನಾವು ಚಕ್ರೆ, ಮುತ್ತಪ್ಪ ರೈ ಹಾಕಿಕೊಟ್ಟ ಸ್ಕೆಚ್ನಂತೆ ಸೆಂಟ್ರಲ್ ಜೈಲ್ ಎದುರಿಗೇ ಅಂದಿನ ಭೂಗತ ದೊರೆ ಜೈರಾಜ್‌ ಮೇಲೆ ಅಟ್ಯಾಕ್ ಮಾಡ್ತಾರೆ. ಆದ್ರೆ ಅವತ್ತು ಜೈರಾಜ್‌ನ ಟೈಂ ಚೆನ್ನಾಗಿತ್ತು. ಚಕ್ರೆ ಸೇರಿ ಏಳೆಂಟು ಮಂದಿ ಡಾನ್ ಮೇಲೆ ಅಟ್ಯಾಕ್ ಮಾಡಿದ್ರೂ ಅವರಿಗೆಲ್ಲಾ ಟಫ್ ಫೈಟ್ ಕೊಟ್ಟು ಜೀವ ಉಳಿಸಿಕೊಂಡು ಜೈಲಿನೊಳಗೆ ನುಗ್ಗಿಬಿಟ್ಟ. ಯಾವಾಗ ಜೈರಾಜ್ ತನ್ನನ್ನ ಕೊಲ್ಲೋದಕ್ಕೆ ಒಂದು ಗ್ಯಾಂಗ್ ರೆಡಿಯಾಗಿಬಿಟ್ಟಿದೆ ಅಂತ ಗೊತ್ತಾಯ್ತೋ ಆತ ಎದುರಾಳಿಗಳನ್ನ ಮುಗಿಸೋದಕ್ಕೆ ಸಜ್ಜಾಗಿಬಿಟ್ಟಿದ್ದ. 

ಆದರೆ, ಕೊನೆಗೆ ತಾನು ರಿವೆಂಜ್ ತೆಗೆದುಕೊಳ್ಳೋದಕ್ಕೂ ಮೊದಲೇ ಕೊಲೆಯಾಗಿಬಿಟ್ಟ. ಇತ್ತ ಡಾನ್‌ಅನ್ನು ಮುಗಿಸಲು ಹೋದ ಚಕ್ರೆ ಬರಿಗೈಯಲ್ಲಿ ವಾಪಸ್ ಬಂದ ನಂತರ ಅದೇನು ಬುದ್ಧಿ ಬಂತೋ ಏನೋ ಅಂಡರ್ ವರ್ಲ್ಡ್‌ನಿಂದ ದೂರ ಉಳಿಯಲು ನಿರ್ಧರಿಸಿಬಿಟ್ಟ. ಜನರ ಮಧ್ಯೆ ಬದುಕೋ ಮನಸು ಮಾಡಿದ. 

ಡಾನ್‌ ಆಗಿ ಮೆರೆದ್ರೂ, ವಿಧಿಯಾಟಕ್ಕೆ ಶರಣಾದ ಬೆಂಗಳೂರು ಭೂಗತ ಲೋಕದ ಚಕ್ರೆ!

ಯಾವಾಗ ಚಕ್ರೆಗೆ ಅಂಡರ್ವರ್ಲ್ಡ್ ಸಾಕು ಅಂತೆನ್ನಿಸಿಬಿಡ್ತೋ ಸೀದಾ ಆತ ಹೋಗಿದ್ದು ತಾನು ಹುಟ್ಟಿ ಬೆಳದ ರಾಮಚಂದ್ರಪುರಕ್ಕೆ. ಅಲ್ಲಿನ ಜನರ ಪ್ರೀತಿ ಸಂಪಾದಿಸಲು ಶುರು ಮಾಡಿದ. ತಾನು ಭೂಗತಲೋಕದಲ್ಲಿ ಸಂಪಾದಿಸಿದ ಹಣವನ್ನೆಲ್ಲಾ ತನ್ನ ಜನರ ಸಹಾಯಕ್ಕೆ ಬಳಸಿಕೊಂಡ. ನೋಡ ನೋಡ್ತಿದ್ದಂತೆ ರಾಮಚಂದ್ರಪುರದ ನೆಚ್ಚಿನ ಚಕ್ರೆಯಾದ. ಇನ್ನೂ ಜನರ ಪ್ರೀತಿಯನ್ನೇ ಬಂಡವಾಳವಾಗಿಟ್ಟುಕೊಂಡು ಚಕ್ರೆ 1996ರಲ್ಲಿ ಕಾರ್ಪೊರೇಷನ್ ಎಲೆಕ್ಷನ್‌ಗೆ ಕಂಟೆಸ್ಟ್ ಮಾಡ್ತಾನೆ. ಭರ್ಜರಿ ಗೆಲವೂ ಕೂಡ ದಾಖಲಿಸುತ್ತಾನೆ. 

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!