ಮುರುಘಾ ಶರಣ ಕೇಸ್‌ನಲ್ಲಿ ಹಲವು ಅನುಮಾನಗಳು: ಕಾಟನ್‌ಪೇಟೆ ಠಾಣೆಯಲ್ಲಿ ನಡೆದಿದ್ದೇನು?

Aug 27, 2022, 5:50 PM IST

ಚಿತ್ರದುರ್ಗ, (ಆಗಸ್ಟ್.27): ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಶರಣರ ವಿರುದ್ಧ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದಿದ್ದು, ಸ್ವಾಮೀಜಿ ಸೇರಿ ಐವರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. 

ಮುರುಘಾ ಶ್ರೀ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಟ್ವಿಸ್ಟ್, ಮಾಜಿ ಆಡಳಿತಾಧಿಕಾರಿ ವಿರುದ್ಧ ರೇಪ್ ಕೇಸ್

ಮುರುಘಾಮಠ ಬಾಲಕಿಯರ ವಸತಿ ನಿಲಯದ ಇಬ್ಬರು ಅಪ್ರಾಪ್ತ ವಿದ್ಯಾರ್ಥಿನಿಯರು ದಿನಾಂಕ:24.07.2022 ರಂದು ವಸತಿ ನಿಲಯದ ಗೇಟ್‌ ಪಾಸ್ ಪಡೆದು ಹೊರಗೆ ಹೋದ ಅಪ್ರಾಪ್ತ ಬಾಲಕಿಯರು ಅದೇ ದಿನ ಬೆಂಗಳೂರಿನ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಹಾಜರ್ ಆಗಿದ್ದಾರೆ. ಬಳಿಕ ಕಾಟನ್‌ಪೇಟೆ ಠಾಣೆಯಲ್ಲಿ ನಡೆದದ್ದೇನು? ಹತ್ತು ಹಲವಾರು ಅನುಮಾನಗಳು ಹುಟ್ಟಿಕೊಂಡಿವೆ.