ದುಡ್ಡು ಕೇಳಲಿಲ್ಲ ಒಡವೆ ಮುಟ್ಟಲಿಲ್ಲ..! ಜಾತ್ರೆಗೆ ಹೋಗಿದ್ದ ವೃದ್ಧೆಯ ಕತ್ತು ಸೀಳಿದಾತ ಯಾರು ?

ದುಡ್ಡು ಕೇಳಲಿಲ್ಲ ಒಡವೆ ಮುಟ್ಟಲಿಲ್ಲ..! ಜಾತ್ರೆಗೆ ಹೋಗಿದ್ದ ವೃದ್ಧೆಯ ಕತ್ತು ಸೀಳಿದಾತ ಯಾರು ?

Published : Dec 15, 2023, 02:19 PM IST

ಅವಳ ಹೆಣ ಹಾಕಲು ಮಧ್ಯರಾತ್ರಿವರೆಗೆ ಕಾದು ಕೂತಿದ್ದ!
ವೃದ್ಧೆಯನ್ನ ಕೊಂದವನು ಅವಳ ಮನೆಯಲ್ಲೇ ಇದ್ದ..!
ಅಮ್ಮ-ಮಗಳ ಎದುರು ನಿಂತು ಇರಿದಿದ್ದು ಒಬ್ಬಳಿಗೇ..!

ಅವರು ಅಮ್ಮ ಮಗಳು, ಕೂಲಿ ನಾಲಿ ಮಾಡಿಕೊಂಡು ಬದುಕುತ್ತಿದ್ದರು. ಮಗಳು ಗಾರ್ಮೆಂಟ್ಸ್‌ನಲ್ಲಿ ಕೆಲಸಕ್ಕೆ ಹೋಗಿ ವಿಕಲಚೇತನ ತಾಯಿಯನ್ನ ಮತ್ತು ಮಗುವನ್ನ ನೋಡಿಕೊಳ್ತಿದ್ದಳು. ಆವತ್ತು ಊರ ಜಾತ್ರೆಗೆ(Fair) ಎಂದು ಇಡೀ ಕುಟುಂಬ ದೇವರ ಪೂಜೆಗೆ ಹೋಗಿತ್ತು. ಮಧ್ಯರಾತ್ರಿ ಸಮಯ. ಪೂಜೆ ಮುಗಿಸಿ ವಾಪಸ್ ಆಗುತ್ತಿರುವಾಗಲೇ ತಾಯಿಯ ಮೇಲೆ ಹಂತಕನೊಬ್ಬ ಅಟ್ಯಾಕ್(attack) ಮಾಡಿ ಕತ್ತು ಸೀಳಿ ಎಸ್ಕೇಪ್ ಆಗಿದ್ದ. ಎಲ್ಲರೂ ಒಡವೆ ಕದಿಯಲು ಬಂದವನು ಹೀಗೆ ಮಾಡಿದ್ದಾನೆ ಅಂತ ಅಂದುಕೊಂಡಿದ್ರು. ಆದ್ರೆ ತನಿಖೆ ನಡೆಸಿದ ಪೊಲೀಸರಿಗೆ(police) ಇದು ಸರಗಳ್ಳ ಮಾಡಿದ ಕೆಲಸ ಅನ್ನಿಸಲೇ ಇಲ್ಲ. ಅಳಿಯ ಕಾಂತರಾಜುನೇ ಅತ್ತೆ(mother in law) ಪಾರ್ವತಮ್ಮಳ ಹೆಣ ಹಾಕಿದ್ದ. ಅವರಿಬ್ಬರು ಮದುವೆಯಾಗಿ 5 ವರ್ಷ ಕಳೆದಿತ್ತು. ಮುದ್ದಾದ ಗಂಡು ಮಗು ಕೂಡ ಆಗಿತ್ತು. ಆದ್ರೆ ಮಗು ಆದಮೇಲೆ ಗಂಡ ತನ್ನ ವರಸೆ ಬದಲಿಸಿದ್ದ. ಪ್ರತೀನಿತ್ಯ ಕುಡಿಯೋದು ಮನೆಗೆ ಬಂದು ಜಗಳವಾಡೋದು ಇದೇ ಅವನ ಕಾಯಕವಾಗಿತ್ತು. ಮಗಳ ಜೀವನ ಕಣ್ಣಮುಂದೆಯೇ ಹಾಳಾಗ್ತಿರೋದನ್ನ ನೋಡಿದ ಪಾರ್ವತಮ್ಮ ಮಗಳು ಮತ್ತು ಮೊಮ್ಮಗನನ್ನ ಕರೆದುಕೊಂಡು ತನ್ನ ಮನೆಗೆ ಬಂದುಬಿಟ್ಟಳು. ಇನ್ನೂ ಮಗಳು ಕೂಡ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿಕೊಂಡು ತನ್ನ ಜೀವನ ನಡೆಸಿಕೊಂಡು ಹೋಗ್ತಿದ್ದಳು. ಆದ್ರೆ ಯಾವಾಗ ಹೆಂಡತಿ 2 ವರ್ಷವಾದ್ರೂ ವಾಪಸ್ ಮನೆಗೆ ಬರಲಿಲ್ಲವೋ ಗಂಡ ಕೆಂಡಮಂಡಲನಾಗಿಬಿಟ್ಟಿದ್ದ. ತನ್ನ ಸಂಸಾರ ಈಗಾಗಲು ಕಾರಣ ಅತ್ತೆಯೇ ಅಂದುಕೊಂಡು ಆವತ್ತೊಂದು ದಿನ ಚಾಕು ಹಿಡಿದು ಅತ್ತೆ ಮನೆ ಕಡೆ ಹೊರಟೇಬಿಟ್ಟ.ಅವಳನ್ನ ಹಿಂಬಾಲಿಸಿಕೊಂಡು ಬಂದು ಅವಳ ಕತ್ತು ಸೀಳಿದ್ದ. ತನ್ನ ಸಂಸಾರ ಹಾಳಾಗಲು ಅತ್ತೆಯೇ ಕಾರಣವೆಂದು ಅತ್ತೆಯನ್ನೇ ನಡುರಾತ್ರಿಯಲ್ಲಿ ಭೀಕರವಾಗಿ ಹತ್ಯೆ ಮಾಡಿ ಇದೀಗ ಪೊಲೀಸರ ಅಥಿತಿಯಾಗಿದ್ದಾನೆ ಅಳಿಯ.

ಇದನ್ನೂ ವೀಕ್ಷಿಸಿ:  ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ: ನಟಿ ಈ ಬಗ್ಗೆ ಹೇಳಿದ್ದೇನು..?

22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
Read more