ಮಂಗಳೂರು ಆಟೋ ಸ್ಫೋಟ ಪ್ರಕರಣ: ಕೃತ್ಯಕ್ಕೆ ನಕಲಿ ಆಧಾರ್‌ ಕಾರ್ಡ್‌ ಬಳಕೆ

Nov 20, 2022, 3:42 PM IST

ಮಂಗಳೂರು ಕಂಕನಾಡಿ ಸಮೀಪ ಆಟೋದಲ್ಲಿ ಕುಕ್ಕರ್ ಒಂದು ಸ್ಫೋಟಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಗಾಯಗೊಂಡಿರುವ ಪ್ರಯಾಣಿಕನ ಬಳಿ ಪತ್ತೆಯಾದ ಆಧಾರ್ ಕಾರ್ಡ್​ ನಕಲಿ ಎಂಬ ಮಾಹಿತಿ ಲಭ್ಯವಾಗಿದೆ. ಶಂಕಿತ ವ್ಯಕ್ತಿಯು ಆಧಾರ್‌ ಕಾರ್ಡ್‌ ನಕಲು ಮಾಡಿರುವುದು ಪಕ್ಕಾ ಎನ್ನಲಾಗಿದ್ದು, ಹುಬ್ಬಳ್ಳಿ ಮೂಲದ ಪ್ರೇಮ್‌ ರಾಜ್‌ ಎನ್ನುವರ ಆಧಾರ್‌ ಕಾರ್ಡ್‌ ನಕಲು ಮಾಡಿ, ಫೋಟೋ ಮಾತ್ರ ಚೇಂಜ್‌ ಮಾಡಿದ್ದಾರೆ. ಈ ಹಿಂದೆ ಪ್ರೇಮ್‌ ರಾಜ್‌ ಆಧಾರ್ ಕಾರ್ಡ್ ಕಳೆದುಕೊಂಡಿದ್ದರು. ಸಧ್ಯ ತುಮಕೂರಿನಲ್ಲಿ ಪ್ರೇಮ್‌ ರಾಜ್‌ ತುಮಕೂರಿನಲ್ಲಿ ಕೆಲಸ ಮಾಡುತ್ತಿದ್ದು, ನಮ್ಮ ಮಗ ಅಮಾಯಕ, ಘಟನೆಗೂ ಅವನಿಗೂ ಸಂಬಂಧ ಇಲ್ಲ ಎಂದ ಪ್ರೇಮ್‌ ರಾಜ್‌ ಪೋಷಕರು ಹೇಳಿದ್ದಾರೆ.

Bengaluru: ಟಿವಿ, ಫ್ರಿಡ್ಜ್, ಗೀಸರ್‌ಗಳ ರಿಪೇರಿ ಹೆಸರಿನಲ್ಲಿ ವಂಚಿಸುತ್ತಿದ್ದವನ ಬಂಧನ