KSRTC ಬಸ್​​ ಡ್ರೈವರ್ ಲವ್ ಸ್ಟೋರಿ: ರೀಲ್ಸ್ ನೋಡಿ ಪ್ರೀತಿಸಿ ಮದ್ವೆಯಾದವ ಈಗ ಕೈಕೊಟ್ಟು ಪರಾರಿ

KSRTC ಬಸ್​​ ಡ್ರೈವರ್ ಲವ್ ಸ್ಟೋರಿ: ರೀಲ್ಸ್ ನೋಡಿ ಪ್ರೀತಿಸಿ ಮದ್ವೆಯಾದವ ಈಗ ಕೈಕೊಟ್ಟು ಪರಾರಿ

Published : Jun 12, 2025, 02:46 PM IST

ರೀಲ್ಸ್‌ನಲ್ಲಿ ಪರಿಚಯವಾಗಿ ಮದುವೆಯೂ ಆದ ಬಳಿಕ ಯುವಕನೋರ್ವ ಪತ್ನಿಯನ್ನು ಬಿಟ್ಟು ಪರಾರಿಯಾಗಿದ್ದು, ಆತನನ್ನು ಹುಡುಕಿಕೊಡುವಂತೆ ಪತ್ನಿಯೊಬ್ಬಳು ಠಾಣೆ ಮೆಟ್ಟಿಲೇರಿದ್ದಾಳೆ.

ಆತ KSRTC ಬಸ್​​ ಡ್ರೈವರ್​​.. ಬೆಂಗಳೂರು ಟೂ ಮೈಸೂರು ಅವನ ರೂಟ್​​. ಆದ್ರೆ ಟೈಂ ಸಿಕ್ಕಾಗಲೆಲ್ಲಾ ಆತ ರೀಲ್ಸ್​​ನಲ್ಲಿ ಬ್ಯುಸಿ.. ಆದ್ರೆ ರೀಲ್ಸ್​​ ತಿರುವಾಕುವಾಗ್ಲೇ ಅವನಿಗೆ ಅವಳೊಬ್ಬಳ ವಿಡಿಯೋಗಳು ಇಷ್ಟವಾಗಿಬಿಟ್ಟಿವೆ.. ತಡಮಾಡದೇ ಡಿಎಂ ಮಾಡಿದ್ದಾನೆ ಅಷ್ಟೇ.. ಆತ್ತಕಡೆಯಿಂದ ಆಕೆಯೂ ಮೆಸೇಜ್​ ಮಾಡಿದ್ದಾಳೆ... ಇಬ್ಬರಿಗೂ ರೀಲ್ಸ್​​ನಲ್ಲೇ ಪರಿಚಯವಾಗಿ ಕೊನೆಗೂ ಪ್ರೇಮಿಗಳಾಗಿದ್ದಾರೆ.. ಊರೂರು ಸುತ್ತಿದ್ದಾರೆ.. 2 ವರ್ಷ ಲವ್​ ಮಾಡಿ ಕೊನೆಗೂ ಮದುವೆಯಾಗಿದ್ದಾರೆ.. ಆದ್ರೆ ಮದುವೆಯಾಗಿ ಒಂದು ವರ್ಷವಾಗಿಲ್ಲ.. ಇವತ್ತು ಆ ಹೆಣ್ಣುಮಗಳು ಗಂಡನನ್ನ ಹುಡುಕಿಕೊಡಿ ಅಂತ ಪೊಲೀಸ್​​ ಠಾಣೆ ಮೆಟ್ಟಿಲ್ಲೇರಿದ್ದಾಳೆ.. ತಾನು ಪ್ರೀತಿಸಿದವನನ್ನ ಹುಡುಕಿಕೊಂಡು ಊರೂರು ಸುತ್ತುತ್ತಿದ್ದಾಳೆ .. ಅಷ್ಟಕ್ಕೂ ಆಕೆಯನ್ನ ಪ್ರೀತಿಸಿದ ಹುಡುಗ ಎಲ್ಲಿಗೆ ಹೋದ..? ಏನಾಯ್ತು ಒಂದು ವರ್ಷದ ಮದುವೆಯ ಬದುಕಿನಲ್ಲಿ.. ವಾರೆಂಟಿ ಇಲ್ಲದ ರೀಲ್ಸ್​​ ಲವ್​​ನ ಕಂಪ್ಲೀಟ್​​ ಕಥೆಯೇ ಇವತ್ತಿನ ಎಫ್​.ಐ.ಆರ್​​.

ಮತ್ತೊಂದು ಪ್ರಕರಣದಲ್ಲಿ ಆಕೆ ವಿವಾಹಿತ ಮಹಿಳೆ.. ಎಂದಿನಂತೆ ಮನೆ ಕೆಲಸ ಮುಗಿಸಿ, ತನ್ನ ಮಕ್ಕಳನ್ನು ಶಾಲೆಗೆ ಬಿಟ್ಟು, ಕೆಲಸಕ್ಕೆ ಹೊರಟ್ಟಿದ್ಳು.. ಆದ್ರೆ ಆಕೆಯನ್ನೇ ಹಿಂಬಾಲಿಸುತ್ತಾ ಬಂದಿದ್ದ ಆಗಂತುಕರು, ಕ್ಷಣಾರ್ಧದಲ್ಲೇ ಆಕೆಯ ಕೊಂದು ಎಸ್ಕೇಪ್ ಆಗಿದ್ದಾರೆ. ಇನ್ನೂ ತನಿಖೆ ನಡೆಸಿದ ಪೊಲೀಸರು ಅದೇ ರಸ್ತೆಯಲ್ಲಿದ್ದ ಸಿಸಿ ಕ್ಯಾಮರಾವನ್ನ ಪರೀಸೀಲಿಸುತ್ತಾರೆ.. ಆಗಲೇ ನೋಡಿ ಕೊಲೆಗಾರ ಯಾರು ಅಂತ ಗೊತ್ತಾಗೋದು.. ಅಂದಹಾಗೆ ಆ ಮಹಿಳೆಯನ್ನ ಕೊಂದಿದ್ಯಾರು ಗೊತ್ತಾ..? ಆಕೆಯ ಗಂಡ.

ಇವತ್ತಲ್ಲಾ ನಾಳೆ ವೆಂಕಟೇಶ ಸಿಕ್ಕೇ ಸಿಗ್ತಾನೆ.. ಅದ್ರೆ ಜೊತೆಯಲ್ಲಿದ್ದಾಗ ನೆಟ್ಟಗೆ ಬಾಳಿಸಲಾಗದೇ.. ತನ್ನ ಪಾಡಿಗೆ ಕೆಲಸ ಮಕ್ಕಳು ಅಂತಿದ್ದ ರೂಪಾಳನ್ನ ಕೊಂದ ಆ ಕಿರಾತಕನಿಗೆ ತಕ್ಕ ಶಿಕ್ಷೆಯಾಗಲೇಬೇಕು ಅಂತ ಒತ್ತಾಯಿಸ್ತಿದ್ದಾರೆ ಸ್ಥಳೀಯರು.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
24:37ಚಿಕ್ಕೇಜಮಾನನ ಸಾವಿನ ಸುತ್ತ ಅನುಮಾನದ ಹುತ್ತ: ಲವರ್‌ಗಾಗಿ ಗಂಡನ ಕತೆ ಮುಗಿಸಿದ 2 ಮಕ್ಕಳ ತಾಯಿ
06:05ಟೆರೆರಿಸ್ಟ್, ರೇಪಿಸ್ಟ್, ರೌಡಿಗಳಿಗೆ ಜೈಲಲ್ಲಿ ರಾಜಾತಿಥ್ಯ, ದರ್ಶನ್‌ಗೆ ಮಾತ್ರ ಸಿಕ್ತಿಲ್ಲ ದಿಂಬು, ಹಾಸಿಗೆಯ ಭಾಗ್ಯ!
Read more