ಸ್ನೇಹಿತನ ಹೆಂಡತಿ ಮೇಲೆಯೇ ಕಣ್ಣು ಹಾಕಿದ ಪಾಪಿ: ಪ್ರಶ್ನಿಸಿದ್ದಕ್ಕೆ ಕೊಂದೇ ಬಿಟ್ಟ..!

ಸ್ನೇಹಿತನ ಹೆಂಡತಿ ಮೇಲೆಯೇ ಕಣ್ಣು ಹಾಕಿದ ಪಾಪಿ: ಪ್ರಶ್ನಿಸಿದ್ದಕ್ಕೆ ಕೊಂದೇ ಬಿಟ್ಟ..!

Published : Nov 06, 2022, 01:49 PM IST

ಇಂಥವರಿಂದಲೇ ಸ್ನೇಹ ಅನ್ನೋ ಪವಿತ್ರ ಸಂಬಂಧವನ್ನ ಅನುಮಾನದಿಂದ ನೋಡುವಂತಾಗಿದೆ. 

ಬೆಳಗಾವಿ(ನ.06): ಅವರಿಬ್ಬರೂ ಒಂದೇ ಕಾಲೋನಿಯಾದ್ರೂ ಅಕ್ಕಪಕ್ಕದ ಓಣಿಯಲ್ಲಿ ವಾಸವಿದ್ದರು. ಒಬ್ಬರ ಮನೆಗೆ ಒಬ್ಬರು ಹೋಗೊದನ್ನೂ ಸಹ ಮಾಡ್ತಿದ್ರು. ಒಂದೇ ಮಾತಿನಲ್ಲಿ ಹೇಳಬೇಕಂದ್ರೆ ಅವರು ಕುಚುಕು ಗೆಳೆಯರು. ಆದ್ರೆ ಸ್ನೇಹಿತನಿಗೆ ಸಲುಗೆ ಕೊಟ್ಟಿದ್ದೇ ಅಲ್ಲಿ ತಪ್ಪಾಗಿ ಹೋಗಿತ್ತು. ಸ್ನೇಹಿತ ಅಂತ ಮನೆಯೊಳಗೆ ಬಿಟ್ಟಕೊಂಡ್ರೆ ಆತ ಮಾಡಿದ್ದು ಮನೆಹಾಳ್ ಕೆಲಸ. ಆತ ಸ್ನೇಹಿತನ ಪತ್ನಿ ಮೆಲೇ ಕಣ್ಣಾಕಿಬಿಟ್ಟಿದ್ದ. ಈ ವಿಷ್ಯ ಗೊತ್ತಾಗಿ ಯಾಕಪ್ಪ ಹೀಗೆ ಮಾಡಿದೆ ಅಂದ್ರೆ ಅವನನ್ನೇ ಕೊಂದು ಮುಗಿಸಿಬಿಟ್ಟಿದ್ದ. ಹೀಗೆ ಪತ್ನಿ ಮೇಲೆ ಕಣ್ಣು ಹಾಕಿದ್ದ ಸ್ನೇಹಿತನನ್ನ ಪ್ರಶ್ನೆ ಮಾಡಿದ್ದಕ್ಕೇ ಹೆಣವಾದ ಸ್ನೇಹಿತನ ಕಥೆಯೇ ಇವತ್ತಿನ ಎಫ್ಐಆರ್.

ಪ್ರಶಾಂತ್ ಎರಡು ತಿಂಗಳ ಹಿಂದಷ್ಟೇ ಮದುವೆ ಕೂಡ ಆಗಿದ್ದ. ಇತ್ತಿಚೀನ ದಿನಗಳಲ್ಲಿ ಅದೊಂದು ವಿಚಾರಕ್ಕೆ ಪ್ರಶಾಂತ್ ಮತ್ತು ಮಾರುತಿ ನಡುವಿನ ಸ್ನೇಹ ಹದಗೆಟ್ಟಿದ್ದರಿಂದ ಒಬ್ಬರನ್ನೊಬ್ಬರು ನೋಡಿಕೊಳ್ತೆವಿ ಅನ್ನೋ ಮಟ್ಟಿಗೆ ಮಾತನಾಡಿಕೊಂಡು ಓಡಾಡುತ್ತಿದ್ದರು. ಹೀಗಿದ್ದಾಗಲೇ ಅ.30ರಂದು ರಾತ್ರಿ ಅದೇ ವಿಚಾರಕ್ಕೆ ಇಬ್ಬರ ಮಧ್ಯೆ ಗಲಾಟೆಯಾಗಿ ಪ್ರಶಾಂತ್ ತನ್ನ ಗೆಳೆಯ ಮಾರುತಿಯನ್ನ ಹತ್ಯೆ ಮಾಡಿ ಬಿಡ್ತಾನೆ.

ಜೊತೆಯಲ್ಲಿ ಕೆಲಸ ಮಾಡುತ್ತಿದ್ದವನನ್ನೇ ಕೊಂದ್ರು: ರೈಲ್ವೆ ಹಳಿ ಮೇಲೆ ಶವ ಎಸೆಯಲು ಬಂದು ತಗ್ಲಾಕೊಂಡ್ರು!

ಯಾವಾಗ ಪ್ರಶಾಂತನ ಹೆಂಡತಿಗೆ ತಾನು ಮಾಡಿದ್ದು ನೀಚ ಕೆಲಸದ ಬಗ್ಗೆ ಗೊತ್ತಾಯ್ತೋ ಆತನಿಗೆ ಮನೆಯಲ್ಲಿ ಬೆಲೆಯೇ ಇಲ್ಲದಂತಾಗಿಬಿಡುತ್ತೆ. ಬೀದಿಯಲ್ಲೂ ಮರ್ಯಾದೆ ಇಲ್ಲ. ಮನೆಯಲ್ಲೂ ಇದ್ದ ಮರ್ಯಾದೆ ಹೊಯ್ತು. ಇದಕ್ಕೆಲ್ಲಾ ಕಾರಣನಾದ ತನ್ನ ಸ್ನೇಹಿತನನ್ನ ಮುಗಿಸಲೇ ಬೇಕು ಎಂದು ನಿರ್ಧರಿಸಿದ ಪ್ರಶಾಂತ ಮನೆಯಿಂದ ಒಂದು ಕೊಡಲಿ ತೆಗೆದುಕೊಂಡು ಮಾರುತಿ ಇದ್ದ ಕಡೆ ನುಗ್ಗೇ ಬಿಟ್ಟ.

ಇದನ್ನೆಲ್ಲಾ ನೋಡ್ತಿದ್ರೆ ಸ್ನೇಹಿತರನ್ನ ಮನೆಗೆ ಕರೆದುಕೊಂಡು ಹೋಗೋದಾದ್ರೂ ಹೇಗೆ..? ಇಂಥವರಿಂದಲೇ ಸ್ನೇಹ ಅನ್ನೋ ಪವಿತ್ರ ಸಂಬಂಧವನ್ನ ಅನುಮಾನದಿಂದ ನೋಡುವಂತಾಗಿರೋದು. ಸದ್ಯ ಮಾರುತಿ ಪತ್ನಿ, ಎರಡು ಮಕ್ಕಳು ಅನಾಥವಾಗಿದ್ರೇ ಪಾಪಿ ಪ್ರಶಾಂತ್ ಎರಡು ತಿಂಗಳ ಹಿಂದೆ ಮದುವೆಯಾಗಿದ್ದು ಆತನ ಹೆಂಡತಿ ಕೂಡ ಇದೀಗ ದಿಕ್ಕಿಲ್ಲದಂತಾಗಿದ್ದಾಳೆ. 
 

25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
Read more