‘ಒನ್ ಇಂಡಿಯಾ ಒನ್ ಕಾರ್ಡ್’ ಹೆಸರಲ್ಲಿ ವಂಚನೆ: ಖದೀಮರ ಜಾಲ ಪತ್ತೆ ಹಚ್ಚಿದ ವಿಜಯಪುರ ಪೊಲೀಸರು..!

‘ಒನ್ ಇಂಡಿಯಾ ಒನ್ ಕಾರ್ಡ್’ ಹೆಸರಲ್ಲಿ ವಂಚನೆ: ಖದೀಮರ ಜಾಲ ಪತ್ತೆ ಹಚ್ಚಿದ ವಿಜಯಪುರ ಪೊಲೀಸರು..!

Published : Aug 13, 2023, 11:02 AM IST

ವಿಜಯಪುರದಲ್ಲಿ ಸೈಬರ್ ಕಳ್ಳರ ಹಾವಳಿ ದಿನೇ ದಿನೇ ಜಾಸ್ತಿಯಾಗಿದೆ. ಇದೀಗ ಕೇಂದ್ರ ಸರ್ಕಾರದ ಯೋಜನೆಯನ್ನೇ ದುರ್ಬಳಕೆ ಮಾಡಿಕೊಂಡು ಜನರಿಗೆ ವಂಚನೆ ಎಸಗಲಾಗಿದೆ. ಒನ್ ನೇಷನ್ ಒನ್ ಕಾರ್ಡ್ ಹೆಸರಲ್ಲಿ ಜನರಿಗೆ ಮಹಾದೋಖ ಮಾಡಿದವನು ಪೊಲೀಸರ ಅತಿಥಿಯಾಗಿದ್ದಾನೆ.
 

ಕೇಂದ್ರ ಸರ್ಕಾರದ ಮಹತ್ವದ  ಒನ್‌ ನೇಶನ್‌ ಒನ್‌ ಕಾರ್ಡ ಯೋಜನೆ(One Nation One Card scheme) ಬಗ್ಗೆ ಈಗಾಗಲೇ ಗೊತ್ತೆ ಇದೆ. ದೇಶದ ಜನರ ಅನುಕೂಲಕ್ಕಾಗಿ ಪ್ರಧಾನಿ ನರೇಂದ್ರ ಮೋದಿ(PM Modi) ಮಾರ್ಚ್‌ 2019ಕ್ಕೆ ಈ ಯೋಜನೆ ಲಾಂಚ್‌ ಮಾಡಿದ್ರು. ಕೇಂದ್ರದ ಯೋಜನೆಯ ಹೆಸರನ್ನೇ ಬಳಸಿಕೊಂಡು ಆಸಾಮಿಯೊಬ್ಬ ಭಾರಿ ವಂಚನೆ(Fraud) ಮಾಡಿದ್ದಾನೆ. ಆದ್ರೆ ವಿಜಯಪುರ ಪೊಲೀಸರು ಖತರ್ನಾಕ್ ಕಿಲಾಡಿಯ ಹೆಡೆಮುರಿಕಟ್ಟಿದ್ದಾರೆ. ಆಂಧ್ರ ಮೂಲದ ಆಸಾಮಿಯೊಬ್ಬ ಕೇಂದ್ರ ಸರ್ಕಾರದ ಯೋಜನೆಯ ಹೆಸರಲ್ಲಿ ರಾಜ್ಯದ ಮೂಲೆ-ಮೂಲೆಯಲ್ಲೂ ಹಣ ಸುಲಿದು ಮಹಾ ವಂಚನೆ ಮಾಡಿದ್ದಾನೆ. ಮೂಲತಃ ಆಂಧ್ರದ ಅನಂತಪುರ ಜಿಲ್ಲೆಯ ಸುಧೀರ್‌ ಬಾಬು ರೆಡ್ಡಿ ಎಂಬಾತನೇ ಈ ಖತರ್ನಾಕ್‌ ಆಸಾಮಿ. ಕೇಂದ್ರ ಸಾರಿಗೆ ಪಾವತಿಗಾಗಿ ಒನ್‌ ನೇಶನ್‌ ಒನ್‌ ಕಾರ್ಡ್‌ ಜಾರಿಗೆ ತಂದಿದ್ರೆ, ಇದನ್ನ ಸುಧೀರ್‌ ರೆಡ್ಡಿ ರಾಜ್ಯದಲ್ಲಿ ಬೇರೆಯದ್ದೆ ರೀತಿಯಲ್ಲಿ ಪರಿಚಯಿಸಿದ್ದ. ಒನ್‌ ನೇಶನ್‌ ಒನ್‌ ಕಾರ್ಡ್‌ ತಯಾರಿಕೆಗೆ ಕೇಂದ್ರದಿಂದ ನನಗೆ ಕರ್ನಾಟಕ ರಾಜ್ಯದ ಟೆಂಡರ್‌ ಸಿಕ್ಕಿದೆ ಎಂದು ಜನರನ್ನ ನಂಬಿಸಿದ್ದ. ಆಧಾರ್‌ ಕಾರ್ಡ್‌, ಪ್ಯಾನ್‌ ಕಾರ್ಡ್‌, ರೇಶನ್‌ ಕಾರ್ಡ್‌, ಆರೋಗ್ಯ ಕಾರ್ಡಗಳನ್ನ ಸೇರಿಸಿ ಒಂದೇ ಕಾರ್ಡ್‌ ಆಗಿ ರೂಪಿಸಿ ಒನ್‌ ನೇಶನ್‌ ಒನ್‌ ಕಾರ್ಡಗಳನ್ನ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಮೋಸ ಮಾಡಿದ್ದಾನೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ವೀಕ್ಷಿಸಿ: ಭೂ ನುಂಗಣ್ಣರಿಗೆ ಶುರುವಾಯ್ತು ಢವಢವ: 5 ಸಾವಿರ ಎಕರೆಗೂ ಹೆಚ್ಚು ಸರ್ಕಾರಿ ಭೂಮಿ ಕಬಳಿಕೆ ಆರೋಪ

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more