ಯಾದಗಿರಿ ರೈತರಿಗೆ 2.5 ಕೋಟಿ ಪಂಗನಾಮ: ಹತ್ತಿ ಖರೀದಿಸಿ..150 ಅನ್ನದಾತರಿಗೆ ಮೋಸ

ಯಾದಗಿರಿ ರೈತರಿಗೆ 2.5 ಕೋಟಿ ಪಂಗನಾಮ: ಹತ್ತಿ ಖರೀದಿಸಿ..150 ಅನ್ನದಾತರಿಗೆ ಮೋಸ

Published : Oct 12, 2023, 11:12 AM IST

ಯಾದರಿಗಿ ರೈತರು ಬರಗಾಲವಿದ್ರೂ ಒಳ್ಳೇಯ ಹತ್ತಿ ಬೆಲೆ ಬೆಳೆದಿದ್ರು.ಈ ಬಾರಿ ಲಾಭ ಬರುತ್ತೆ ಅಂತಾ ಬೆಳೆಯನ್ನು ಮಾರಿದ್ರು..ಆದ್ರೆ 150 ರೈತರ ಬಳಿ ಹತ್ತಿ ಖರೀದಿಸಿದ ಮಾಲೀಕ ಮಾರುತಿ 2.5 ಕೋಟಿ ಹಣ ನೀಡದೇ ಕುಟುಂಬ ಸಮೇತ ಎಸ್ಕೇಪ್ ಆಗಿದ್ದಾನೆ.
 

ರೈತ ಅಂದ್ರೆ ಮುಗ್ದ..ಯಾರಿಗೂ ಕೇಡನ್ನ ಬಯಸದ ವ್ಯಕ್ತಿತ್ವ..ಆದ್ರೆ ಕಷ್ಟಪಟ್ಟು ದುಡಿಯುವ ಅನ್ನದಾತನಿಗೆ ಮಾಲೀಕನೊರ್ವ ಕೋಟಿ ಕೋಟಿ ಪಂಗನಾಮ ಹಾಕಿದ್ದಾನೆ. ಯಾದಗಿರಿ ಜಿಲ್ಲೆಯ ರಾಮಸಮುದ್ರ ಗ್ರಾಮದ ವಿಶ್ವರಾಧ್ಯ ಟ್ರೇಡರ್ಸ್ ಮಾಲೀಕ ಮಾರುತಿ ಬಲಕಲ್ ಮೋಸ ಮಾಡಿ ಎಸ್ಕೇಪ್ ಆಗಿದ್ದಾನೆ.  ತನ್ನ ಬಣ್ಣದ ಮಾತಿನಿಂದ ರೈತರಿಗೆ(Farmers) ಹಣವಿಲ್ಲದ ಖಾತೆಯ ಚೆಕ್ ನೀಡಿ ಪರಾರಿಯಾಗಿದ್ದಾನೆ. ರಾಮಸಮುದ್ರ ಗ್ರಾಮದ ಮಾರುತಿ ಬಲಕಲ್ ಎಂಬ ವ್ಯಕ್ತಿ 2022ರಲ್ಲಿ ಹಲವು ರೈತರಿಂದ ಹತ್ತಿ ಖರೀದಿ ಮಾಡಿದ್ದ.. ಸೂಕ್ತ ಸಮಯಕ್ಕೆ ಹಣವನ್ನು ನೀಡಿದ್ದ. ಇದನ್ನೇ ನಂಬಿದ ಅನ್ನದಾತರು ಮಾರುತಿ ಅಂದ್ರೆ ಸಕಾಲಕ್ಕೆ ಹಣ(money) ನೀಡುವ ನಂಬಿಕೆಗೆ ಅರ್ಹ ಅಂತಾ ಅಂದುಕೊಂಡಿದ್ರು. ಅದೇ ಕಾರಣಕ್ಕೆ ಈ ಬಾರಿಯೂ ಆತನಿಗೆ ಹತ್ತಿ ಮಾರಿದ್ದಾರೆ. ಕಳೆದ ಎರಡು ತಿಂಗಳ ಹಿಂದೆ ಹತ್ತಿ ಕ್ವಿಂಟಾಲ್‌ಗೆ 8ರಿಂದ 9ಸಾವಿರ ರೇಟ್ ಇತ್ತು.. ಆಗ ಮಾರುತಿ 150ಕ್ಕೂ ಹೆಚ್ಚು ರೈತರಿಂದ ಹತ್ತಿ ಖರೀದಿಸಿದ್ದಾನೆ. ಹತ್ತಿ ಖರಿದಿ ಮಾಡುವಾಗ ಹಣ ನೀಡಿರಲಿಲ್ಲ. ಇವತ್ತಲ್ಲ ನಾಳೆ ದುಡ್ಡು ಕೊಡ್ತಾನೆ ಅಂತಾ ರೈತರು ಸುಮ್ನಿನಿದ್ರು..ಆದ್ರೆ ಅಸಾಮಿ ಹಣವನ್ನೇ ಕೊಡಲಿಲ್ಲ. ಆಗ ರೈತರು ಪೊಲೀಸರಿಗೆ ದೂರು ನೀಡಿದ್ರು. ಆ ಬಳಿಕ ಸೆಪ್ಟೆಂಬರ್‌ನಲ್ಲಿ ಚೆಕ್ ಕೊಟ್ಟಿದ್ದಾನೆ. ಆದ್ರೆ ಅಕೌಂಟ್‌ನಲ್ಲಿ ಹಣವಿಲ್ಲದ ಕಾರಣ ರೈತರಿಗೆ ಕೊಟ್ಟ ಚೆಕ್‌ ಬೌನ್ಸ್(Check Bounce) ಆಗಿದೆ. ಇತ್ತ  ಮಾರುತಿ ಹುಡುಕೋಕೆ ಹೋದ್ರೆ ಆತ ಕುಟುಂಬ ಸಮೇತ ಎಸ್ಕೇಪ್ ಆಗಿದ್ದಾನೆ. ಮಳೆ ಕೊರತೆ ನಡುವೆಯೂ ಒಂದಿಷ್ಟು ಒಳ್ಳೆ ಬೆಳೆ ಬಂದಿತ್ತು. ಭೂ ತಾಯಿ ಕೈ ಬಿಡಲಿಲ್ಲ ಎಂದು ಬಂದ ಒಳ್ಳೆ ಫಸಲನ್ನೆಲ್ಲಾ ಮಾರಿದ್ದಾರೆ. ಆದ್ರೆ ಈಗ ಬೆಳೆಯೂ ಇಲ್ಲ..ಹಣವೂ ಇಲ್ಲದ ಪರಿಸ್ಥಿತಿ ಯಾದಗಿರಿ ರೈತರದ್ದು. ಜಿಲ್ಲೆಯ ಹಾಲಗೇರಾ, ಜೀನಕೇರಾ, ತಾಂಡಾಗಳು, ಹಳಿಗೇರಾ, ಕುರಕುಂದ ಸೇರಿದಂತೆ ಅನೇಕ ಗ್ರಾಮದ ರೈತರ ಬಳಿ ಹತ್ತಿ ಖರೀದಿಸಿ 2.5 ಕೋಟಿಯಷ್ಟು ಮೋಸ ಮಾಡಿದ್ದಾನೆ.

ಇದನ್ನೂ ವೀಕ್ಷಿಸಿ:  7 ವಿವಿ ಕುಲಪತಿಗಳಿಗೆ 7 ತಿಂಗಳಿನಿಂದ ಸಿಕ್ಕಿಲ್ಲ ಸಂಬಳ..! ಹೊಸ ವಿಶ್ವವಿದ್ಯಾಲಯಗಳ ಮೇಲೆ ಸರ್ಕಾರದ ನಿರ್ಲಕ್ಷ್ಯವೇಕೆ..?

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
Read more