Belagavi: ಪಾಗಲ್ ಪ್ರೇಮಿ ಹುಚ್ಚಾಟಕ್ಕೆ ಯುವತಿ ಬದುಕು ಬರ್ಬಾದ್..! ಆರು ವರ್ಷ ಪ್ರೀತಿಸಿ ಕೈಕೊಟ್ಟ ಕಿರಾತಕ !

Belagavi: ಪಾಗಲ್ ಪ್ರೇಮಿ ಹುಚ್ಚಾಟಕ್ಕೆ ಯುವತಿ ಬದುಕು ಬರ್ಬಾದ್..! ಆರು ವರ್ಷ ಪ್ರೀತಿಸಿ ಕೈಕೊಟ್ಟ ಕಿರಾತಕ !

Published : Feb 24, 2024, 05:33 PM ISTUpdated : Feb 24, 2024, 05:36 PM IST

ಬೇರೆ ಹುಡುಗನ ಜೊತೆಗೆ ಸಪ್ತಪದಿ ತುಳಿದ ಯುವತಿ
ಮದುವೆ ಮನೆಯಲ್ಲಿ ಪಾಗಲ್ ಪ್ರೇಮಿ ಹೈಡ್ರಾಮಾ
ಮದುವೆ ಆದ ದಿನವೇ ನೀ ನನಗೆ ಬೇಡ ಎಂದ ವರ
ಪಾಗಲ್ ಪ್ರೇಮಿ ಮನೆ ಎದುರು ಯುವತಿ ಧರಣಿ
 

ಅವರಿಬ್ಬರದ್ದು 6 ವರ್ಷದ ಪ್ರೀತಿ. ಆದ್ರೆ 6 ವರ್ಷ ಪ್ರೀತಿಸಿದವರು ಮೊನ್ನೆ ಮೊನ್ನೆಯಷ್ಟೇ ಬ್ರೇಕ್ ಅಪ್ ಮಾಡಿಕೊಂಡಿದ್ರು. ಪ್ರೇಮಿ(Lover) ಅಂತೂ ನಿನ್ನನ್ನೇ ಮದುವೆಯಾಗ್ತೀನಿ. ನೀನೇ ನನಗೆಲ್ಲಾ ಅಂತೆಲ್ಲಾ ಹೇಳಿ ಯುವತಿಯನ್ನ ನಂಬಿಸಿ ಆಕೆಯೊಂದಿಗೆ ಖಾಸಗಿ ಕ್ಷಣಗಳನ್ನ ಕಳೆದಿದ್ದ. ಅವನನ್ನ ಯುವತಿ(Woman) ಅತಿಯಾಗಿ ನಂಬಿಬಿಟ್ಟಿದ್ದಳು. ಆದ್ರೆ ಯಾವಾಗ ಆತ ಬ್ರೇಕ್ ಅಪ್ ಅಂದನೋ ಹೆತ್ತವರಿಗಾಗಿ ಬೇರೆ ಮದುವೆಯಾಗೋದಕ್ಕೆ(Marriage) ಓಕೆ ಅಂದಿದ್ಲು. ಆದ್ರೆ ಇವತ್ತು ಗಂಡನ ಮನೆಯಲ್ಲಿರಬೇಕಿದ್ದವಳು ವಾಪಸ್ ತನ್ನ ಪ್ರೇಮಿಯ ಮನೆ ಮುಂದೆ ಬಂದು ಕೂತಿದ್ದಾಳೆ. ನನಗೆ ನ್ಯಾಯ ಬೇಕು ಅಂತ ಕಣ್ಣೀರು ಇಡುತ್ತಿದ್ದಾಳೆ. 6 ವರ್ಷದ ಪ್ರೀತಿಯಲ್ಲಿ(Love) ಎಲ್ಲವೂ ನಡೆದು ಹೋಗಿತ್ತು. ಇನ್ನೂ ಕಿರಾತಕ ಮುತ್ತು ಪ್ರೇಯಸಿಯ ಖಾಸಗಿ ಫೋಟೋಗಳನ್ನೇ(Private Photos) ಸೆರೆ ಹಿಡಿದು ಇಟ್ಟುಕೊಂಡಿದ್ದ. ಆದ್ರೆ ಯಾವಾಗ ಮದುವೆ ಮಾತುಕತೆ ಬಂತೋ ಮುತ್ತು ಉಲ್ಟಾ ಹಪಡೆದಿದ್ದ. ನೀನು ನನಗೆ ಬೇಡ ಅಂತ ಡೈರೆಕ್ಟಾಗಿ ಹೇಳಿಬಿಟ್ಟಿದ್ದ. ಬಾಯ್ಫ್ರೆಂಡ್ ಕೈಕೊಟ್ಟ ಮೇಲೆ ಆ ಯುವತಿ ಹಳೆಯದನ್ನೆಲ್ಲಾ ಮರೆತು ಹೊಸ ಜೀವನ ಆರಂಭಿಸಲು ಶುರು ಮಾಡಿದ್ಲು. ಹೆತ್ತವರು ತೋರಿಸಿದ ಹುಡುಗನ ಜೊತೆ ಸಪ್ತಪದಿ ತುಳಿದ್ಲು. ಆದ್ರೆ ಇನ್ನೇನು ಮದುವೆ ಮಂಟಪದಿಂದ ಗಂಡನ ಮನೆಗೆ ಹೋಗಬೇಕು. ಅಷ್ಟರಲ್ಲೇ ಆ ಕಿರಾತಕ ಪ್ರೇಮಿ ಅಲ್ಲಿಗೆ ಎಂಟ್ರಿ ಕೊಟ್ಟಿದ್ದ. ಸೀದಾ ವರನ ಬಳಿ ಹೋಗಿ ತನ್ನ ಪ್ರೇಯಸಿಯ ಖಾಸಗಿ ಫೋಟೋಗಳನ್ನ ತೋರಿಸಿದ್ದ. ಅಷ್ಟೇ.. ಆ ಮದುವೆ ಅಲ್ಲೇ ಮುರಿದು ಬಿತ್ತು. ತಾಳಿ ಕಟ್ಟಿದವನು ಅವಳನ್ನ ಅಲ್ಲೇ ಬಿಟ್ಟು ಹೋಗಿದ್ದ. ಇನ್ನೂ ಹೊಸ ಜೀವನ ಆರಂಭಿಸುವ ಖುಷಿಯಲ್ಲಿದ್ದ ಯುವತಿಗೆ ದಿಕ್ಕೆ ತೋಚದಂತಾಗಿ ಸೀದಾ ಹೋಗಿದ್ದು ತನ್ನ ಜೀವನವನ್ನ ಬರ್ಬಾದ್ ಮಾಡಿದ ಪ್ರೇಮಿಯ ಮನೆಗೆ. ಪ್ರೀತಿಯಲ್ಲಿ ಮೋಸ ಹೋದರೂ.. ಅದನ್ನೆಲ್ಲಾ ಮರೆತು ಹೊಸ ಜೀವನದ ಕನಸು ಕಂಡಿದ್ದಳು ಆ ಯುವತಿ. ಆದ್ರೆ ಈ ಕಿರಾತಕ ಮದುವೆ ಮನೆಗೇ ನುಗ್ಗಿ ಮಾಡಿದ ಅವಾಂತರಕ್ಕೆ ಇವತ್ತು ಆ ಹೆಣ್ಣುಮಗಳು ಅಕ್ಷರಶಹ ಬೀದಿಗೆ ಬಿದ್ದಿದ್ದಾಳೆ.

ಇದನ್ನೂ ವೀಕ್ಷಿಸಿ:  Darul Uloom Deoband: ಸದ್ದಿಲ್ಲದೇ ಶುರುವಾಗಿದ್ಯಾ ಘಜ್ವಾ-ಇ-ಹಿಂದ್-ಸಿದ್ಧತೆ ? ಫತ್ವಾ ಹೊರಡಿಸಿಲ್ಲ ಎನ್ನುತ್ತಿದೆ ದಿಯೋಬಂದ್..!

23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
Read more