'ಒಮ್ಮೆ ಶರಣಾದ್ರೆ ಪ್ರೀತಿಗೆ, ಕತ್ತು ಕೊಟ್ಟಂಗೆ ಕತ್ತಿಗೆ..' ಮೂರೇ ತಿಂಗಳ ಪ್ರೀತಿಗೆ ನೂರ್ಕಾಲದ ಬದುಕು ಕಳೆದುಕೊಂಡ್ರು!

'ಒಮ್ಮೆ ಶರಣಾದ್ರೆ ಪ್ರೀತಿಗೆ, ಕತ್ತು ಕೊಟ್ಟಂಗೆ ಕತ್ತಿಗೆ..' ಮೂರೇ ತಿಂಗಳ ಪ್ರೀತಿಗೆ ನೂರ್ಕಾಲದ ಬದುಕು ಕಳೆದುಕೊಂಡ್ರು!

Published : Jan 17, 2023, 08:49 PM IST

ಇದೊಂದು ಪಾಗಲ್‌ ಪ್ರೇಮಿಯ ಕಥೆ. ಬರೀ ಮೂರೇ ತಿಂಗಳ ಪ್ರೀತಿಗೆ ನೂರ್ಕಾಲ ಸುಂದರವಾಗಿ ಬದುಕುವ ಅವಕಾಶವನ್ನೇ ಕಳೆದುಕೊಂಡ ವ್ಯಥೆ. ಜಾತ್ರೆಗೆ ಹೋಗುವ ತಯಾರಿಯಲ್ಲಿದ್ದ ಹುಡುಗಿ ಕೊಲೆಯಾಗಿ ಹೋಗಿದ್ದಳು, ಅವಳ ಪಕ್ಕದಲ್ಲೇ ಬಾಯ್‌ಫ್ರೆಂಡ್‌ ಶವ ಕೂಡ ಸಿಕ್ಕಿತ್ತು.
 

ಕೊಪ್ಪಳ (ಜ.17): ಅವರಿನ್ನೂ ಸಾಮಾನ್ಯ ಲೋಕವನ್ನೇ ನೋಡಿರದವರು. ಆದರೆ, ಪ್ರೇಮಲೋಕದಲ್ಲಿ ವಿಹರಿಸುವ ಕನಸು ಕಂಡವರು. ಶಾಲೆ ಬಿಟ್ಟು ಕಾಲೇಜು ಮೆಟ್ಟಿಲು ಹತ್ತುತ್ತಿದ್ದಂತೆ ಅವರಿಬ್ಬರು ಪ್ರೇಮದ ಪಾಶಕ್ಕೆ ತಗುಲುಹಾಕಿಕೊಂಡಿದ್ದರು. ಆದರೆ, ಇವರ ಪ್ರೇಮದ ಆಯಸ್ಸು ಇದ್ದಿದ್ದು ಕೇವಲ 3 ತಿಂಗಳು ಮಾತ್ರ. 

ಲವ್‌ಅಲ್ಲಿ ಬಿದ್ದ ಮೂರೇ ತಿಂಗಳಿಗೆ ಅವರಿಬ್ಬರು ಹೆಣವಾಗಿ ಹೋಗಿದ್ದರು.  ಪ್ರೇಯಸಿಯ ಮನೆಯಲ್ಲಿ ಇಬ್ಬರು ರಕ್ತದ ಮಡುವಿನಲ್ಲಿ ಬಿದ್ದು ಸಾವು ಕಂಡಿದ್ದರು. ಮೇಲ್ನೋಟಕ್ಕೆ ಅದು ಕೊಲೆಯಂತೆ ಕಂಡಿದ್ದರಿಂದ  ಪೊಲೀಸರ ಎಂಟ್ರಿ ಕೂಡ ಆಗಿತ್ತು. ಅವರಿಬ್ಬರನ್ನ ಅಲ್ಲಿ ಯಾರೋ ಕೊಲೆ ಮಾಡಿದ್ದಾರೆ ಅಂತ ಎಲ್ಲರೂ ಅಂದುಕೊಂಡಿದ್ದರು. ತನಿಖೆಗಿಳಿದಿದ್ದ ಪೊಲೀಸರು ಕೇಸ್‌ಗೆ ಬೇರೆಯದ್ದೇ ಟ್ವಿಸ್ಟ್ ಕೊಟ್ಟಿದ್ದರು. ಮಕರ ಸಂಕ್ರಮಣದ ದಿನ ಒಂದೇ ಮನೆಯಲ್ಲಿ ಸಿಕ್ಕ ಜೋಡಿ ಮೃತದೇಹಗಳ ಕೇಸ್‌ ಬಹಳ ಕುತೂಹಲಕಾರಿ.

Koppala: ಪ್ರೀತಿ ನೀರಾಕರಿಸಿದ ಮನೆಯವರು, ಕತ್ತು ಕೊಯ್ದುಕೊಂಡು ಪ್ರೇಮಿಗಳ ಆತ್ಮಹತ್ಯೆ

ಪಾಗಲ್‌ ಪ್ರೇಮಿ ಪ್ರಕಾಶ್‌ ಭಜಂತ್ರಿ, ಗೆಳತಿಯ ಮನೆಗೆ ಹೊಕ್ಕು ಆಕೆಯನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದ. ಒಂದೇ ಏರಿಯಾದಲ್ಲಿ ಎದುರು-ಬದುರು ಮನೆಯವರು. ಕೆಲವು ಒನ್‌ ಸೈಡ್‌ ಲವ್‌ ಅಂದ್ರೆ ಇನ್ನೂ ಕೆಲವರು ಇಬ್ಬರೂ ಪ್ರೀತಿ ಮಾಡುತ್ತಿದ್ದರು ಎಂದಿದ್ದಾರೆ. ಆದರೆ, ಇನ್ನೂ ಬಾಳಿ ಬದುಕಬೇಕಿದ್ದ ಜೀವಗಳಾಗಿತ್ತು. ಪ್ರಕಾಶ ಅವಳು ಸಿಗೋದಿಲ್ಲ ಅನ್ನೋ ಕಾರಣಕ್ಕೆ ಅವಳನ್ನ ಮುಗಿಸಿ ತಾನೂ ಚಾಕು ಹಾಕಿಕೊಂಡು ಸಾವು ಕಂಡಿದ್ದಾರೆ.

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more