ಕಲಬುರಗಿ;  ಮಕ್ಕಳ ಮೇಲೆ ಕುದಿಯುವ ಎಣ್ಣೆ ಸುರಿದಿದ್ದ ಮಹಿಳೆಗೆ 5 ವರ್ಷ ಶಿಕ್ಷೆ!

ಕಲಬುರಗಿ;  ಮಕ್ಕಳ ಮೇಲೆ ಕುದಿಯುವ ಎಣ್ಣೆ ಸುರಿದಿದ್ದ ಮಹಿಳೆಗೆ 5 ವರ್ಷ ಶಿಕ್ಷೆ!

Published : Aug 20, 2021, 08:41 PM ISTUpdated : Aug 20, 2021, 08:42 PM IST

 * ಕ್ರೌರ್ಯ ಮೆರೆದ ಮಹಿಳೆಗೆ 5 ವರ್ಷ ಜೈಲುಶಿಕ್ಷೆ
* ಸಂಬಂಧಿಕರ ಮಕ್ಕಳ ಮೇಲೆ ಎಣ್ಣೆ ಸುರಿದಿದ್ದರು
* ಎರಡೂವರೆ ವರ್ಷದ ಹಿಂದೆ ನಡೆದಿದ್ದ ಘಟನೆ
* ಕಲಬುರಗಿಯ ಆನಂದ ನಗರದಲ್ಲಿ  ಭಯಾನಕ ಕೃತ್ಯ  ನಡೆದಿತ್ತು

ಕಲಬುರಗಿ(ಆ. 20)  ಮುದ್ದು ಮಕ್ಕಳ ಮೇಲೆ ಕಾದ ಎಣ್ಣೆ ಸುರಿದು ಕೊಲೆ ಯತ್ನ ಮಾಡಿದ್ದ ಮಹಿಳೆಗೆ ಐದು ವರ್ಷ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.  ಎರಡುವರೆ
ವರ್ಷದ ಹಿಂದೆ ನಡೆದ ಘಟನೆಗೆ ತೀರ್ಪು ಕಲಬುರಗಿ ನ್ಯಾಯಾಲಯ ತೀರ್ಪು ಪ್ರಕಟಿಸಿದೆ.

ಕಲಬುರಗಿಯ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಮಹತ್ವದ ತೀರ್ಪು ಹೊರಬಂದಿದೆ. ಪೋಷಕರ ಮೇಲಿನ ಮತ್ಸರದಿಂದ ಮಕ್ಕಳ ಮೇಲೆ ಕಾದ ಎಣ್ಣೆ ಸುರಿದು ವಿಕೃತಿ ಮೆರೆದಿದ್ದ ಶ್ರೀದೇವಿ ಶಿಕ್ಷೆಗೆ ಗುರಿಯಾಗಿದ್ದಾರೆ. ಸಾವು ಬದುಕು ನಡುವೆ ಹೋರಾಡಿ ಪವಾಡದ ರೀತಿಯಲ್ಲಿ ಮಕ್ಕಳಾದ ಪಾರ್ವತಿ ಮತ್ತು ಅಹಾನಾ ಬದುಕಿದ್ದರು.

ಪೊಲೀಸ್ ಹುದ್ದೆಗಾಗಿ 400 ಮೀ. ಓಟ ಓಡಿದ ಗರ್ಭಿಣಿ

ಕಳೆದ 2019, ಮಾರ್ಚ್ 25 ರಂದು ಕಲಬುರಗಿಯ ಆನಂದ ನಗರದಲ್ಲಿ  ಭಯಾನಕ ಕೃತ್ಯ  ನಡೆದಿತ್ತು. ಶ್ರೀದೇವಿ ಕೋರವಾರ ಎನ್ನುವ ಮಹಿಳೆ ತನ್ನ ಸಂಬಂಧಿಕರ ಮಕ್ಕಳಿಬ್ಬರಿಗೆ ಚಾಕ್ ಲೇಟ್ ಕೊಡುವುದಾಗಿ ಕಣ್ಣು ಮುಚ್ಚಿ ಕುಳ್ಳರಿಸಿ ತಲೆ ಮೇಲೆ ಕಾದ ಎಣ್ಣೆ ಸುರಿದು ಪರಾರಿಯಾಗಿದ್ದಳು.  ಸಾವು ಗೆದ್ದರೂ ಈಗಲೂ ತೀವ್ರ ಸುಟ್ಟ ಗಾಯದಿಂದ ಮಕ್ಕಳು ತೊಂದರೆ ಅನುಭವಿಸುತ್ತಿದ್ದಾರೆ.

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!