ಮದುವೆ ನಿರಾಕರಿಸಿದ ಅತ್ತೆ ಮಗಳ ಕಿಡ್ನಾಪ್, ಬಲವಂತವಾಗಿ ತಾಳಿ ಕಟ್ಟಿದ!

Feb 5, 2020, 10:30 AM IST

ಹಾಸನ[ಫೆ.05]: ಯುವತಿಯೊಬ್ಬಳನ್ನ ಅಪಹರಿಸಿ, ಕಾರಿನಲ್ಲೇ  ಬಲವಂತವಾಗಿ ತಾಳಿ ಕಟ್ಟಿರುವ ಘಟನೆ ಹಾಸನದ ಡೈರಿ ಸರ್ಕಲ್ ಬಳಿ ನಡೆದಿದೆ. 

ಮನದನ್ನೆಯನ್ನ ಕರೆ ತರಲು ಹೆಲಿಕಾಪ್ಟರ್ ಕಳುಹಿಸಿದ ಅನ್ನದಾತ

ಯುವತಿಯ ಅತ್ತೆ ಮಗ ಮನು ಎಂಬಾತ ಮದುವೆ ಪ್ರಸ್ತಾಪವಿಟ್ಟಿದ್ದ. ಆದರೆ ಯುವತಿ ಅದನ್ನು ನಿರಾಕರಿಸಿದ್ದಳು. ಈ ಹಿನ್ನೆಲೆಯಲ್ಲಿ ಗೆಳೆಯರ ಸಹಾಯದಿಂದ ಅವಳನ್ನ ಅಪಹರಿಸಿದ ಮನು, ಬಲವಂತವಾಗಿ ತಾಳಿ ಕಟ್ಟಿದ್ದಾನೆ. 

ರಾಜ್ಯ ಸರ್ಕಾರದಿಂದಲೇ ಮದುವೆ ಭಾಗ್ಯ: ಲವ್ ಮ್ಯಾರೇಜ್‌ಗೆ ಇದ್ಯಾ ಸೌಭಾಗ್ಯ..?

ಘಟನೆ ಬೆನ್ನಲ್ಲೇ ಮನು ಬೆನ್ನತ್ತಿದ ಪೊಲೀಸರು ರಾಮನಗರದಲ್ಲಿ ಅವನನ್ನ ವಶಕ್ಕೆ ತೆಗೆದುಕೊಂಡು, ಯುವತಿಯನ್ನ ರಕ್ಷಿಸಿದ್ದಾರೆ. ಈ ಘಟನೆಯಿಂದ ಆಘಾತಕ್ಕೊಳಗಾಗಿರುವ ಯುವತಿ ತಂದೆ ಅಸ್ವಸ್ಥರಾಗಿದ್ದಾರೆ.