ಭೀಮಾತೀರದಲ್ಲಿ ಇನ್ನೂ ನಿಲ್ಲದ ಗನ್‌ ಹಾವಳಿ: ಗ್ರಾಮ ಪಂಚಾಯ್ತಿಗೆ ಪಿಸ್ತೂಲ್ ತಂದು ಪಿಡಿಓ ಮೇಲೆ ಹಲ್ಲೆ !

ಭೀಮಾತೀರದಲ್ಲಿ ಇನ್ನೂ ನಿಲ್ಲದ ಗನ್‌ ಹಾವಳಿ: ಗ್ರಾಮ ಪಂಚಾಯ್ತಿಗೆ ಪಿಸ್ತೂಲ್ ತಂದು ಪಿಡಿಓ ಮೇಲೆ ಹಲ್ಲೆ !

Published : Oct 19, 2023, 11:12 AM IST

ಭೀಮಾತೀರದ ಅಂದ್ರೆ ನೆನಪಾಗೋದು ಗನ್‌ಗಳ ಗುಂಡಿನ ಸದ್ದು, ಗ್ಯಾಂಗ್‌ ವಾರ್‌ ಗಳು. ಭೀಮಾತೀರದಲ್ಲಿ ಶಾಂತಿ ನೆಲಸಲಿ, ಗನ್‌ ಸಂಸ್ಕೃತಿ ಅಳಿಯಲಿ ಎಂದು ಪೊಲೀಸ್‌ ಇಲಾಖೆ ಹಲವು ಬಾರಿ ಜಾಗೃತಿ ಸಭೆಗಳನ್ನ ನಡೆಸಿದೆ. ಆದ್ರೆ ಗನ್‌ ಸಂಸ್ಕೃತಿ ಮಾತ್ರ ಬ್ರೇಕ್‌ ಬೀಳ್ತಿಲ್ಲ. ಗ್ರಾಮ ಪಂಚಾಯ್ತಿ ಸದಸ್ಯನೊಬ್ಬ ಸೊಂಟಕ್ಕೆ ಗನ್‌ ಸಿಕ್ಕಿಸಿಕೊಂಡು ಪಂಚಾಯ್ತಿಗೆ ಹೋಗಿ ಪಿಡಿಓ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ.
 

ಭೀಮಾತೀರದ ಹೆಸ್ರು ಕೇಳಿದ್ರೆ ಸಾಕು ಎಂಥಾ ಪಂಟರ್‌ಗಳು ಕೂಡ ಬೇಡಪ್ಪ ಇದ್ರು ಸಹವಾಸ ಅಂತಾರೆ. ಯಾಕಂದ್ರೆ ಇಲ್ಲಿನ ಸರಣಿ ಹತ್ಯಾಕಾಂಡಗಳು, ಗ್ಯಾಂಗ್‌ ವಾರ್‌ ಮತ್ತು ಗನ್‌(GUN) ಸಂಸ್ಕೃತಿ ಭೀಮಾತೀರಕ್ಕೆ ಕಳಂಕ ತಂದಿವೆ. ಇದನ್ನ ಅಳಿಸಿ ಹಾಕೋದಕ್ಕೆ ಪೊಲೀಸರು ಇನ್ನಿಲ್ಲದ ಪ್ರಯತ್ನಗಳನ್ನ ನಡೆಸಿದ್ರು ಗನ್‌ ಹಾವಳಿಗೆ ಮಾತ್ರ  ಇನ್ನೂ ಬ್ರೇಕ್ ಬಿದ್ದಿಲ್ಲ. ಚಡಚಣ ತಾಲೂಕಿನ ದೇವರ ನಿಂಬರಗಿ ಗ್ರಾಮ ಪಂಚಾಯ್ತಿಯ ಸದಸ್ಯನೇ ಗನ್‌ ತಂದು ಪಿಡಿಓಗೆ(Pdo) ಬೆದರಿಕೆ ಹಾಕಿದ್ದಾನೆ. ಜಾಕೀರ್ ಮನಿಯಾರ್ ಎಂಬಾತ ಬಿಲ್ ಬಿಡುಗಡೆ ಮಾಡಿಲ್ಲ ಅಂತಾ ಪಿಡಿಓಗೆ ಹಲ್ಲೆ ಮಾಡಿದ್ದಾನೆ ಅಂತೆ. ಹೀಗಾಗಿ ವಿಶ್ವನಾಥ ರಾಠೋಡ್ ಗ್ರಾಮ ಪಂಚಾಯ್ತಿ ಸದಸ್ಯನ ವಿರುದ್ಧ ದೂರು ದಾಖಲಿಸಿದ್ದಾನೆ.ಇನ್ನು ಗ್ರಾಮ ಪಂಚಾಯಿತಿ (Gram Panchayat) ಸದಸ್ಯನಾಗಿರುವ ಜಾಕೀರ್‌ ಪಂಚಾಯ್ತಿಯಲ್ಲಿ ತನ್ನದೆೇ ಕಾರುಬಾರು ನಡೆಸ್ತಿದ್ದಾನೆ ಅಂತೆ. ತಾನು ಹೇಳಿದ್ರೆ ಮಾತ್ರ ಬಿಲ್‌ ಬಿಡುಗಡೆ ಮಾಡಬೇಕು ಎಂದು ಅವಾಜ್ ಹಾಕ್ತಾನಂತೆ. ಜಾಕಿರ್ ಕಾಟಕ್ಕೆ ಉಳಿದ ಗ್ರಾಮಪಂಚಾಯ್ತಿ ಸದಸ್ಯರು ಬೇಸತ್ತು ಹೋಗಿದ್ದಾರೆ. ಭೀಮಾತೀರದಲ್ಲಿ ಗನ್‌ ಸಂಸ್ಕೃತಿ ನಿಲ್ಲಬೇಕು ಶಾಂತಿ ನೆಲಸಬೇಕು ಅನ್ನೋದು ಎಲ್ಲರ ಬಯಕೆ. ಆದ್ರೆ ಪೊಲೀಸರು ಎಷ್ಟೇ ಕ್ರಮ ಕೈಗೊಂಡ್ರು ಪುಡಿರೌಡಿಗಳ ಹಾವಳಿ ಮಾತ್ರ ಇನ್ನೂ ನಿಂತಿಲ್ಲ..ಇನ್ನಾದರು ಖಾಕಿ ಇತಹವರ ಹೆಡೆಮುರಿ ಕಟ್ಟಬೇಕಿದೆ.

ಇದನ್ನೂ ವೀಕ್ಷಿಸಿ:  ಮೈಸೂರಿನಲ್ಲಿ ಯುವ ದಸರಾ ಸಂಭ್ರಮ: ಮಕ್ಕಳ ದಸರಾದಲ್ಲಿ ಕಳೆಗಟ್ಟಿದ ಕಲರವ

23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!