ತಂದೆ ಸಾವಿನ ಬಳಿಕ ಮಗನ ಕೊಲೆ ರಹಸ್ಯ ಬಯಲು;  ‘ದೃಶ್ಯ’ ಚಿತ್ರ ನೆನಪಿಸುವ ತಂದೆಯ ಮರ್ಡರ್ ಮಿಸ್ಟರಿ

ತಂದೆ ಸಾವಿನ ಬಳಿಕ ಮಗನ ಕೊಲೆ ರಹಸ್ಯ ಬಯಲು; ‘ದೃಶ್ಯ’ ಚಿತ್ರ ನೆನಪಿಸುವ ತಂದೆಯ ಮರ್ಡರ್ ಮಿಸ್ಟರಿ

Published : Aug 14, 2025, 12:55 PM IST
ಹಾಸನ ಜಿಲ್ಲೆಯಲ್ಲಿ ತಂದೆಯೊಬ್ಬ ಮಗನನ್ನು ಕೊಂದು ಮನೆಯ ಹಿತ್ತಲಿನಲ್ಲಿ ಹೂತಿಟ್ಟ ಘಟನೆ ಬೆಳಕಿಗೆ ಬಂದಿದೆ. ಮಗನ ಅಂತ್ಯಕ್ರಿಯೆಗೆ ಸಂಬಂಧಿಕರು ಒತ್ತಾಯಿಸಿದಾಗ ಕಿರಿಯ ಮಗ ಸತ್ಯ ಬಾಯ್ಬಿಟ್ಟಿದ್ದಾನೆ.

ದೃಶ್ಯ ಕನ್ನಡದ ಕ್ರೈಂ ಥ್ರಿಲ್ಲರ್​ ಚಿತ್ರ. ಈ ಚಿತ್ರವನ್ನೇ ನೆನಪಿಸೋ ಕೊಲೆವೊಂದು ಹಾಸನ ಜಿಲ್ಲೆಯಲ್ಲಿ ನಡೆದಿದೆ. ತಂದೆ ಮಗನನ್ನ ಕೊಂದು ಹೂತು ಹಾಕಿದ್ದಾನೆ. ಆತನ ಸಾವಿನ ಬಳಿಕ ಈ ಮರ್ಡರ್ ಮಿಸ್ಟ್ರಿ ಬಯಲಾಗಿದೆ. ಮೃತ ಗಂಗಾಧರ್​​ ಹತ್ತು ದಿನಗಳ ಹಿಂದೆ ಮೃತಪಡುತ್ತಿದ್ದಂತೆ ಸಂಬಂಧಿಕರು ಹಿರಿಯ ಮಗ ರಘುನನ್ನ ಅಂತ್ಯಸಂಸ್ಕಾರಕ್ಕೆ ಕರೆಸುವಂತೆ ಸಂಬಂಧಿಕರು ಒತ್ತಾಯಿಸಿದ್ರು. ತಮ್ಮ ರೂಪೇಶ್​​​​​​​ ಅಣ್ಣನ ಮೊಬೈಲ್​ ಸ್ವಿಚ್ಡ್​ ಆಫ್​​​​​ ಆಗಿದೆ ಅಂತ ಹೇಳಿ ಬೇರೆ ನಂಬರ್​​ ಕೊಟ್ಟಿದ್ದ. ಆದ್ರೆ ಇಷ್ಟಕ್ಕೆ ಸುಮ್ಮನಾಗದ ಸಂಬಂಧಿಕರು ಹಾಲು ಬಿಡೋ 3ನೇ ದಿನಕ್ಕಾದ್ರೂ ರಘನನ್ನು ಕರೆಸಲೇಬೇಕೆಂದು ರೂಪೇಶ್​​ಗೆ ಒತ್ತಡ ಹಾಕಿದ್ದಾರೆ. ಆಗ ರೂಪೇಶ್​​ ಬೇರೆ ದಾರಿಯಿಲ್ಲದೇ ಸತ್ಯ ಬಾಯ್ಬಿಟ್ಟಿದ್ದಾನೆ. ರಘು ನಾಪತ್ತೆ ಆಗಿಲ್ಲ. ಆಗಸ್ಟ್​ 14, 2023 ರಂದು ತಂದೆನೇ ಅಣ್ಣನನ್ನ ಕೊಲೆ ಮಾಡಿದ್ದಾರೆ ಎಂದು ರೂಪೇಶ್​ ಹೇಳಿದ್ದಾನೆ. 32 ವರ್ಷದ ಮೃತ ರಘುಗೆ ಮದುವೆ ಆಗಿದ್ದು 5 ವರ್ಷದ ಮಗುವಿದೆ. ಹೆಂಡತಿಗೆ ವಿಚ್ಛೇದನ ನೀಡಿದ್ದಾರೆ. ಕುಡಿತದ ಚಟಕ್ಕೆ ಬಿದ್ದ ರಘು ತಂದೆಗೆ ಕುಡಿಯಲು ಹಣ ಕೊಡುವಂತೆ ಪೀಡಿಸುತ್ತಿದ್ದನಂತೆ. ಇದರಿಂದ ಬೇಸತ್ತ ತಂದೆ ಮಗನನ್ನ ಕೊಲೆ ಮಾಡಿದ್ದಾರೆ. ಈ ಸುದ್ದಿ ಯಾರಿಗೂ ಗೊತ್ತಾಗಬಾರದು ಅಂತ ತನ್ನ ಮನೆಯ ಹಿಂಭಾಗದಲ್ಲಿ ಇರುವ ಇಂಗು ಗುಂಡಿಯಲ್ಲಿ ಶವ ಹೂತು ಹಾಕಿದ್ದಾನೆ. ಕಿರಿಯ ಮಗ ರೂಪೇಶ್​​ಗೆ ಈ ವಿಚಾರ ಯಾರಿಗೂ ಹೇಳಬೇಡ ಎಂದು ಬೆದರಿಕೆ ಹಾಕಿದ್ದಾನೆ. ಹೀಗಾಗಿ ಈ ಸುದ್ದಿಯನ್ನ ಯಾರ ಬಳಿಯೂ ಹೇಳಿಲ್ಲ ಅಂತ ಸ್ವಲ್ಪ ಬುದ್ಧಿಮಾಂದ್ಯನಾದ ರೂಪೇಶ್​ ಸಂಬಂಧಿಕರ ಬಳಿ ಹೇಳಿಕೊಂಡಿದ್ದಾನೆ.

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
24:37ಚಿಕ್ಕೇಜಮಾನನ ಸಾವಿನ ಸುತ್ತ ಅನುಮಾನದ ಹುತ್ತ: ಲವರ್‌ಗಾಗಿ ಗಂಡನ ಕತೆ ಮುಗಿಸಿದ 2 ಮಕ್ಕಳ ತಾಯಿ
06:05ಟೆರೆರಿಸ್ಟ್, ರೇಪಿಸ್ಟ್, ರೌಡಿಗಳಿಗೆ ಜೈಲಲ್ಲಿ ರಾಜಾತಿಥ್ಯ, ದರ್ಶನ್‌ಗೆ ಮಾತ್ರ ಸಿಕ್ತಿಲ್ಲ ದಿಂಬು, ಹಾಸಿಗೆಯ ಭಾಗ್ಯ!
Read more