ತಂದೆ ಸಾವಿನ ಬಳಿಕ ಮಗನ ಕೊಲೆ ರಹಸ್ಯ ಬಯಲು;  ‘ದೃಶ್ಯ’ ಚಿತ್ರ ನೆನಪಿಸುವ ತಂದೆಯ ಮರ್ಡರ್ ಮಿಸ್ಟರಿ

ತಂದೆ ಸಾವಿನ ಬಳಿಕ ಮಗನ ಕೊಲೆ ರಹಸ್ಯ ಬಯಲು; ‘ದೃಶ್ಯ’ ಚಿತ್ರ ನೆನಪಿಸುವ ತಂದೆಯ ಮರ್ಡರ್ ಮಿಸ್ಟರಿ

Published : Aug 14, 2025, 12:55 PM IST
ಹಾಸನ ಜಿಲ್ಲೆಯಲ್ಲಿ ತಂದೆಯೊಬ್ಬ ಮಗನನ್ನು ಕೊಂದು ಮನೆಯ ಹಿತ್ತಲಿನಲ್ಲಿ ಹೂತಿಟ್ಟ ಘಟನೆ ಬೆಳಕಿಗೆ ಬಂದಿದೆ. ಮಗನ ಅಂತ್ಯಕ್ರಿಯೆಗೆ ಸಂಬಂಧಿಕರು ಒತ್ತಾಯಿಸಿದಾಗ ಕಿರಿಯ ಮಗ ಸತ್ಯ ಬಾಯ್ಬಿಟ್ಟಿದ್ದಾನೆ.

ದೃಶ್ಯ ಕನ್ನಡದ ಕ್ರೈಂ ಥ್ರಿಲ್ಲರ್​ ಚಿತ್ರ. ಈ ಚಿತ್ರವನ್ನೇ ನೆನಪಿಸೋ ಕೊಲೆವೊಂದು ಹಾಸನ ಜಿಲ್ಲೆಯಲ್ಲಿ ನಡೆದಿದೆ. ತಂದೆ ಮಗನನ್ನ ಕೊಂದು ಹೂತು ಹಾಕಿದ್ದಾನೆ. ಆತನ ಸಾವಿನ ಬಳಿಕ ಈ ಮರ್ಡರ್ ಮಿಸ್ಟ್ರಿ ಬಯಲಾಗಿದೆ. ಮೃತ ಗಂಗಾಧರ್​​ ಹತ್ತು ದಿನಗಳ ಹಿಂದೆ ಮೃತಪಡುತ್ತಿದ್ದಂತೆ ಸಂಬಂಧಿಕರು ಹಿರಿಯ ಮಗ ರಘುನನ್ನ ಅಂತ್ಯಸಂಸ್ಕಾರಕ್ಕೆ ಕರೆಸುವಂತೆ ಸಂಬಂಧಿಕರು ಒತ್ತಾಯಿಸಿದ್ರು. ತಮ್ಮ ರೂಪೇಶ್​​​​​​​ ಅಣ್ಣನ ಮೊಬೈಲ್​ ಸ್ವಿಚ್ಡ್​ ಆಫ್​​​​​ ಆಗಿದೆ ಅಂತ ಹೇಳಿ ಬೇರೆ ನಂಬರ್​​ ಕೊಟ್ಟಿದ್ದ. ಆದ್ರೆ ಇಷ್ಟಕ್ಕೆ ಸುಮ್ಮನಾಗದ ಸಂಬಂಧಿಕರು ಹಾಲು ಬಿಡೋ 3ನೇ ದಿನಕ್ಕಾದ್ರೂ ರಘನನ್ನು ಕರೆಸಲೇಬೇಕೆಂದು ರೂಪೇಶ್​​ಗೆ ಒತ್ತಡ ಹಾಕಿದ್ದಾರೆ. ಆಗ ರೂಪೇಶ್​​ ಬೇರೆ ದಾರಿಯಿಲ್ಲದೇ ಸತ್ಯ ಬಾಯ್ಬಿಟ್ಟಿದ್ದಾನೆ. ರಘು ನಾಪತ್ತೆ ಆಗಿಲ್ಲ. ಆಗಸ್ಟ್​ 14, 2023 ರಂದು ತಂದೆನೇ ಅಣ್ಣನನ್ನ ಕೊಲೆ ಮಾಡಿದ್ದಾರೆ ಎಂದು ರೂಪೇಶ್​ ಹೇಳಿದ್ದಾನೆ. 32 ವರ್ಷದ ಮೃತ ರಘುಗೆ ಮದುವೆ ಆಗಿದ್ದು 5 ವರ್ಷದ ಮಗುವಿದೆ. ಹೆಂಡತಿಗೆ ವಿಚ್ಛೇದನ ನೀಡಿದ್ದಾರೆ. ಕುಡಿತದ ಚಟಕ್ಕೆ ಬಿದ್ದ ರಘು ತಂದೆಗೆ ಕುಡಿಯಲು ಹಣ ಕೊಡುವಂತೆ ಪೀಡಿಸುತ್ತಿದ್ದನಂತೆ. ಇದರಿಂದ ಬೇಸತ್ತ ತಂದೆ ಮಗನನ್ನ ಕೊಲೆ ಮಾಡಿದ್ದಾರೆ. ಈ ಸುದ್ದಿ ಯಾರಿಗೂ ಗೊತ್ತಾಗಬಾರದು ಅಂತ ತನ್ನ ಮನೆಯ ಹಿಂಭಾಗದಲ್ಲಿ ಇರುವ ಇಂಗು ಗುಂಡಿಯಲ್ಲಿ ಶವ ಹೂತು ಹಾಕಿದ್ದಾನೆ. ಕಿರಿಯ ಮಗ ರೂಪೇಶ್​​ಗೆ ಈ ವಿಚಾರ ಯಾರಿಗೂ ಹೇಳಬೇಡ ಎಂದು ಬೆದರಿಕೆ ಹಾಕಿದ್ದಾನೆ. ಹೀಗಾಗಿ ಈ ಸುದ್ದಿಯನ್ನ ಯಾರ ಬಳಿಯೂ ಹೇಳಿಲ್ಲ ಅಂತ ಸ್ವಲ್ಪ ಬುದ್ಧಿಮಾಂದ್ಯನಾದ ರೂಪೇಶ್​ ಸಂಬಂಧಿಕರ ಬಳಿ ಹೇಳಿಕೊಂಡಿದ್ದಾನೆ.

24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
20:21ಎಪ್‌ಸ್ಟೀನ್ ಫೈಲ್ಸ್‌: ಟ್ರಂಪ್, ಬಿಲ್ ಗೇಟ್ಸ್ ರಾಸ*ಲೀಲೆ ರಹಸ್ಯ! 2000 ವಿಡಿಯೋ, ರಷ್ಯಾ ಚೆಲುವೆಯರ ವಿಡಿಯೋ ಬಟಾಬಯಲು!
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
21:04ಪಿಜಿಯಲ್ಲಿ ಪ್ರೇಯಸಿ ಜೊತೆ ಕುಚ್​-ಕುಚ್​​! ರೆಡ್ ​​ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ ಕೊಟ್ಟ ಕಾರಣವೇ ಬೇರೆ!
24:39Bengaluru ಶರ್ಮಿಳಾ ಸಾವಿಗೆ ಬಿಗ್ ಟ್ವಿಸ್ಟ್: ಒಂದೂ ಸುಳಿವು ಬಿಡದೇ ಕೊಂ*ದವನು ಅದೊಂದು ತಪ್ಪು ಮಾಡಿದ್ದ!
24:37ಬೆಂಗಳೂರು: ತಾಯಿ ಮೇಲಿನ ದ್ವೇಷಕ್ಕೆ 6 ವರ್ಷದ ಬಾಲಕಿ ಹತ್ಯೆ; ಪಾಗಲ್ ಪ್ರೇಮಿ ಕಾಟಕ್ಕೆ ವಿದ್ಯಾರ್ಥಿನಿ ಬಲಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
Read more