ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!

ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!

Published : Dec 17, 2025, 04:57 PM IST

ಪ್ರೇಮಿಗಳಿಗೆ ಸಹಾಯ ಮಾಡಲು ಹೋದ ಇಬ್ಬರು ಸ್ನೇಹಿತರನ್ನು ಹತ್ಯೆ ಮಾಡಲಾಗಿದೆ. ಮನೆಯವರ ವಿರೋಧದ ನಡುವೆ ಮದುವೆಯಾದ ಜೋಡಿಗೆ ರಕ್ಷಣೆ ನೀಡಲು ಮುಂದಾದ ಕಿರಣ್ ಮತ್ತು ಮಂಜುನಾಥ್, ಯುವತಿಯ ಅಣ್ಣನ ಗ್ಯಾಂಗ್‌ನಿಂದ ಕೊಲೆಯಾಗಿದ್ದಾರೆ.

ಬೆಂಗಳೂರು (ಡಿ.17): 'ನಾವಿದ್ದೇವೆ ಬಾ ಗೆಳೆಯ' ಎಂದು ಪ್ರೇಮಿಗಳ ರಕ್ಷಣೆಗೆ ನಿಂತ ಇಬ್ಬರು ಸ್ನೇಹಿತರು, ಇಂದು ಕ್ರೂರ ಹಂತಕರ ಮಚ್ಚಿಗೆ ಬಲಿಯಾಗಿ ಹೆಣವಾಗಿ ಬಿದ್ದಿದ್ದಾರೆ. ಯಾರದ್ದೋ ಪ್ರೇಮ ಪುರಾಣಕ್ಕೆ ಇನ್ನಾರೋ ಬಲಿಯಾದ ಈ ಭೀಕರ ಘಟನೆ ಇಡೀ ನಗರವನ್ನು ಬೆಚ್ಚಿಬೀಳಿಸಿದೆ. ಪ್ರೇಮಿಗಳನ್ನು ರಕ್ಷಿಸಲು ಹೋದ ಕಿರಣ್ ಮತ್ತು ಮಂಜುನಾಥ್ ಎಂಬುವವರೇ ಕೊಲೆಯಾದ ದುರ್ದೈವಿಗಳು.

ಘಟನೆಯ ಹಿನ್ನೆಲೆ

ಒಂದೇ ಏರಿಯಾದ ಯುವಕ ಮತ್ತು ಯುವತಿ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಇತ್ತೀಚೆಗೆ ಮನೆಯವರ ವಿರೋಧದ ನಡುವೆಯೂ ಈ ಜೋಡಿ ಮದುವೆಯಾಗಿ ಊರು ಬಿಟ್ಟು ಪರಾರಿಯಾಗಿತ್ತು. ಎರಡು ದಿನಗಳ ಕಾಲ ದೂರದ ಊರಿನಲ್ಲಿದ್ದ ಪ್ರೇಮಿಗಳಿಗೆ ಧೈರ್ಯ ತುಂಬಿದ ಹುಡುಗನ ಸ್ನೇಹಿತರು, 'ಭಯಪಡಬೇಡಿ, ನಾವು ನಿಮ್ಮ ಜೊತೆಗಿದ್ದೇವೆ. ಪೊಲೀಸ್ ಠಾಣೆಗೆ ಹೋಗಿ ರಕ್ಷಣೆ ಪಡೆಯೋಣ' ಎಂದು ಕರೆಸಿಕೊಂಡಿದ್ದರು.

ಠಾಣೆಯ ಮುಂದೆ ಶುರುವಾದ ಕಿಡಿ

ಪೊಲೀಸ್ ಠಾಣೆಯಲ್ಲಿ ಪ್ರೇಮಿಗಳ ರಾಜೀ ಸಂಧಾನ ನಡೆಯುತ್ತಿದ್ದಾಗ, ಹುಡುಗನ ಸ್ನೇಹಿತರಾದ ಸುರೇಶ ಮತ್ತು ಕಿರಣ್ ಹೊರಗೆ ಕಾಯುತ್ತಿದ್ದರು. ಈ ವೇಳೆ ಅಲ್ಲಿಗೆ ಬಂದ ಹುಡುಗಿಯ ಅಣ್ಣ ಮತ್ತು ಆತನ ತಂಡ, ಈ ಪ್ರೇಮಿಗಳು ಓಡಿಹೋಗಲು ಸುರೇಶನೇ ಮುಖ್ಯ ಕಾರಣ ಎಂದು ಭಾವಿಸಿ ಆವಾಜ್ ಹಾಕಿದ್ದರು. ಅಲ್ಲಿ ಶುರುವಾದ ಜಗಳ ಸಂಜೆ ವೇಳೆಗೆ ರಕ್ತಪಾತಕ್ಕೆ ತಿರುಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ಸಿನಿಮಾ ಶೈಲಿಯ ಅಟ್ಯಾಕ್ 

ರಾತ್ರಿ ವೇಳೆ ಸುರೇಶ ಮತ್ತು ಕಿರಣ್ ತಮ್ಮ ಏರಿಯಾದಲ್ಲಿ ಕುಳಿತು ಮಾತನಾಡುತ್ತಿದ್ದಾಗ, ಮಾರಕಾಸ್ತ್ರಗಳೊಂದಿಗೆ ನುಗ್ಗಿದ ಹುಡುಗಿಯ ಅಣ್ಣನ ಗ್ಯಾಂಗ್ ಏಕಾಏಕಿ ದಾಳಿ ನಡೆಸಿದೆ. ಟಾರ್ಗೆಟ್ ಆಗಿದ್ದ ಸುರೇಶ ಹೇಗೋ ತಪ್ಪಿಸಿಕೊಂಡು ಓಡಿ ಬಚಾವ್ ಆಗಿದ್ದಾನೆ. ಆದರೆ, ಹಂತಕರ ಕೈಗೆ ಸಿಕ್ಕ ಕಿರಣ್ ಮೇಲೆ ಮಚ್ಚಿನಿಂದ ಮನಬಂದಂತೆ ಇರಿಯಲಾಗಿದೆ. ಇದೇ ವೇಳೆ ಗಲಾಟೆ ಬಿಡಿಸಲು ಬಂದ ಸಂಬಂಧಿಕ ಮಂಜುನಾಥ್ (ಮಂಜಣ್ಣ) ಮೇಲೂ ಹಂತಕರು ಅಟ್ಯಾಕ್ ಮಾಡಿದ್ದಾರೆ. ತೀವ್ರ ರಕ್ತಸ್ರಾವದಿಂದಾಗಿ ಕಿರಣ್ ಮತ್ತು ಮಂಜುನಾಥ್ ಇಬ್ಬರೂ ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ.

ಪರಾರಿಯಾದ ಹಂತಕರು 

ಇಬ್ಬರನ್ನು ಬರ್ಬರವಾಗಿ ಕೊಚ್ಚಿ ಕೊಂದ ಹಂತಕರು ಸ್ಥಳದಿಂದ ಪರಾರಿಯಾಗಿದ್ದಾರೆ. ಪ್ರೇಮಿಗಳಿಗೆ ಸಹಾಯ ಮಾಡಲು ಹೋದ ಅಮಾಯಕರು ಇಂದು ಮಸಣ ಸೇರುವಂತಾಗಿದೆ. 'ಗೆಳೆಯನ ಸಂಸಾರ ಉಳಿಸಲು ಹೋದವರು ತಮ್ಮ ಸಂಸಾರವನ್ನೇ ಬೀದಿಗೆ ತಂದಿದ್ದಾರೆ' ಎಂದು ಮೃತರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹಂತಕರ ಪತ್ತೆಗೆ ಬಲೆ ಬೀಸಿದ್ದಾರೆ.

22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
20:21ಎಪ್‌ಸ್ಟೀನ್ ಫೈಲ್ಸ್‌: ಟ್ರಂಪ್, ಬಿಲ್ ಗೇಟ್ಸ್ ರಾಸ*ಲೀಲೆ ರಹಸ್ಯ! 2000 ವಿಡಿಯೋ, ರಷ್ಯಾ ಚೆಲುವೆಯರ ವಿಡಿಯೋ ಬಟಾಬಯಲು!
25:05ಕೇಳಿದಷ್ಟು ಲಂಚ ಕೊಡಬೇಕು, ಇಲ್ಲಾಂದ್ರೆ ಅರೆಸ್ಟ್​​..! ಇನ್ಸ್​​ಪೆಕ್ಟರ್​​​ ಲೋಕಾಯುಕ್ತ ಬಲೆಗೆ ಬಿದ್ದಿದ್ದೇ ರೋಚಕ..!
19:1030x40 ಸೈಟ್​ನಿಂದ ಸಾವಿರ ಎಕರೆ ಸಾಮ್ರಾಜ್ಯ; ರಾಯ್ ಸಾ*ವಿಗೆ ಕಾರಣವಾಯ್ತಾ ನಟಿಯ ನಂಟು?
25:56ಬೆಟ್ಟಿಂಗ್​​ ಚಟ, ಊರು ತುಂಬ ಸಾಲ! ಸ್ವಂತ ತಂಗಿಯ ಮೇಲೆ ಪೊಲೀಸ್ ಠಾಣೆ ಮೆಟ್ಟಿಲೇರಿದ ಸ್ಯಾಂಡಲ್‌ವುಡ್ ನಟಿ! ಏನಿದು ಪ್ರಕರಣ?
Read more