ಕುರುಬರ ಮಠದಲ್ಲಿ ದಲಿತ ಸ್ವಾಮೀಜಿಯ ಪ್ರತಿಮೆ ಇಟ್ಟಿದ್ದೇ ತಪ್ಪಾಯ್ತಾ?: ಬಳ್ಳಾರಿಯಲ್ಲಿ ಶುರುವಾಯ್ತು ಪ್ರತಿಮೆ ಪಾಲಿಟಿಕ್ಸ್​​..!

ಕುರುಬರ ಮಠದಲ್ಲಿ ದಲಿತ ಸ್ವಾಮೀಜಿಯ ಪ್ರತಿಮೆ ಇಟ್ಟಿದ್ದೇ ತಪ್ಪಾಯ್ತಾ?: ಬಳ್ಳಾರಿಯಲ್ಲಿ ಶುರುವಾಯ್ತು ಪ್ರತಿಮೆ ಪಾಲಿಟಿಕ್ಸ್​​..!

Published : Apr 09, 2024, 11:56 AM IST

ಗ್ರಾಮ ಇವತ್ತು ಅಕ್ಷರಶಃ ಬೆಂಕಿ ಉಂಡೆಯಾಗಿದೆ. ಸಹೋದರರಂತಿದ್ದ ಜನರ ಮಧ್ಯೆ ಜಾತಿ ಬೀಜ ಮೊಳಕೆ ಹೊಡೆದಿದೆ. ಒಂದೇ ಒಂದು ಪ್ರತಿಮೆಗಾಗಿ ಕೈಯಲ್ಲಿ ಕಲ್ಲು ಹಿಡಿದುಕೊಂಡು ಒಬ್ಬರ ಮೇಲೆ ಒಬ್ಬರು ಎಸೆಯುತ್ತಿದ್ದಾರೆ. 
 

ಬಳ್ಳಾರಿ(ಏ.09):  ಅದೊಂದು ಪುಟ್ಟ ಹಳ್ಳಿ... ಅಲ್ಲಿ ಜನ ಅಣ್ಣ ತಮ್ಮಂದಿರಂತೆ ಇದ್ರು... ಜಾತಿ ಬೇಧವಿಲ್ಲದೇ ಆ ಮಠಕ್ಕೆ ಹೋಗ್ತಿದ್ರು... ಕುರುಬರ ಮಠವಾದ್ರೂ ಪೂಜೆ ಮಾಡ್ತಿದ್ದಿದ್ದು ದಲಿತ ಸ್ವಾಮೀಜಿ.. ಒಂದೇ ಮಾತಿನಲ್ಲಿ ಹೆಳಬೇಕಂದ್ರೆ ಅದೊಂದು ಮಾದರಿ ಗ್ರಾಮವಾಗಿತ್ತು.. ಆದ್ರೆ ಇದೇ ಗ್ರಾಮ ಇವತ್ತು ಅಕ್ಷರಶಃ ಬೆಂಕಿ ಉಂಡೆಯಾಗಿದೆ. ಸಹೋದರರಂತಿದ್ದ ಜನರ ಮಧ್ಯೆ ಜಾತಿ ಬೀಜ ಮೊಳಕೆ ಹೊಡೆದಿದೆ. ಒಂದೇ ಒಂದು ಪ್ರತಿಮೆಗಾಗಿ ಕೈಯಲ್ಲಿ ಕಲ್ಲು ಹಿಡಿದುಕೊಂಡು ಒಬ್ಬರ ಮೇಲೆ ಒಬ್ಬರು ಎಸೆಯುತ್ತಿದ್ದಾರೆ. 

ಯಸ್.. ಎರ್ರಿತಾತ ರವರ ಮಠದಲ್ಲಿ ಅವರ ಶಿಷ್ಯ ಎರ್ರಪ್ಪ ತಾತನ ಪ್ರತಿಮೆ ಎಂಟ್ರಿ ಕೊಡುತ್ತೆ.. ಬಳಿಕ ಒಂದು ಸಮುದಾಯ ಕೋರ್ಟ್ ಮೆಟ್ಟಿಲನ್ನೂ ಹತ್ತುತ್ತೆ.. ಕೋರ್ಟ್ ಪ್ರತಿಮೆಯನ್ನ ತೆರವುಗಳಿಸುವಂತೆಯೂ ತೀರ್ಪು ಕೊಡುತ್ತೆ.. ಆದ್ರೆ ಯಾವಾಗ ತಮ್ಮ ಸ್ವಾಮೀಜಿಯ ಪ್ರತಿಮೆ ತೆರವು ಆಯ್ತೋ ದಲಿತ ಸಮುದಾಯದ ಸಹನೆ ಕಟ್ಟೆ ಹೊಡೆಯಿತು. ಬೀದಿಗೆ ಬರುವ ನಿರ್ಧಾರ ಮಾಡ್ತು ಪರಿಣಾಮವೇ ಈ ಕಲ್ಲು ತೂರಾಟ.

ದಿಂಗಾಲೇಶ್ವರ ಶ್ರೀ ಏನೇ ಮಾತಾಡಿದ್ರು ಅದು ನನಗೆ ಆಶೀರ್ವಾದ: ಪ್ರಲ್ಹಾದ್ ಜೋಶಿ

ಎರ್ರಪ್ಪ ತಾತನ ಪ್ರತಿಮೆ ತೆರವಾಗ್ತಿದ್ದಂತೆ ಆ ಗ್ರಾಮ ಅಕ್ಷರಶಹಃ ಬೆಂಕಿ ಉಂಡೆಯಾಗಿಬಿಡ್ತು. ಎರಡು ಸಮುದಾಯದವರ ನಡುವೆ ಕಲ್ಲು ತೂರಾಟ ನಡೆದಿತ್ತು.. ಇನ್ನೂ ಆ ಕಲ್ಲು ತೂರಾಟದಲ್ಲಿ ಪೊಲೀಸರಿಗೂ ಪೆಟ್ಟು ಬಿದ್ದಿತ್ತು. ಆದ್ರೆ ಘಟನೆ ನಡೆದಿ 24 ಗಂಟೆಯಾದ್ರೂ ಒಂದೇ ಒಂದು ಪ್ರಕರಣ ದಾಖಲಾಗಿರಲಿಲ್ಲ. ಇನ್ನೂ ಇದಕ್ಕೆ ಸರ್ಕಾರ ಕೂಡ ಕಾರಣ ಅಂತಲೂ ಮಾತುಗಳು ಬರೋದಕ್ಕೆ ಶುರುವಾಯ್ತು. ಆದ್ರೆ ಯಾವಾಗ ಸರ್ಕಾರ ವಿರುದ್ಧವೇ ಮಾತುಗಳು ಕೇಳಿಬಂದ್ವೋ ಪೊಲೀಸರು ಕೇಸ್ ದಾಖಲಿಸಿಕೊಂಡು 24 ಮಂದಿಯನ್ನ ವಶಕ್ಕೆ ಪಡೆದುಕೊಂಡ್ರು.

ಪವಾಡ ಪುರುಷರಿಗೆ ಇರದ ಜಾತಿ ಬೇದ ಈಗೀನ ಜನ್ರಿಗೆ ಯಾಕೆ ಬಂತು..? ಅನ್ನದು ದೇವರೇ ಬಲ್ಲ.. ಆದಷ್ಟು ಬೇಗ ಈ ಪ್ರಕರಣ ಸುಖಾಂತ್ಯ ಕಾಣಲಿ ಜಾತಿ ಬೇದ ಮರೆತು ಈ ಹಿಂದಿನಂತೆ ಅಲ್ಲಿನ ಜನ ಸಂತೋಷದಿಂದ ಬದುಕಲಿ ಅನ್ನೋದೆ ನಮ್ಮೆಲ್ಲ ಆಶಯ. 

24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more