Chaddi gang : ಮಳೆಗಾಲ ಬರ್ತಿದ್ದಂತೆ ಆ್ಯಕ್ಟೀವ್ ಚಡ್ಡಿ ಗ್ಯಾಂಗ್ ! ರಾಬರಿ ಗ್ಯಾಂಗ್‌ನ ಭರ್ಜರಿ ಬೇಟೆ ಹೇಗಿತ್ತು ಗೊತ್ತಾ?

Chaddi gang : ಮಳೆಗಾಲ ಬರ್ತಿದ್ದಂತೆ ಆ್ಯಕ್ಟೀವ್ ಚಡ್ಡಿ ಗ್ಯಾಂಗ್ ! ರಾಬರಿ ಗ್ಯಾಂಗ್‌ನ ಭರ್ಜರಿ ಬೇಟೆ ಹೇಗಿತ್ತು ಗೊತ್ತಾ?

Published : Jul 13, 2024, 04:33 PM IST

ಸತತ ವಿಫಲ ಯತ್ನಗಳ ಬಳಿಕ ಆಪರೇಷನ್ ಸಕ್ಸಸ್..!
ಮನೆಗಳ್ಳತನ ಮಾಡಿದವರು ಕಾರನ್ನೂ ಕದ್ದೊಯ್ದಿದ್ರು..!
ಕೇವಲ ಐದೇ ಗಂಟೆಯಲ್ಲಿ ಚಡ್ಡಿ ಗ್ಯಾಂಗ್ ಅಂದರ್..!
 

ಅದೊಂದು ನಟೋರಿಯಸ್ ಗ್ಯಾಂಗ್.ಬಟ್ಟೆ ಬಿಚ್ಚಿ, ಚಡ್ಡಿ ಹಾಕೊಂಡು ಅಖಾಡಕ್ಕೆ ಇಳಿದ್ರೆ ಮುಗಿದೇ ಹೊಯ್ತು. ಅಲ್ಲೊಂದು ಮನೆ ಧರೋಡೆ ಫಿಕ್ಸ್. ಅಷ್ಟೇ ಅಲ್ಲ ರಕ್ತ ಹರಿಯೋದೂ ಕೂಡ ಗ್ಯಾರೆಂಟಿ. ಆದ್ರೆ ಈ ಗ್ಯಾಂಗ್‌ನ ಮೇನ್ ಟಾರ್ಗೆಟ್ ನಮ್ಮ ಕರಾವಳಿ. ಮಳೆಗಾಲವನ್ನೇ (Rainy season) ಬಂಡವಾಳ ಮಾಡಿಕೊಳ್ಳೋ ಈ ಕಿರಾತಕರು ಸೀದಾ ಮನೆಗೆ ನುಗ್ಗಿ ಅಲ್ಲಿದ್ದವರ ಮೇಲೆ ಹಲ್ಲೆ ಮಾಡಿ ನಂತರ ಮನೆಯನ್ನ ದೋಚಿ ಎಸ್ಕೇಪ್ ಆಗಿಬಿಡ್ತಾರೆ. ಹೀಗೆ ಕಳೆದ ಕೆಲ ವರ್ಷಗಳಿಂದ ತಮ್ಮದೇ ಸ್ಟೈಲ್‌ನಲ್ಲಿ ದರೋಡೆ (Robbery)ಮಾಡಿ ಪೊಲೀಸರಿಗೆ ಛಳ್ಳೆಹಣ್ಣು ತನ್ನಿಸುತ್ತಿದ್ದ ನಟೋರಿಯಸ್ ಚಡ್ಡಿ ಗ್ಯಾಂಗ್(Chaddi gang) ಕೊನೆಗೂ ತಗ್ಲಾಕಿಕೊಂಡಿದೆ. ಲಕ್ಷಾಂತರ ರೂಪಾಯಿ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದವರನ್ನ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಮಳೆಗಾಲ ಬರ್ತಿದ್ದಂತೆ ಕರಾವಳಿಗೆ ಎಂಟ್ರಿ ಕೊಡೋ ಈ ಚಡ್ಡಿ ಗ್ಯಾಂಗ್ ಮಾಡಿದ್ದೆಲ್ಲಾ ಬರೀ ವಿಫಲ ಯತ್ನಗಳೇ. ಆದ್ರೆ ಇವತ್ತು ಅವರಿಗೆ ಜಾಕ್‌ಪಾಟ್ ಹೊಡೆದಿತ್ತು. ಮಂಗಳೂರಿನ ಮನೆಯಲ್ಲಿ ಲಕ್ಷ ಲಕ್ಷ ಹಣ ಕದ್ದು ಎಸ್ಕೇಪ್ ಆಗಿತ್ತು. ಆದ್ರೆ ಹೀಗೆ ಎಸ್ಕೇಪ್ ಆದ ಕಳ್ಳರು ಐದೇ ಗಂಟೆಯಲ್ಲಿ ತಗ್ಲಾಕಿಕೊಂಡಿದ್ರು. ಕದ್ದ ಮನೆಯ ಕಾರನ್ನೇ ತೆಗೆದುಕೊಂಡು ಎಸ್ಕೇಪ್ ಆಗಿದ್ದ ಕಳ್ಳರು(Theives) ಅದೇ ಕಾರಿನಿಂದ ಸಿಕ್ಕಿಹಾಕಿಕೊಂಡಿದ್ರು. ಸತತ ಪ್ರಯತ್ನಗಳನ್ನ ಮಾಡಿ ವಿಫಲವಾಗಿದ್ದ ಚಡ್ಡಿ ಗ್ಯಾಂಗ್ ಆವತ್ತು ಭರ್ಜರಿ ಬೇಟೆಗೆ ಇಳಿದಿತ್ತು. ಮಧ್ಯರಾತ್ರಿ ಅದೊಂದು ಮನೆಗೆ ನುಗ್ಗಿತ್ತು. ಲಕ್ಷ ಲಕ್ಷ ಮೌಲ್ಯದ ಚಿನ್ನಾಭರಣಗಳನ್ನ ಕದ್ದು(Theft), ಮನೆಯವರದ್ದೇ ಕಾರು ತೆಗೆದುಕೊಂಡು ಎಸ್ಕೇಪ್ ಆಗಿತ್ತು. ಇನ್ನೂ ಇದೇ ಗ್ಯಾಂಗ್‌ನ ಬೆನ್ನುಬಿದ್ದ ಪೊಲೀಸರು ಕೇವಲ ಐದೇ ಗಂಟೆಯಲ್ಲಿ ಎಲ್ಲಾ ದರೋಡೆಕೋರರ ಹೆಡೆಮುರಿ ಕಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  ದೈವ ಸನ್ನಿಧಿಯಲ್ಲಿ ಮತ್ತೊಂದು ಪವಾಡ: 24 ಗಂಟೆಯೊಳಗೆ ಕಳ್ಳನನ್ನು ಹುಡುಕಿಕೊಟ್ಟ ಬಬ್ಬು ಸ್ವಾಮಿ ದೈವ!

25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
24:37ಚಿಕ್ಕೇಜಮಾನನ ಸಾವಿನ ಸುತ್ತ ಅನುಮಾನದ ಹುತ್ತ: ಲವರ್‌ಗಾಗಿ ಗಂಡನ ಕತೆ ಮುಗಿಸಿದ 2 ಮಕ್ಕಳ ತಾಯಿ
06:05ಟೆರೆರಿಸ್ಟ್, ರೇಪಿಸ್ಟ್, ರೌಡಿಗಳಿಗೆ ಜೈಲಲ್ಲಿ ರಾಜಾತಿಥ್ಯ, ದರ್ಶನ್‌ಗೆ ಮಾತ್ರ ಸಿಕ್ತಿಲ್ಲ ದಿಂಬು, ಹಾಸಿಗೆಯ ಭಾಗ್ಯ!
Read more