ಬಾಂಬ್ ಬೆದರಿಕೆ ಪತ್ರ ಬರೆದ ರಾಜಶೇಖರ್ ಅರೆಸ್ಟ್; ಈತನ ಹಿಸ್ಟರಿ ಅಂತಿಂಥದ್ದಲ್ಲ!

Oct 20, 2020, 2:12 PM IST

ಬೆಂಗಳೂರು (ಅ. 20): ಅತ್ತೆಯ ಆಸ್ತಿಗಾಗಿ ಅಳಿಯಂದಿರ ಜಗಳ. ಕೋರ್ಟ್‌ಗೆ ಬಂತು ಬಾಂಬ್ ಬೆದರಿಕೆ. ಹೌದು. ಷಡ್ಗ ರಮೇಶ್‌ನನ್ನು ಸಿಕ್ಕಿ ಹಾಕಿಸುವುದಕ್ಕೆ ರಾಜಶೇಖರ್ ಎಂಬಾತ ಮಾಡಿದ ಕ್ರಿಮಿನಲ್ ಕೆಲಸ ಇದು. 

ಕೋರ್ಟ್‌ಗೆ ಬಾಂಬ್ ಬೆದರಿಕೆ, ಮೂವರು ಅರೆಸ್ಟ್, ಕಾರಣ ಮಾತ್ರ ಸಖತ್ ಇಂಟರೆಸ್ಟಿಂಗ್!

NDPS ನ್ಯಾಯಾಧೀಶರಿಗೆ, ಪೊಲೀಸ್ ಕಮಿಷರ್‌ಗೆ ಬಾಂಬ್ ಬೆದರಿಕೆ ಹಾಕಿದ ಘಟನೆ ಭಾರೀ ಸಂಚಲನವನ್ನುಂಟು ಮಾಡಿತ್ತು. ಈ ಕೆಲಸವನ್ನು ಮಾಡಿದ ರಾಜಶೇಖರ್ ಈಗ ಅರೆಸ್ಟ್ ಆಗಿದ್ದಾನೆ. ರಾಜಶೇಖರ್ ರಮೇಶ್ ಹೆಸರಲ್ಲಿ ಕೋರ್ಟ್‌ಗೆ ಬಾಂಬ್ ಬೆದರಿಕೆ ಹಾಕಿದ್ದಾನೆ. ಏನೋ ಮಾಡಲು ಹೋಗಿ ಸಿಕ್ಕಿ ಬಿದ್ದಿದ್ದಾನೆ. ಇನ್ನು ಈತನ ಹಿಸ್ಟರಿ ನೋಡುವುದಾದರೆ ಈ ಹಿಂದೆ ಕೂಡಾ ಗೂಂಡಾ ಕೇಸ್‌ನಲ್ಲಿ ತಗಲ್ಲಾಕ್ಕೊಂಡಿದ್ದ. ಉಗ್ರ ಸಂಘಟನೆ ಹೆಸರಲ್ಲಿ ಪೊಲೀಸ್ ಕಮಿಷನರ್‌ಗೆ ಪತ್ರ ಬರೆದು ಸಿಕ್ಕಿ ಬಿದ್ದದ್ದ.